22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿ

ಕಣಿಯೂರು ಕುಂಡಗುರಿ ಶ್ರೀಧರ ಸಾವಿನ ಪ್ರಕರಣಸಮಗ್ರ ತನಿಖೆಗೆ ಮೃತನ ಸಹೋದರ ಆಗ್ರಹ

ಬೆಳ್ತಂಗಡಿ: ಕಣಿಯೂರು ಗ್ರಾಮದ ಕುಂಡಗುರಿ ನಿವಾಸಿ ಕೊರಗು ಎಂಬವರ ಪುತ್ರ ಶ್ರೀಧರ(೩೬ವ) ಎಂಬವರ ಅನುಮಾನಾಸ್ಪದ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಮೃತರ ಸಹೋದರ ಶಿವಪ್ರಸಾದ್ ಆಗ್ರಹಿಸಿದ್ದಾರೆ.


ಅವರು ಜ.೭ರಂದು ಬೆಳ್ತಂಗಡಿ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶ್ರೀಧರ ಅವರ ಶವ ಆಗಸ್ಟ್ ೨೬ರಂದು ಬೆಳಿಗ್ಗೆ
ನ್ಯಾಯತರ್ಪು ಗ್ರಾಮದ ಪಲ್ಲಾದೆ ಎಂಬಲ್ಲಿ ಕೆರೆಯಲ್ಲಿ ಅನುಮಾನಾಸ್ಪದವಾಗಿ ಪತ್ತೆಯಾಗಿತ್ತು. ಶ್ರೀಧರನ ಮೃತದೇಹದ ಹಣೆ ಭಾಗದಲ್ಲಿ ಏಟು ಬಿದ್ದ ಗಾಯವಿತ್ತು. ಕೈಕಾಲುಗಳು ಒರಟಾಗಿ ದೇಹದಿಂದ ಮೇಲೆತ್ತಿದ ರೀತಿಯಲ್ಲಿ ಮರಗಟ್ಟಿದ ಸ್ಥಿತಿಯಲ್ಲಿತ್ತು. ಕೆರೆಯಲ್ಲಿ ಶವವಾಗಿ ಪತ್ತೆಯಾದ
ಶ್ರೀಧರನ ಅನುಮಾನಾಸ್ಪದ ಸಾವಿನ ಪ್ರಕರಣದ ಬಗ್ಗೆ ದ.ಕ. ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿ, ನಾಲ್ಕು ತಿಂಗಳಿನಿಂದ ಪೊಲೀಸರ
ತನಿಖೆಗಾಗಿ ಕಾಯುತ್ತಿದ್ದೇವೆ. ಇದೀಗ ಮಾನವಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದೇವೆ. ಬೆಳ್ತಂಗಡಿ ಪೋಲೀಸರು ಸ್ಥಳಕ್ಕಾಗಮಿಸಿ ಸ್ಥಳ ಮಹಜರು ನಡೆಸಿ ಇಲಾಖಾ ಪ್ರಕ್ರಿಯೆ ನಡೆಸಿದ್ದರು ಎಂದು ತಿಳಿಸಿದರು.
ನಾನು ಎಸ್ಪಿಗೆ ದೂರು ನೀಡಿ ನಾಲ್ಕು ತಿಂಗಳುಗಳಾದರೂ ಪೊಲೀಸ್ ಇಲಾಖೆ ಪ್ರಕರಣದ ತನಿಖೆಗೆ ಸಂಬಂಧಿಸಿ ಯಾವ ಕ್ರಮಕೈಗೊಂಡಿದೆ ಎಂಬ ಬಗ್ಗೆ ನಮಗೆ ಯಾವುದೇ ಮಾಹಿತಿ ಇದುವರೆಗೂ ಬಂದಿಲ್ಲ. ಶ್ರೀಧರನ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಗಾಯದ ಬಗ್ಗೆ ಉಲ್ಲೇಖಿಸಲಾಗಿಲ್ಲ. ಆತನ ಸಾವಿನ ಬಗ್ಗೆ ಕೆಲ ಅನುಮಾನಗಳನ್ನು ವ್ಯಕ್ತಪಡಿಸಿ ನಾನು ದೂರಿನಲ್ಲಿ ತಿಳಿಸಿದ್ದೇನೆ. ಮುತ್ತರಾಜ್ ಎಂಬಾತ
ಶ್ರೀಧರನನ್ನು ಹುಡುಕೋಣ ಎಂದು ಹೇಳಿ ಕಾಡು ಪ್ರದೇಶವನ್ನು, ದಾಟಿ ಕೆರೆಯ ಬದಿಗೆ ಕರೆದುಕೊಂಡು ಬಂದು ಶ್ರೀಧರನ ಒಂದು ಜೊತೆ ಚಪ್ಪಲನ್ನು ತೋರಿಸಿ, ಮೀನು ಹಿಡಿಯಲು ಕಟ್ಟಿರುವ ಗಾಳ ಮತ್ತು ಶ್ರೀಧರನ ಮೃತದೇಹವನ್ನು ತೋರಿಸಿದ್ದಾನೆ. ಅವರು ಸೇರಿದಂತೆ ಕೆಲವರ ವರ್ತನೆಗಳ ಬಗ್ಗೆ ಅನುಮಾನ ನಮಗಿದೆ ಇದನ್ನು ದೂರಿನಲ್ಲಿ ತಿಳಿಸಿದ್ದೇವೆ. ಶ್ರೀಧರನ ಸಾವಿನಿಂದ ನೊಂದ ನಮ್ಮ ಕುಟುಂಬಕ್ಕೆ ಪೊಲೀಸ್ ಇಲಾಖೆ ಕೂಡಲೇ ಸ್ಪಂದಿಸಿ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸುವುದಾಗಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಂಬಂಧಿ ಶ್ರೀಧರ ಉಪಸ್ಥಿತರಿದ್ದರು.

Related posts

ಸೆ. 23: ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೃಹತ್ ರಕ್ತದಾನ ಶಿಬಿರ

Suddi Udaya

ಚಂದ್ರಯಾನ 3 ರ ಯಶಸ್ಸು ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಉಜಿರೆ ಹಾಗೂ ಉಜಿರೆ ನಾಗರಿಕರಿಂದ ವಿಜಯೋತ್ಸವ

Suddi Udaya

ಮಾಜಿ ಶಾಸಕ ಕೆ. ವಸಂತ ಬಂಗೇರ ರವರಿಗೆ ಅಂತಿಮ ನಮನ ಸಲ್ಲಿಸಿದ ಬಲ್ಯೋಟ್ಟು ಶ್ರೀ ವಿಖ್ಯಾತಾನಂದ ಸ್ವಾಮೀಜಿ

Suddi Udaya

ಶ್ರೀ ಧ.ಮಂ. ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಕಿಲ್ಲೂರಿನ ಶಾಲೆಯಲ್ಲಿ ಶೈಕ್ಷಣಿಕ ಕಾರ್ಯಕ್ರಮಗಳ ಆಯೋಜನೆ

Suddi Udaya

ಮೈಸೂರು ಜಿಲ್ಲಾ ನ್ಯಾಯಾಲಯದ ನೋಟರಿಗಳ ಕಟ್ಟಡಕ್ಕೆ ಶಂಕುಸ್ಥಾಪನೆ

Suddi Udaya

ಮುಂಡಾಜೆ ಪ.ಪೂ. ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ

Suddi Udaya
error: Content is protected !!