ಬೆಳ್ತಂಗಡಿ : ಜ್ಯೋತಿ ಆಸ್ಪತ್ರೆ ಬೆಳ್ತಂಗಡಿ ಇವರ ಆಶ್ರಯದಲ್ಲಿ ಧರ್ಮಸ್ಥಳ ಘಟಕದಲ್ಲಿ ತುರ್ತು ಸಂದರ್ಭದಲ್ಲಿ ಜೀವ ರಕ್ಷಕ ದ ಮಾಹಿತಿ ಕಾರ್ಯಕ್ರಮ ನಡೆಯಿತು.

ಘಟಕ ವ್ಯವಸ್ಥಾಪಕರಾದ ರಮ್ಯಾ ಕೆ ಎಮ್ ಜ್ಯೋತಿ ಬೆಳಗಿಸುವ ಮುಖಾಂತರ ಕಾರ್ಯಕ್ರಮ ಉದ್ಘಾಟಿಸಿದರು.

ಈ ವೇಳೆ ಡಾ| ರಕ್ಷಿತ್, ವಂದನಿಯ ಸಿ| ಅನ್ನ ಫ್ರಾನ್ಸಿಸ್, ಪ್ಯಾರಾಮೆಡಿಕಲ್ ಸಿಬ್ಬಂದಿ ಅನಿತಾ, ಪ್ರೋ. ವಿಷ್ಣು ಇವರು ಮಾಹಿತಿ ನೀಡಿದರು.
ರೋಶನ್ ವಾಲ್ಟರ್ ಸ್ವಾಗತಿಸಿ, ಮಲ್ಲಪ್ಪ ಹುಂಡರಗಲ್ಲು ವಂದಿಸಿದರು.











