22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಪಡಂಗಡಿ : ಕುಂಡದಬೆಟ್ಟು ಹಿಂದೂ ಸಂಗಮದ ಆಮಂತ್ರಣ ಪತ್ರಿಕೆ ಬಿಡುಗಡೆ

ಪಡಂಗಡಿ: ಕುಂಡದಬೆಟ್ಟು ಹಿಂದೂ ಸಂಗಮ ಆಯೋಜನಾ ಸಮಿತಿ ಪಡಂಗಡಿ ಮಂಡಲ ವತಿಯಿಂದ ನಡೆಯುವ ಹಿಂದೂ ಸಂಗಮ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಹಿರಿಯ ಸ್ವಯಂ ಸೇವಕ ಮಲ್ಲಿನಾಥ ರವರು ಜ.12ರಂದು ಬಿಡುಗಡೆಗೊಳಿಸಿ ಶುಭಹಾರೈಸಿದರು.

ಫೆ.1ರಂದು ಅಪರಾಹ್ನ ಗಂಟೆ 3.00 ಕ್ಕೆ ಹಿಂದೂ ಸಂಗಮ ಕಾರ್ಯಕ್ರಮವು ಮಂಜುಶ್ರೀ ಭಜನಾ ಮಂದಿರ ಕುಂಡದಬೆಟ್ಟು ಇಲ್ಲಿ ನಡೆಯಲಿದೆ. ಶೋಭಾಯಾತ್ರೆಯು ಗೋಳಿಯಂಗಡಿ ಎಸ್.ಡಿ.ಎಂ. ಐಟಿಐ ನಿಂದ ಮಂಜುಶ್ರೀ ಭಜನಾ ಮಂದಿರದವರೆಗೆ ನಡೆಯಲಿದೆ. ಸಭಾ ಕಾರ್ಯಕ್ರಮವನ್ನು ಧರ್ಮಸ್ಥಳ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನಮ್ ಜಗದ್ಗುರು ಪೀಠದ ಪೀಠಾಧೀಶರಾದ 1008 ಮಹಾಮಂಡಲೇಶ್ವರ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಸಭಾಧ್ಯಕ್ಷತೆಯನ್ನು ದ.ಕ.ಜಿಲ್ಲಾ ಪರವನ್ ಸಂಘ ಉಪಾಧ್ಯಕ್ಷ ಎಚ್. ಪದ್ಮ ಹಚ್ಚೇವುಪಲ್ಕೆ ವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಪ್ರಮುಖರಾದ ಕೆ.ವೈ ಈಶ್ವರ ಭಟ್ , ಸೋಮನಾಥ ಕೆವೈ , ಶಿವಾನಂದ, ಸಂತೋಷ್ ಜೈನ್, ಪ್ರಕಾಶ ಪುರೋಹಿತ್, ಸಂತೋಷ್ ಜೈನ್ ಪಡಂಗಡಿ, ರತ್ನಾಕರ ಬರ್ಕರೆ, ಅನಿಲ್ ಹೆಗ್ಡೆ ಪಡಂಗಡಿ, ಮಂಡಲದ ಹಿಂದೂ ಸಂಘ ಸಮಿತಿ ಅಧ್ಯಕ್ಷ ಪ್ರಸನ್ನ ಹೆಬ್ಬಾರ್, ಆನಂದ ಎನ್, ರವಿ ಭಟ್, ರೋಹಿತ್ ಸಂಬಿಬೆಟ್ಟ, ದಿನಕರ ಕುಲಾಲ್, , ಶೀನ ಪೂಜಾರಿ, ಧರ್ಣಪ್ಪ , ಭರತ್ ರಾಜ್ ಆಮೈ, ನಿರಂಜನ ಪಾರೊಟ್ಟು ಉಪಸ್ಥಿತರಿದ್ದರು.

Related posts

ಅಳದಂಗಡಿ ಶ್ರೀ ಸೋಮನಾಥೇಶ್ವರಿ ಮಕ್ಕಳ ಕುಣಿತ ಭಜನಾ ಮಂಡಳಿಯ ಪದಾಧಿಕಾರಿಗಳ ಆಯ್ಕೆ

Suddi Udaya

ವೈಬ್ರೆಂಟ್ ಕಾಲೇಜಿನಲ್ಲಿ ಪೋಕ್ಸೋ ಕಾಯಿದೆ ಕುರಿತು ಮಾಹಿತಿ ಕಾರ್ಯಾಗಾರ

Suddi Udaya

ಕಣಿಯೂರು ಕುಂಡಗುರಿ ಶ್ರೀಧರ ಸಾವಿನ ಪ್ರಕರಣಸಮಗ್ರ ತನಿಖೆಗೆ ಮೃತನ ಸಹೋದರ ಆಗ್ರಹ

Suddi Udaya

ನೆರಿಯ: ರಸ್ತೆ ರಿಪೇರಿ ಮಾಡಿ ಮಾದರಿಯಾದ ಅಧ್ಯಾಪಕ ತಮ್ಮಯ್ಯ

Suddi Udaya

ಬ್ಲಾಕ್ ಕಾಂಗ್ರೆಸ್ ಬೆಳ್ತಂಗಡಿ ನಗರ ಮತ್ತು ಗ್ರಾಮೀಣ ಸಮಿತಿಗಳ ವತಿಯಿಂದ ‘ಮತಕಳ್ಳರೇ ಅಧಿಕಾರ ಬಿಟ್ಟು ತೊಲಗಿ’ ಪ್ರತಿಭಟನೆ

Suddi Udaya

ಬಿ.ಎಡ್. ಪರೀಕ್ಷೆ: ಉಜಿರೆ ಎಸ್.ಡಿ.ಎಂ. ಶಿಕ್ಷಣ ಮಹಾವಿದ್ಯಾಲಯಕ್ಕೆ ಶೇ.100 ಫಲಿತಾಂಶ

Suddi Udaya
error: Content is protected !!