ಶಿಬಾಜೆ: ಶಿಬಾಜೆ ಶತ ಚಂಡಿಕಾ ಯಾಗ ಸಮಿತಿಯಿಂದ ಶೃಂಗೇರಿಯ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಯವರನ್ನು ಭೇಟಿ ಮಾಡಿ ಮೊಂಟೆತ್ತಡ್ಕ ದುರ್ಗಾ ಪರಮೇಶ್ವರಿ ದೇವರ ಸನ್ನಿದಾನದಲ್ಲಿ ಫೆ. 5ಮತ್ತು 6ರಂದು ಶತ ಚಂಡಿಕಾ ಯಾಗದ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಲಾಯಿತು.
ಈ ಸಂದರ್ಭದಲ್ಲಿ ಯಾಗ ಸಮಿತಿಯ ಕಾರ್ಯಧ್ಯಕ್ಷ ಗಣೇಶ್ ಬಿ. ಗೋಖಲೆ, ಸಹಸಂಚಾಲಕ ಚೆನ್ನಪ್ಪ ಗೌಡ, ಯಾಗದ ಆಚಾರ್ಯರಾದ ಅಂಶುಮಾನು ಅಭ್ಯಂಕರ್ ದರ್ಬೆತ್ತಡ್ಕ, ಪ್ರಚಾರ ಸಮಿತಿಯ ಸಂಚಾಲಕರಾದ ವೃಶಾಂಕ್ ಖಾಡಿಲ್ಕರ್, ಶೃಂಗೇರಿಯ ಶಶಾಂಕ್ ಖಾಡಿಲ್ಕರ್ ಉಪಸ್ಥಿತರಿದ್ದರು.











