ಗುರುವಾಯನಕೆರೆ: ಇಲ್ಲಿಯ ಯಡೂ೯ರು ಎಂಬಲ್ಲಿ ಯುವಕರೋವ೯ರು ಮನೆಯೊಳಗಡೆ ಕವಚಿಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಲೆಯ ಭಾಗದಿಂದ ನೆತ್ತರು ನೆಲದಲ್ಲಿ ಹರಿದು ಹೋಗಿರುವುದು ಕಂಡು ಬಂದಿದೆ.
ಯಡೂ೯ರಿನ ದಿ. ಶ್ರೀಧರ ಭಟ್ ಮತ್ತು ಶ್ರೀಮತಿ ಗೀತಾ ದಂಪತಿ ಪುತ್ರ ಮುರಳೀಧರ ಭಟ್ (35ವ) ಮನೆಯೊಳಗೆ ಕವಚಿ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮುರಳೀಧರ ಭಟ್ ಅವರ ತಾಯಿ ಗೀತಾ ಭಟ್ ಅವರು ಕಾಲಿನ ಆಪರೇಷನ್ ಆಗಿ ತಮ್ಮ ಮಗಳ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದು, ಮನೆಯಲ್ಲಿ ಮುರಳೀಧರ ಭಟ್ ಒಬ್ಬರೇ ಇದ್ದರೆನ್ನಲಾಗಿದೆ. ಮನೆಯ ಒಳಗಿನಿಂದ ಲಾಕ್ ಮಾಡಲಾಗಿದ್ದು, ಒಳಗಡೆ ಫ್ಯಾನ್ ತಿರುಗುತ್ತಿದೆ. ಮುರಳೀಧರ ಭಟ್ ಒಬ್ಬರೇ ರಾತ್ರಿ ಮನೆಯಲ್ಲಿ ಇದ್ದುದರಿಂದ ಘಟನೆ ಏನಾಗಿದೆ ಎಂಬ ಮಾಹಿತಿ ಯಾರಿಗೂ ಗೊತ್ತಾಗಿಲ್ಲ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಆದರೆ ಮನೆಗೆ ಒಳಗಿನಿಂದ ಲಾಕ್ ಹಾಕಿರುವುದರಿಂದ ಇದರ ತೆರವು ಕಾರ್ಯಾಚರಣೆ ನಡೆಸಲು ತಯಾರಿ ನಡೆಸಲಾಗುತ್ತಿದೆ.











