ಬೆಳ್ತಂಗಡಿ: ಎಕ್ಸೆಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ರವರಿಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಶ್ರೀ ರಾಮಾಂಜನೇಯ ದೇವಸ್ಥಾನ ಆಂಜನೇಯ ಬೆಟ್ಟ ಕಾನರ್ಪ ಕಡಿರುದ್ಯಾವರದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಶಿಕ್ಷಣ ಕ್ಷೇತ್ರದಲ್ಲಿ, ವಿಶೇಷವಾಗಿ ಬೆಳ್ತಂಗಡಿ ಪ್ರದೇಶದಲ್ಲಿ, ಎಕ್ಸೆಲ್ ಪದವಿ ಪೂರ್ವ ಕಾಲೇಜು ಸ್ಥಾಪಿಸಿ, ಗ್ರಾಮೀಣ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದ್ದು ಬಡತನದಲ್ಲಿ ಬೆಳೆದು ಬಂದ ಇವರು, ಶಿಕ್ಷಣದ ಮೂಲಕ ಕ್ರಾಂತಿ ಮಾಡುವ ಕನಸು ಕಂಡಿದ್ದು, ಇವರ ಸೇವೆಯನ್ನು ಗುರುತಿಸಿ ವಿಜಯರತ್ನ ಪ್ರಶಸ್ತಿಯನ್ನು ಪಡೆದಿದ್ದಾರೆ.
ಈ ಸಂದರ್ಭದಲ್ಲಿ ಶ್ರೀಧರ ಬಿಡೆ, ಪಿತಾಂಬರ ಹೇರಾಜೆ, ಬಾಬು ಪೂಜಾರಿ ಕೂಳೂರು, ಫಿಲೋಮಿನಾ ಸಿ.ಜೆ, ವಿಶ್ವನಾಥ ಶೆಟ್ಟಿ ಮುಂಡಾಜೆ, ಬಿ.ಕೆ ಗೋವಿಂದ ದುಂಬೆಟ್ಟು, ರಾಜೇಶ್ ಗೌಡ ಹೇಡ್ಯ, ಕಿಶೋರ್ ಕುಮಾರ್, ಕಿರಣ್ ಕುಮಾರ್ ಉಪಸ್ಥಿತರಿದ್ದರು.











