ಗೇರುಕಟ್ಟೆ: ಇಲ್ಲಿಯ ಕೊರಂಜ ನಿವಾಸಿ ಉಪ್ಪಿನಂಗಡಿಯಲ್ಲಿ ರಿಕ್ಷಾ ಚಾಲಕನಾಗಿರುವ ಎಂ.ಕೆ.ಶರೀಪುದ್ದೀನ್ (53 ವರ್ಷ) ರವರು ಜ.19ರಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಇವರು ಕುಟುಂಬ ಸಮೇತರಾಗಿ ಉತ್ತರ ಕರ್ನಾಟಕದ ಗದಗದ ಲಕ್ಷ್ಮೇಶ್ವರ ದರ್ಗಾ ಝಿಯಾರತ್ ಗೆ ಹೋದಾಗ ಇಂದು ಬೆಳಗ್ಗಿನ ಜಾವ ರೂಮ್ ನಲ್ಲಿ ಮಲಗಿದ್ದಾಗ ಎದೆನೋವು ಕಾಣಿಸಿಕೊಂಡಿತು. ತಕ್ಷಣ ಸ್ಥಳೀಯ ಆಸ್ಪತ್ರೆಯಲ್ಲಿ ತೋರಿಸಿದಾಗ ಮೃತಪಟ್ಟಿದ್ದಾರೆಂದು ವೈದ್ಯರು ತಿಳಿಸಿದರು.
ಮೃತರು ತಾಯಿ, ಐವರು ಸಹೋದರರು, ಇಬ್ಬರು ಸಹೋದರಿಯರು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.











