July 23, 2026
ಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ದಯಾ ವಿಶೇಷ ಶಾಲೆಯಲ್ಲಿ ಶ್ರವಣ ಮೌಲ್ಯಮಾಪನ ಮತ್ತು ಶ್ರವಣ ಸಾಧನ ಪ್ರೋಗ್ರಾಮಿಂಗ್ ಕಾರ್ಯಕ್ರಮ

ಲಾಯಿಲ: ದಯಾ ವಿಶೇಷ ಶಾಲೆಯಲ್ಲಿ ಶ್ರವಣ ಮೌಲ್ಯಮಾಪನ ಮತ್ತು ಶ್ರವಣ ಸಾಧನ ಪ್ರೋಗ್ರಾಮಿಂಗ್ ಕಾರ್ಯಕ್ರಮವನ್ನು
ನಡೆಸಲಾಯಿತು.

ಕಾರ್ಯಕ್ರಮವನ್ನು ಶ್ರವಣಶಾಸ್ತ್ರಜ್ಞ ಮತ್ತು ಐಡಿಯಲ್ ಸ್ಪೀಚ್ ಮತ್ತು ಹಿಯರಿಂಗ್ ಸೊಲ್ಯೂಷನ್ಸ್ ನ ಸಂಸ್ಥಾಪಕ ರಿತೇಶ್ ಗೋನ್ಸಾಲ್ವಿಸ್ ನಡೆಸಿಕೊಟ್ಟರು. ಶ್ರವಣ ದೋಷವುಳ್ಳ ಮಕ್ಕಳ ಶ್ರವಣ ಸಾಮರ್ಥ್ಯವನ್ನು ಗುರುತಿಸುವುದು ಮತ್ತು ಅಗತ್ಯವಾದ ಶ್ರವಣ ಸಾಧನ ಪ್ರೋಗ್ರಾಮಿಂಗ್ ಹಾಗೂ ಫಿಟ್ಟಿಂಗ್ ಗಳನ್ನು ಒದಗಿಸುವುದು ಹಾಗೂ ಶ್ರವಣದೋಷವಿರುವ ಮಕ್ಕಳನ್ನು ಮುಂಚಿತವಾಗಿ ಗುರುತಿಸಿ ಸೂಕ್ತ ಹಸ್ತಕ್ಷೇಪದ ಮೂಲಕ ಮಕ್ಕಳ ಸಮಸ್ಯೆಯನ್ನು ಬಗೆಹರಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು.

ಕಾರ್ಯಕ್ರಮದಲ್ಲಿ ಒಟ್ಟು 05 ಮಕ್ಕಳಿಗೆ ಶ್ರವಣ ಮೌಲ್ಯಮಾಪನವನ್ನು ನಡೆಸಿ, ಶ್ರವಣ ದೋಷವಿರುವ 03 ವಿಶೇಷ ಚೇತನ ಮಕ್ಕಳಿಗೆ ದಾನಿಯೊಬ್ಬರಿಂದ ನೀಡಲ್ಪಟ್ಟ ಶ್ರವಣ ಸಾಧನಗಳನ್ನು ಅಳವಡಿಸಲಾಯಿತು.
ಶಾಲಾ ಶ್ರವಣಶಾಸ್ತ್ರಜ್ಞ ಮತ್ತು ಸ್ಪೀಚ್ ಥೆರಪಿಸ್ಟ್ ರಕ್ಷಾ ಅರುಣ್ ಪೂಜಾರಿ ಹಾಗೂ ಎಮ್.ವಿ.ಶೆಟ್ಟಿ ಕಾಲೇಜು ಮಂಗಳೂರು ಇಲ್ಲಿನ ಮೂವರು ಇಂಟರ್ನ್ಸ್ಗಳಾದ ಕಾವೇರಿ ಮತ್ತು ಶಿರ್ಲಿ ಉಪಸ್ಥಿತರಿದ್ದರು.

Related posts

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ ವೇಣೂರು ಸರಕಾರಿ ಪದವಿ ಪೂರ್ವ ಕಾಲೇಜಿಗೆ (ಪ್ರೌಢಶಾಲಾ ವಿಭಾಗ) 1 ಲಕ್ಷ ರೂ. ನೆರವು

Suddi Udaya

ಅಂಡಿಂಜೆ: ನಾರಾವಿ ಮತ್ತು ಅಳದಂಗಡಿ ಬಿಜೆಪಿ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಮಾವೇಶ: ಬಿಜೆಪಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಭೇಟಿ

Suddi Udaya

ನಾಪತ್ತೆಯಾದ ಮಾಲಾಡಿ ನಿವಾಸಿ, ಬಂಟ್ವಾಳ ಅಮ್ಟಾಡಿ ಗ್ರಾ.ಪಂ. ಕಾರ್ಯದರ್ಶಿ ಲಕ್ಷ್ಮೀನಾರಾಯಣ; ನಾಲ್ಕು ದಿನಗಳ ಬಳಿಕ ಶವ ಪಟ್ರಮೆ ನದಿಯಲ್ಲಿ ಪತ್ತೆ: ಮೃತದೇಹವನ್ನು ಮೇಲೆತ್ತಿದ ಶೌರ್ಯ ವಿಪತ್ತು ನಿವ೯ಹಣಾ ತಂಡ

Suddi Udaya

ಜು.5: ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ

Suddi Udaya

ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

Suddi Udaya

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವೀಲ್ ಚೆಯರ್ ವಿತರಣೆ

Suddi Udaya
error: Content is protected !!