ಬೆಳ್ತಂಗಡಿ: ಮಡಂತ್ಯಾರು ಗ್ರಾಮ ಪಂಚಾಯತ್ ಕಲಿಕಾ ಕೇಂದ್ರದಲ್ಲಿ ಮಕ್ಕಳ ಗ್ರಾಮ ಸಭೆಯನ್ನು ಜ 20ರಂದು ನಡೆಸಲಾಯಿತು.
ಸಭಾಧ್ಯಕ್ಷತೆಯನ್ನು ಕೆಪಿಎಸ್ ಪುಂಜಾಲಕಟ್ಟೆಯ ವಿದ್ಯಾರ್ಥಿ ಹಂಶಿಕ್ ವಹಿಸಿದ್ದರು.

ಸಂಪನ್ಮೂಲ ವ್ಯಕ್ತಿಗಳಾಗಿ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಅಮ್ಮಿ ಸಿಸ್ಟರ್,ಆರ್ಥಿಕ ಸಮಾಲೋಚಕರು ಸಂಪನ್ಮೂಲ ಕೇಂದ್ರ ಬೆಳ್ತಂಗಡಿ ಉಷಾ ಕಾಮತ್ ಭಾಗವಹಿಸಿದರು.
ವೇದಿಕೆಯಲ್ಲಿ ಮಡಂತ್ಯಾರು ಗ್ರಾ.ಪಂ ಅಧ್ಯಕ್ಷೆ ರೂಪಾ ಎ ಎಸ್, ಉಪಾಧ್ಯಕ್ಷರಾದ ಗೋಪಾಲಕೃಷ್ಣ ಕೆ, ಸದಸ್ಯರುಗಳಾದ ಶಶಿಪ್ರಭಾ, ಸಂಗೀತಾ ಶೆಟ್ಟಿ,ಕಿಶೋರ್ ಕುಮಾರ್ ಶೆಟ್ಟಿ,ರಾಜೀವ ಪೂಜಾರಿ,ವಿಶ್ವನಾಥ ಪೂಜಾರಿ ಉಪಸ್ಥಿತರಿದ್ದರು.
ಪಿಡಿಓ ಶ್ರೀನಿವಾಸ ಡಿ ಪಿ ಸ್ವಾಗತಿಸಿ, ನಿರೂಪಿಸಿದರು.ಗ್ರಂಥಾಲಯ ಮೇಲ್ವಿಚಾರಕರಾದ ಸರೋಜಿನಿ ಬಿ ವಂದಿಸಿದರು. ಕೆಪಿಎಸ್ ಪುಂಜಾಲಕಟ್ಟೆ, ಸೇಕ್ರೆಡ್ ಹಾರ್ಟ್ ಸ್ಕೂಲ್ ,ಗಾರ್ಡಿಯನ್ ಎಂಜಲ್ಸ್ ಹಿ.ಪ್ರಾ ಶಾಲೆ ,ಸ.ಹಿ.ಪ್ರಾ.ಶಾಲೆ ಕುಂಜತ್ತೋಡಿ ಇಲ್ಲಿನ ವಿದ್ಯಾರ್ಥಿಗಳು ಮತ್ತು ಶಿಕ್ಷಕರು,ಗ್ರಾ.ಪಂ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.











