September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿಯಲ್ಲಿ ರಥಸಪ್ತಮಿಯ ಪ್ರಯುಕ್ತ 108 ಸಾಮೂಹಿಕ ಸೂರ್ಯ ನಮಸ್ಕಾರ

ಬೆಳ್ತಂಗಡಿ : ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ, ನೇತ್ರಾವತಿ ವಲಯ, ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ ದ.ಕ.ಜಿಲ್ಲೆಯ ಸುಮಾರು 16 ದೇವಾಲಯಗಳಲ್ಲಿ ಜ.25ರಂದು ರಥಸಪ್ತಮಿಯ ಪ್ರಯುಕ್ತ 108 ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಪ್ರಯುಕ್ತ ಜಿಲ್ಲಾ ಸಮಿತಿಯ ಮಾರ್ಗದರ್ಶನದೊಂದಿಗೆ ಬೆಳ್ತಂಗಡಿ ತಾಲೂಕಿನ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ದಿವ್ಯಸಾನಿಧ್ಯದಲ್ಲಿ ಸಮಿತಿಯ ಕಾರ್ಯಕ್ರಮ ನಡೆಯಿತು.


ಕುತ್ಯಾರು ಕ್ಷೇತ್ರದ ಪ್ರಧಾನ ಅರ್ಚಕರಾದ ಸತೀಶ್ ಭಟ್ ಇವರು ದೀಪ ಪ್ರಜ್ವಲನ ಮಾಡಿ ಶುಭಹಾರೈಸಿದರು. ವೇದಿಕೆಯಲ್ಲಿ ಕ್ಷೇತ್ರದ ಆಡಳಿತ ಮಂಡಳಿಯ ಸುಬ್ರಾಯ ಡೋಂಗ್ರೆ, ವಾಣಿ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶಂಕರ್ ರಾವ್, ಕಾರ್ಯಕ್ರಮದ ಸಂಚಾಲಕ ಸಂತೋಷ್ ಎಸ್ ಹಾಗೂ ಮುಖ್ಯಶಿಕ್ಷಕಿ ಶ್ರೀಮತಿ ಪ್ರೇಮಲತಾ ಗಣೇಶ್ ಉಪಸ್ಥಿತರಿದ್ದರು.

ಶಂಖನಾದ ಮತ್ತು ರಘುನಾಥ ಶಾಂತಿ ಹಾಗೂ ಶಿವಣ್ಣ ನವರ ಭಜನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮವು 3 ಆವೃತ್ತಿಗಳ 108 ಸೂರ್ಯ ನಮಸ್ಕಾರಗಳೊಂದಿಗೆ ಸಂಪನ್ನಗೊಂಡಿತು. ವಿವರಣೆಯನ್ನು ಯೋಗ ಬಂಧುಗಳಾದ ಶ್ರೀಮತಿ ರವಿಕಲಾ, ಗಣಪತಿ ಭಟ್, ಮಂಜಣ್ಣ ಇವರುಗಳು ನೀಡಿದರೆ. ಪ್ರಾತ್ಯಕ್ಷಿಕೆಯಲ್ಲಿ ಶ್ರೀಮತಿ ನಾಗಶ್ರೀ, ಶ್ರೀಮತಿ ಗೀತಾ, ಶ್ರೀಮತಿ ಪುಷ್ಪ, ಪುನೀತ್, ಪ್ರಗತ್ , ಪ್ರಶಾಂತ್ ಇವರು ಸಹಕರಿಸಿದರು.108 ಮಂತ್ರಗಳನ್ನು ಸತೀಶ್ ಪಠಿಸಿದರು. ರಥಸಪ್ತಮಿಯ ವಿಶೇಷತೆಯ ಬಗ್ಗೆ ಹಾಗೂ ಸೂರ್ಯ ನಮಸ್ಕಾರದ ಮಹತ್ವದ ಬಗ್ಗೆ ಬೌದ್ಧಿಕವನ್ನು ಸಂತೋಷ್ ಎಸ್ ನಡೆಸಿಕೊಟ್ಟರು.

ಸೂರ್ಯೋದಯದ ಅವಧಿಯಲ್ಲಿ ಅಗ್ನಿಹೋತ್ರವನ್ನು ಶ್ರೀಮತಿ ಕೋಮಲ ಹಾಗೂ ಪ್ರಕಾಶ್ ದಂಪತಿಗಳು ನಿರ್ವಹಿಸಿದರು. ಯೋಗ ನಮಸ್ಕಾರದ ಆರಂಭದ ಮಾನಸಿಕ ಸಿದ್ಧತೆ ಹಾಗೂ ಉಸಿರಾಟ ಕ್ರಿಯೆಗಳನ್ನು ಯೋಗಬಂಧು ರಕ್ಷಿತಾ ಹಾಗೂ ಅಮೃತಾಸನವನ್ನು ಮುಖ್ಯಶಿಕ್ಷಕಿ ಶ್ರೀಮತಿ ಪ್ರೇಮಲತಾ ಗಣೇಶ್ ನಡೆಸಿಕೊಟ್ಟರು. ಕಾರ್ಯಕ್ರಮದ ಸಂಚಾಲಕರಾಗಿ ಸಂತೋಷ್ ಎಸ್ ಹಾಗೂ ಸಹ ಸಂಚಾಲಕರಾಗಿ ಧೀರಜ್, ಶಿಕ್ಷಣ ವಿಧಿಯ ಮಾರ್ಗದರ್ಶಕರಾಗಿ ಸಂತೋಷ್ ಕಾಪಿನಡ್ಕ ಹಾಗೂ ಕೋಮಲ ಜವಾಬ್ದಾರಿಯನ್ನು ನಿರ್ವಹಿಸಿದರು. ಅಶ್ವಥ್ ಕಾರ್ಯಕ್ರಮವನ್ನು ನಿರೂಪಿಸಿ , ಸುರೇಶ್ ಸ್ವಾಗತಿಸಿ, ಧೀರಜ್ ವಂದಿಸಿದರು.

Related posts

ಬ್ಲಾಕ್ ಜಾಕ್ ಪ್ರೊಡಕ್ಟ್ ಪಿಚ್ಚಿಂಗ್ ಸ್ಪರ್ಧೆ: ವಾಣಿ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಥಮ ಸ್ಥಾನ

Suddi Udaya

ಕರಾಯ: ಖಂಡಿಗ ನಿವಾಸಿ ಅಣ್ಣಿ ಗೌಡ ನಿಧನ

Suddi Udaya

ಬೆಳ್ತಂಗಡಿ ಧರ್ಮಾಧ್ಯಕ್ಷರಾದ ಲಾರೆನ್ಸ್ ಮುಕ್ಕುಝಿಯವರನ್ನು ಭೇಟಿಯಾದ ಎಸ್‌ಡಿಪಿಐಯ ಜಿಲ್ಲಾ ನಾಯಕರು

Suddi Udaya

10 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ವೇಣೂರು ಪೊಲೀಸರು

Suddi Udaya

ಬೆಳ್ತಂಗಡಿ ಭಾರತ್ ಆಟೋ ಕಾರ್‍ಸ್ ಶೋರೂಮ್ ನಲ್ಲಿ ಡ್ಯಾಜ್ಲಿಂಗ್‌ ನ್ಯೂ ಡಿಜೈರ್ ಕಾರು ಮಾರುಕಟ್ಟೆಗೆ

Suddi Udaya

ಬೆಳ್ತಂಗಡಿ: ಎಸ್.ಕೆ ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್‌ ಸೊಸೈಟಿಯ ವಜ್ರಮಹೋತ್ಸವ ಆಚರಣೆಯ ಪ್ರಯುಕ್ತ ಗ್ರಾಹಕರ ಸಮಾವೇಶ ಮತ್ತು ವೈದ್ಯಕೀಯ ತಪಾಸಣಾ ಶಿಬಿರ

Suddi Udaya
error: Content is protected !!