July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿಯಲ್ಲಿ ರಥಸಪ್ತಮಿಯ ಪ್ರಯುಕ್ತ 108 ಸಾಮೂಹಿಕ ಸೂರ್ಯ ನಮಸ್ಕಾರ

ಬೆಳ್ತಂಗಡಿ : ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ, ನೇತ್ರಾವತಿ ವಲಯ, ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ ದ.ಕ.ಜಿಲ್ಲೆಯ ಸುಮಾರು 16 ದೇವಾಲಯಗಳಲ್ಲಿ ಜ.25ರಂದು ರಥಸಪ್ತಮಿಯ ಪ್ರಯುಕ್ತ 108 ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಪ್ರಯುಕ್ತ ಜಿಲ್ಲಾ ಸಮಿತಿಯ ಮಾರ್ಗದರ್ಶನದೊಂದಿಗೆ ಬೆಳ್ತಂಗಡಿ ತಾಲೂಕಿನ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ದಿವ್ಯಸಾನಿಧ್ಯದಲ್ಲಿ ಸಮಿತಿಯ ಕಾರ್ಯಕ್ರಮ ನಡೆಯಿತು.


ಕುತ್ಯಾರು ಕ್ಷೇತ್ರದ ಪ್ರಧಾನ ಅರ್ಚಕರಾದ ಸತೀಶ್ ಭಟ್ ಇವರು ದೀಪ ಪ್ರಜ್ವಲನ ಮಾಡಿ ಶುಭಹಾರೈಸಿದರು. ವೇದಿಕೆಯಲ್ಲಿ ಕ್ಷೇತ್ರದ ಆಡಳಿತ ಮಂಡಳಿಯ ಸುಬ್ರಾಯ ಡೋಂಗ್ರೆ, ವಾಣಿ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶಂಕರ್ ರಾವ್, ಕಾರ್ಯಕ್ರಮದ ಸಂಚಾಲಕ ಸಂತೋಷ್ ಎಸ್ ಹಾಗೂ ಮುಖ್ಯಶಿಕ್ಷಕಿ ಶ್ರೀಮತಿ ಪ್ರೇಮಲತಾ ಗಣೇಶ್ ಉಪಸ್ಥಿತರಿದ್ದರು.

ಶಂಖನಾದ ಮತ್ತು ರಘುನಾಥ ಶಾಂತಿ ಹಾಗೂ ಶಿವಣ್ಣ ನವರ ಭಜನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮವು 3 ಆವೃತ್ತಿಗಳ 108 ಸೂರ್ಯ ನಮಸ್ಕಾರಗಳೊಂದಿಗೆ ಸಂಪನ್ನಗೊಂಡಿತು. ವಿವರಣೆಯನ್ನು ಯೋಗ ಬಂಧುಗಳಾದ ಶ್ರೀಮತಿ ರವಿಕಲಾ, ಗಣಪತಿ ಭಟ್, ಮಂಜಣ್ಣ ಇವರುಗಳು ನೀಡಿದರೆ. ಪ್ರಾತ್ಯಕ್ಷಿಕೆಯಲ್ಲಿ ಶ್ರೀಮತಿ ನಾಗಶ್ರೀ, ಶ್ರೀಮತಿ ಗೀತಾ, ಶ್ರೀಮತಿ ಪುಷ್ಪ, ಪುನೀತ್, ಪ್ರಗತ್ , ಪ್ರಶಾಂತ್ ಇವರು ಸಹಕರಿಸಿದರು.108 ಮಂತ್ರಗಳನ್ನು ಸತೀಶ್ ಪಠಿಸಿದರು. ರಥಸಪ್ತಮಿಯ ವಿಶೇಷತೆಯ ಬಗ್ಗೆ ಹಾಗೂ ಸೂರ್ಯ ನಮಸ್ಕಾರದ ಮಹತ್ವದ ಬಗ್ಗೆ ಬೌದ್ಧಿಕವನ್ನು ಸಂತೋಷ್ ಎಸ್ ನಡೆಸಿಕೊಟ್ಟರು.

ಸೂರ್ಯೋದಯದ ಅವಧಿಯಲ್ಲಿ ಅಗ್ನಿಹೋತ್ರವನ್ನು ಶ್ರೀಮತಿ ಕೋಮಲ ಹಾಗೂ ಪ್ರಕಾಶ್ ದಂಪತಿಗಳು ನಿರ್ವಹಿಸಿದರು. ಯೋಗ ನಮಸ್ಕಾರದ ಆರಂಭದ ಮಾನಸಿಕ ಸಿದ್ಧತೆ ಹಾಗೂ ಉಸಿರಾಟ ಕ್ರಿಯೆಗಳನ್ನು ಯೋಗಬಂಧು ರಕ್ಷಿತಾ ಹಾಗೂ ಅಮೃತಾಸನವನ್ನು ಮುಖ್ಯಶಿಕ್ಷಕಿ ಶ್ರೀಮತಿ ಪ್ರೇಮಲತಾ ಗಣೇಶ್ ನಡೆಸಿಕೊಟ್ಟರು. ಕಾರ್ಯಕ್ರಮದ ಸಂಚಾಲಕರಾಗಿ ಸಂತೋಷ್ ಎಸ್ ಹಾಗೂ ಸಹ ಸಂಚಾಲಕರಾಗಿ ಧೀರಜ್, ಶಿಕ್ಷಣ ವಿಧಿಯ ಮಾರ್ಗದರ್ಶಕರಾಗಿ ಸಂತೋಷ್ ಕಾಪಿನಡ್ಕ ಹಾಗೂ ಕೋಮಲ ಜವಾಬ್ದಾರಿಯನ್ನು ನಿರ್ವಹಿಸಿದರು. ಅಶ್ವಥ್ ಕಾರ್ಯಕ್ರಮವನ್ನು ನಿರೂಪಿಸಿ , ಸುರೇಶ್ ಸ್ವಾಗತಿಸಿ, ಧೀರಜ್ ವಂದಿಸಿದರು.

Related posts

ಧರ್ಮಸ್ಥಳ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರ ಅವಿರೋಧ ಆಯ್ಕೆ

Suddi Udaya

ಬೆಳ್ತಂಗಡಿ ಶಾಸಕ ಹರೀಶ್ ಪೂಂಜರ ಮನವಿಗೆ ಕೆಎಸ್ ಆರ್ ಟಿ ಸಿ ಸ್ಪಂದನೆ: ಆ.25 ಧರ್ಮಸ್ಥಳದಿಂದ ನಾರಾವಿಗೆ ಸರ್ಕಾರಿ ಬಸ್ ಪ್ರಾರಂಭ

Suddi Udaya

ಸಂಜಯ್ ಗ್ಲೋಬಲ್ ಫೌಂಡೇಶನ್ ವತಿಯಿಂದ ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ 8ನೇ ಸ್ಥಾನ ಗಳಿಸಿದ ಕೌಶಿಕ್ ಶೆಟ್ಟಿಯವರಿಗೆ ಸನ್ಮಾನ

Suddi Udaya

ಬೆಳ್ತಂಗಡಿ ತಾಲೂಕು ಆಡಳಿತ ಸೌಧದಲ್ಲಿ ವಿಶ್ವಕರ್ಮ ಜಯಂತಿ ಆಚರಣೆ

Suddi Udaya

ಪುದುವೆಟ್ಟು ಶ್ರೀ ಧ.ಮಂ.ಅ.ಹಿ.ಪ್ರಾ. ಶಾಲೆಯಲ್ಲಿ ಗಾಂಧಿ ಜಯಂತಿ ಆಚರಣೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಂಪೂರ್ಣ ಸುರಕ್ಷಾ ಚೆಕ್ ವಿತರಣೆ

Suddi Udaya
error: Content is protected !!