
ಬೆಳ್ತಂಗಡಿ: ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ದ.ಕ ಜಿಲ್ಲೆ ಬೆಳ್ತಂಗಡಿ ಘಟಕದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ವನ್ನು ಜಿಲ್ಲಾ ಗೌರವಾಧ್ಯಕ್ಷ ಡಾ. ಗೋಪಾಲಕೃಷ್ಣ ಕಾಂಚೋಡು ಇವರ ಉಪಸ್ಥಿತಿಯಲ್ಲಿ ತಾಲೂಕಿನ ಪ್ರಧಾನ ಗೌರವಾಧ್ಯಕ್ಷ ಎ. ಕೆ ಶಿವನ್ ರವರ ಮುಂದಾಳತ್ವದಲ್ಲಿ ಅಧ್ಯಕ್ಷ ಎನ್. ಪಿ ತಂಗಚ್ಚನ್, ಕಾರ್ಯದರ್ಶಿ ಸುರೇಶ್ ಗೌಡ, ಪ್ರಧಾನ ಸಲಹೆಗಾರರಾದ ಕೆ.ಎಸ್ ಮಂಜುನಾಥ್ ಗೌಡ, ಹರೀಶ್ ರೈ ಉಪಾಧ್ಯಕ್ಷ ರು ಸರ್ವಸದಸ್ಯರ ಉಪಸ್ಥಿತಿಯೊಂದಿಗೆ ನೆರವೇರಿತು.

ಧ್ವಜಾರೋಹಣ ದ ನಂತರ ಸಂಘದ ಕಛೇರಿಯಲ್ಲಿ ಎ.ಕೆ ಶಿವನ್ ದೀಪಬೆಳಗಿಸಿ ಶುಭ ಹಾರೈಸಿದರು.











