ಸಾವ್ಯ ಶುಭೋದಯ ಹಿಂದೂ ಸೇವಾ ಟ್ರಸ್ಟ್ ಆಶ್ರಯದಲ್ಲಿ 15 ನೇ ವರ್ಷದ ಶನಿ ಪೂಜಾ ಪ್ರಯುಕ್ತ ಬಿಡ್ಡಿಂಗ್ ಮಾದರಿಯ ವಾಲಿಬಾಲ್ ಪಂದ್ಯಾಟ ಸಾವ್ಯದಲ್ಲಿ ನಡೆಯಿತು.
ಪಂದ್ಯಾಟ ಕೂಟವನ್ನು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಜಯಂತ್ ಕೋಟ್ಯಾನ್ ಉದ್ಘಾಟಿಸಿ ಪಂದ್ಯಾಟ ಕೂಟಕ್ಕೆ ಶುಭ ಹಾರೈಸಿದರು. ಪಂಚಾಯತ್ ಅಧ್ಯಕ್ಷ ನಿತಿನ್ ಅಂಡಿಂಜೆ, ಚಂದ್ರಕಾಂತ್ ಕೊಕ್ರಾಡಿ, ಜಗದೀಶ್ ಹೆಗ್ಡೆ ಕೊಕ್ರಾಡಿ, ವಿಠಲ್ ಸುವರ್ಣ ಸಾವ್ಯ, ರಾಜೇಶ್ ಅಂಡಿಂಜೆ, ಹರೀಶ್ ಹೆಗ್ಡೆ, ಸಂತೋಷ್ ಒದ್ರೇಲ್, ಸರೋಜ ಭಾಗವಹಿಸಿದ್ದರು.
ಪಂದ್ಯಾಟದಲ್ಲಿ ಟೀಮ್ ಅಯಾನ್ ಪೂಜಾರಿ ಕಾಶಿಪಟ್ಣ ತಂಡ ಪ್ರಥಮ ಸ್ಥಾನ , ಶ್ರೀಮಾತ ನಾಲ್ಕೂರು ತಂಡ ದ್ವಿತೀಯ ಸ್ಥಾನ ಪಡೆಯಿತು.











