22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕಾಯರ್ತ್ತಡ್ಕ ಸ.ಹಿ.ಪ್ರಾ. ಶಾಲೆ ಇದರ ಶತಮಾನೋತ್ಸವದ ಅಂಗವಾಗಿ ಉಚಿತ ಆರೋಗ್ಯ ಶಿಬಿರ ಮತ್ತು ರಕ್ತದಾನ ಶಿಬಿರ

ಕಳೆಂಜ : ಕಾಯರ್ತ್ತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದರ ಶತಮಾನೋತ್ಸವದ ಅಂಗವಾಗಿ ಬೆನಕ ಹೆಲ್ತ್ ಸೆಂಟರ್ ಉಜಿರೆ, ಬೆನಕ ಚಾರಿಟೇಬಲ್ ಟ್ರಸ್ಟ್ ಉಜಿರೆ ಮತ್ತು ಎ ಜೆ ರಕ್ತ ಕೇಂದ್ರ ಎಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಮಂಗಳೂರು ಇವುಗಳ ಸಹಭಾಗಿತ್ವದಲ್ಲಿ ಉಚಿತ ಆರೋಗ್ಯ ಶಿಬಿರ ಮತ್ತು ರಕ್ತದಾನ ಶಿಬಿರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಳೆಂಜ ಕಾಯರ್ತ್ತಡ್ಕ ಇಲ್ಲಿ ಜರುಗಿತು.

ಶಿಬಿರದ ಉದ್ಘಾಟನೆಯನ್ನು ಅವಿನಾಶ್ ಮಾಲಿಕರು ಅಗ್ರಿಲೀಫ್ ಬರೆಂಗಾಯ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ , ಎಂಜಿ ಭಟ್ ವ್ಯವಸ್ಥಾಪಕರು ಬೆನಕ ಆಸ್ಪತ್ರೆ ಉಜಿರೆ, ಗೋಪಾಲಕೃಷ್ಣ ರಕ್ತನಿಧಿ ಕೇಂದ್ರದ ವ್ಯವಸ್ಥಾಪಕರು ಎಜೆ ಆಸ್ಪತ್ರೆ ಮಂಗಳೂರು, ಶತಮಾನೋತ್ಸವ ಸಮಿತಿ ಅಧ್ಯಕ್ಷ ಹೆಚ್ ವಿಜಯ್ ಕುಮಾರ್ ಜೈನ್, ಕಳೆಂಜ ಗ್ರಾಮ ಪಂಚಾಯತ್ ಉಪಾಧ್ಯಕ್ಷ ವಿಶ್ವನಾಥ ಹೆಚ್, ಎಸ್.ಡಿ.ಎಮ್.ಸಿ ಉಪಾಧ್ಯಕ್ಷೆ ಶ್ರೀಮತಿ ಬೇಬಿ, ಹಿರಿಯ ವಿಧ್ಯಾರ್ಥಿ ಮತ್ತು ಪ್ರಗತಿಪರ ಕೃಷಿಕರಾದ ಕೊರಗಪ್ಪ ಮಣ್ಣಗುಂಡಿ ಇವರುಗಳು ಭಾಗವಹಿಸಿದ್ದರು.

65 ಜನ ರಕ್ತದಾನಿಗಳು ಸೇರಿದಂತೆ ಸುಮಾರು 200 ಜನರು ಶಿಬಿರದ ಪ್ರಯೋಜನ ಪಡೆದುಕೊಂಡರು.
ಬೆನಕ ಆಸ್ಪತ್ರೆ ಉಜಿರೆ ಇಲ್ಲಿನ ಡಾ. ಆದಿತ್ಯ ರಾವ್, ಡಾ. ಅಂಕಿತ ಭಟ್, ಡಾ. ರೋಹಿತ್ ಜಿ ಭಟ್, ಡಾ. ಸೂರಜ್ ಶೆಟ್ಟಿ ಸೇರಿದಂತೆ ವೈದ್ಯರು ಮತ್ತು ಸಿಬ್ಬಂದಿ ತಂಡ ಶಿಬಿರದಲ್ಲಿ ಸಹಕರಿಸಿದರು.


ಶಿಬಿರಕ್ಕೆ ನಿಸರ್ಗ ಯುವಜನೇತರ ಸಂಘ ನಿಡ್ಲೆ, ಶಿವಶಕ್ತಿ ಕಳೆಂಜ, ವನಶ್ರೀ ವಾಟ್ಸಪ್ ಗ್ರೂಪ್ ಮಿಯ್ಯಾರು, ನೇತಾಜಿ ಅಟೋ ಚಾಲಕರ ಸಂಘ ಕಾಯರ್ತ್ತಡ್ಕ, ಉಮಾಮಹೇಶ್ವರ ದೇವಸ್ಥಾನ ಕಾಯರ್ತ್ತಡ್ಕ, ಮಂಜುನಾಥೇಶ್ವರ ಭಜನಾ ಮಂಡಳಿ ಕುದ್ದ ಮೂಡಾರು, ಕುಂಭಶ್ರಿ ಕಾಯರ್ತ್ತಡ್ಕ, ಒಕ್ಕಲಿಗರ ಯುವ ವೇದಿಕೆ ಕಾಯರ್ತ್ತಡ್ಕ, ಕ್ರಿಶ್ಚಿಯನ್ ಬ್ರದರ್ಸ್ ಕಾಯರ್ತ್ತಡ್ಕ
ಶತಮಾನೋತ್ಸವ ಸಮಿತಿ ಮುಖ್ಯೋಪಾಧ್ಯಾಯ, ಅಧ್ಯಾಪಕ ವೃಂದ ಮತ್ತು ಮಕ್ಕಳು ಎಸ್.ಡಿ.ಎಮ್.ಸಿ ಸಮಿತಿ ಚಿಗುರು ಹಿರಿಯ ವಿಧ್ಯಾರ್ಥಿಗಳ ಸಂಘ ಮುಂತಾದ ಸಂಘ ಸಂಸ್ಥೆಗಳ ಸದಸ್ಯರುಗಳು ಸಹಕಾರ ನೀಡಿದರು.

Related posts

ಕನ್ಯಾಡಿ I: ನೇರೊಳ್‌ಪಲ್ಕೆ ಅಂಗನವಾಡಿ ಕೇಂದ್ರದಲ್ಲಿ ಸ್ವಾತ್ರಂತ್ರ್ಯೋತ್ಸವ ಆಚರಣೆ

Suddi Udaya

ಬಿಜೆಪಿ ಸಕ್ರಿಯ ಸದಸ್ಯತ್ವ ಅಭಿಯಾನದಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟರಿಂದ ಸದಸ್ಯತ್ವ ಮರು ನೋಂದಣಿ

Suddi Udaya

ಕಾಪಿನಡ್ಕ ಅಪಾಯಕಾರಿ ವಿದ್ಯುತ್ ಕಂಬ ಹಾಗೂ ಬೃಹತ್ ಗಾತ್ರದ ಮರ: ತೆರವುಗೊಳಿಸುವಂತೆ ಸ್ಥಳೀಯರ ಒತ್ತಾಯ

Suddi Udaya

ಕಾಂಗ್ರೆಸ್ ಪಕ್ಷಕ್ಕಾಗಿ ಮಾಡಿದ ತ್ಯಾಗ ಹೋರಾಟಕ್ಕೆ ಹೈಕಮಾಂಡ್ ಸೂಕ್ತ ಸ್ಥಾನಮಾನ ನೀಡಿದೆ: ಮೋಹನ್ ಗೌಡ ಕಲ್ಮಂಜ

Suddi Udaya

ನಡ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಜಯಲಕ್ಷ್ಮಿಗೆ ಶ್ರದ್ಧಾಂಜಲಿ ಸಮರ್ಪಣೆ

Suddi Udaya

ಮುಂಡಾಜೆ: ನೆಟ್ವರ್ಕ್ ಸಮಸ್ಯೆಗೆ ರಸ್ತೆ ಕಾಮಗಾರಿ ಅಡ್ಡಿ!

Suddi Udaya
error: Content is protected !!