September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿಯಲ್ಲಿ ರಥಸಪ್ತಮಿಯ ಪ್ರಯುಕ್ತ 108 ಸಾಮೂಹಿಕ ಸೂರ್ಯ ನಮಸ್ಕಾರ

ಬೆಳ್ತಂಗಡಿ : ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ, ನೇತ್ರಾವತಿ ವಲಯ, ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ ದ.ಕ.ಜಿಲ್ಲೆಯ ಸುಮಾರು 16 ದೇವಾಲಯಗಳಲ್ಲಿ ಜ.25ರಂದು ರಥಸಪ್ತಮಿಯ ಪ್ರಯುಕ್ತ 108 ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಪ್ರಯುಕ್ತ ಜಿಲ್ಲಾ ಸಮಿತಿಯ ಮಾರ್ಗದರ್ಶನದೊಂದಿಗೆ ಬೆಳ್ತಂಗಡಿ ತಾಲೂಕಿನ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ದಿವ್ಯಸಾನಿಧ್ಯದಲ್ಲಿ ಸಮಿತಿಯ ಕಾರ್ಯಕ್ರಮ ನಡೆಯಿತು.


ಕುತ್ಯಾರು ಕ್ಷೇತ್ರದ ಪ್ರಧಾನ ಅರ್ಚಕರಾದ ಸತೀಶ್ ಭಟ್ ಇವರು ದೀಪ ಪ್ರಜ್ವಲನ ಮಾಡಿ ಶುಭಹಾರೈಸಿದರು. ವೇದಿಕೆಯಲ್ಲಿ ಕ್ಷೇತ್ರದ ಆಡಳಿತ ಮಂಡಳಿಯ ಸುಬ್ರಾಯ ಡೋಂಗ್ರೆ, ವಾಣಿ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶಂಕರ್ ರಾವ್, ಕಾರ್ಯಕ್ರಮದ ಸಂಚಾಲಕ ಸಂತೋಷ್ ಎಸ್ ಹಾಗೂ ಮುಖ್ಯಶಿಕ್ಷಕಿ ಶ್ರೀಮತಿ ಪ್ರೇಮಲತಾ ಗಣೇಶ್ ಉಪಸ್ಥಿತರಿದ್ದರು.

ಶಂಖನಾದ ಮತ್ತು ರಘುನಾಥ ಶಾಂತಿ ಹಾಗೂ ಶಿವಣ್ಣ ನವರ ಭಜನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮವು 3 ಆವೃತ್ತಿಗಳ 108 ಸೂರ್ಯ ನಮಸ್ಕಾರಗಳೊಂದಿಗೆ ಸಂಪನ್ನಗೊಂಡಿತು. ವಿವರಣೆಯನ್ನು ಯೋಗ ಬಂಧುಗಳಾದ ಶ್ರೀಮತಿ ರವಿಕಲಾ, ಗಣಪತಿ ಭಟ್, ಮಂಜಣ್ಣ ಇವರುಗಳು ನೀಡಿದರೆ. ಪ್ರಾತ್ಯಕ್ಷಿಕೆಯಲ್ಲಿ ಶ್ರೀಮತಿ ನಾಗಶ್ರೀ, ಶ್ರೀಮತಿ ಗೀತಾ, ಶ್ರೀಮತಿ ಪುಷ್ಪ, ಪುನೀತ್, ಪ್ರಗತ್ , ಪ್ರಶಾಂತ್ ಇವರು ಸಹಕರಿಸಿದರು.108 ಮಂತ್ರಗಳನ್ನು ಸತೀಶ್ ಪಠಿಸಿದರು. ರಥಸಪ್ತಮಿಯ ವಿಶೇಷತೆಯ ಬಗ್ಗೆ ಹಾಗೂ ಸೂರ್ಯ ನಮಸ್ಕಾರದ ಮಹತ್ವದ ಬಗ್ಗೆ ಬೌದ್ಧಿಕವನ್ನು ಸಂತೋಷ್ ಎಸ್ ನಡೆಸಿಕೊಟ್ಟರು.

ಸೂರ್ಯೋದಯದ ಅವಧಿಯಲ್ಲಿ ಅಗ್ನಿಹೋತ್ರವನ್ನು ಶ್ರೀಮತಿ ಕೋಮಲ ಹಾಗೂ ಪ್ರಕಾಶ್ ದಂಪತಿಗಳು ನಿರ್ವಹಿಸಿದರು. ಯೋಗ ನಮಸ್ಕಾರದ ಆರಂಭದ ಮಾನಸಿಕ ಸಿದ್ಧತೆ ಹಾಗೂ ಉಸಿರಾಟ ಕ್ರಿಯೆಗಳನ್ನು ಯೋಗಬಂಧು ರಕ್ಷಿತಾ ಹಾಗೂ ಅಮೃತಾಸನವನ್ನು ಮುಖ್ಯಶಿಕ್ಷಕಿ ಶ್ರೀಮತಿ ಪ್ರೇಮಲತಾ ಗಣೇಶ್ ನಡೆಸಿಕೊಟ್ಟರು. ಕಾರ್ಯಕ್ರಮದ ಸಂಚಾಲಕರಾಗಿ ಸಂತೋಷ್ ಎಸ್ ಹಾಗೂ ಸಹ ಸಂಚಾಲಕರಾಗಿ ಧೀರಜ್, ಶಿಕ್ಷಣ ವಿಧಿಯ ಮಾರ್ಗದರ್ಶಕರಾಗಿ ಸಂತೋಷ್ ಕಾಪಿನಡ್ಕ ಹಾಗೂ ಕೋಮಲ ಜವಾಬ್ದಾರಿಯನ್ನು ನಿರ್ವಹಿಸಿದರು. ಅಶ್ವಥ್ ಕಾರ್ಯಕ್ರಮವನ್ನು ನಿರೂಪಿಸಿ , ಸುರೇಶ್ ಸ್ವಾಗತಿಸಿ, ಧೀರಜ್ ವಂದಿಸಿದರು.

Related posts

ನರೇಂದ್ರ ಮೋದಿ ಸರಕಾರಕ್ಕೆ 12 ವರ್ಷ: ನಾವೂರು ಶಕ್ತಿ ಕೇಂದ್ರದ ವತಿಯಿಂದ ದೇವರಿಗೆ ವಿಶೇಷ ಪೂಜೆ

Suddi Udaya

ಉಜಿರೆ: ಎಸ್.ಡಿ.ಎಮ್ ಆಂ.ಮಾ. ಶಾಲೆಯಲ್ಲಿ ವಿಶ್ವ ಸಾಕ್ಷರತಾ ದಿನಾಚಾರಣೆ

Suddi Udaya

ಎಸ್‌ಡಿಎಂ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಆಸ್ಪತ್ರೆ ಶಾಂತಿವನದಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಉಜಿರೆ ಗ್ರಾ.ಪಂ. ಮಾಜಿ ಅಧ್ಯಕ್ಷ ಬಾಲಕೃಷ್ಣ ಗೌಡ ನಿಧನ

Suddi Udaya

ನಿಯಂತ್ರಣ ತಪ್ಪಿ ಆಪೆ ರಿಕ್ಷಾ ಪಲ್ಟಿ: ಪ್ರಯಾಣಿಕರಿಗೆ ಗಾಯ

Suddi Udaya

ಸವಣಾಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya
error: Content is protected !!