July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಪಾರೆಂಕಿ ಶ್ರೀ ಕ್ಷೇತ್ರ ಮಹಿಷಮರ್ಧಿನಿ ದೇವಸ್ಥಾನದಲ್ಲಿ ರಥಸಪ್ತಮಿ ಪ್ರಯುಕ್ತ ಸಾಮೂಹಿಕ 108 ಸೂರ್ಯನಮಸ್ಕಾರ ಕಾರ್ಯಕ್ರಮ

ಮಚ್ಚಿನ: ಎಸ್. ಪಿ. ವೈ. ಎಸ್. ಎಸ್. ಯೋಗ ಸಮಿತಿಯ ವತಿಯಿಂದ ದ.ಕ ಜಿಲ್ಲೆಯ ವಿವಿದೆಡೆ 16 ದೇವಾಲಯಗಳಲ್ಲಿ ರಥಸಪ್ತಮಿ ಪ್ರಯುಕ್ತ ಸಾಮೂಹಿಕ 108 ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಶ್ರೀ ಕ್ಷೇತ್ರ ಪಾರೆಂಕಿ ಮಹಿಷಮರ್ಧಿನಿ ದೇವಸ್ಥಾನದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕರಾದ ಟಿ.ವಿ.ಶ್ರೀಧರ್ ಭಟ್, ಪ್ರಶಾಂತ್ ಆಚಾರ್ಯ, ಸಮಿತಿಯ ಜಿಲ್ಲಾ ಚಿಂತನಾಕೂಟ ಪ್ರಮುಖರಾದ ಹರೀಶ್ ಅಂಚನ್, ಶಿಕ್ಷಕರಾದ ಸುಕೇಶ್ ಹಾಗೂ ಸುಧಾಕರ ಇವರು ದೀಪ ಪ್ರಜ್ವಲನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮುಂಜಾನೆ ಭಜನೆಯೊಂದಿಗೆ ಆರಂಭವಾದ ಕಾರ್ಯಕ್ರಮ 3 ಹಂತಗಳಲ್ಲಿ 9 ಬಾರಿ 108 ಸೂರ್ಯ ನಮಸ್ಕಾರ ಸಮಾಪನಗೊಂಡಿತು.
ರಥಸಪ್ತಮಿಯಂದು ಸೂರ್ಯನಮಸ್ಕಾರ ಮಾಡುವ ಮಹತ್ವವನ್ನು ಯೋಗಪಟು ರೂಪಾ ನವೀನ್ ತಿಳಿಸಿದರು. ಸೂರ್ಯನಮಸ್ಕಾರವನ್ನು 3 ಹಂತಗಳಲ್ಲಿ ಕ್ರಮವಾಗಿ ಯೋಗಪಟುಗಳಾದ ಸಿ.ಹೆಚ್. ಶಿವಶಂಕರ ಛತ್ರ,ಕುಮಾರಿ ಕೀರ್ತಿ, ನವೀನ್ ಕುಮಾರ್ ನಡೆಸಿಕೊಟ್ಟರು.

ಆರಂಭಿಕ ಸಿದ್ದತೆಯನ್ನು ಭಾರತಿ ಸುರೇಶ್ ನೆರವೇರಿಸಿದರು. ಪ್ರಾತ್ಯಕ್ಷಿತೆಯಲ್ಲಿ ಯೋಗ ಪಟುಗಳಾದ ಸರಿತಾ, ಭವಾನಿ, ಕೇಶವ, ದೀಕ್ಷಿತ್, ವಿದ್ಯಾ, ವಿಜಯ, ರಮ್ಯಾ, ದಿವಾಕರ, ಆಶಾ, ರಾಘವೇಂದ್ರ ಬಾಳಿಗ, ಉಮಾ ಸಹಕರಿಸಿದರು. ಅಮಿತಾ ಅಶೋಕ್ ನಿರೂಪಣೆ ಮಾಡಿದರು. ಸವಿತಾ ಸ್ವಾಗತಿಸಿ ಜಿ.ಬಾಲಕೃಷ್ಣ ವಂದಿಸಿದರು. ಮಡಂತ್ಯಾರು, ಪುಂಜಾಲಕಟ್ಟೆ ಪರಿಸರದ ಯೋಗಪಟುಗಳು ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದರು.

Related posts

ರೇಣುಕಾ ಪ್ರಸಾದ್ ರವರಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಸನ್ನಿಧಾನಕ್ಕೆ ಬೆಳ್ಳಿ ರಥ ಸಮರ್ಪಣೆ: ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಗೌರವಾರ್ಪಣೆ

Suddi Udaya

ಬೆಳ್ತಂಗಡಿ ತಾಲೂಕಿನ 70 ಸಾವಿರ ಅಕ್ರಮ ಸಕ್ರಮ ಭೂ ಮಂಜೂರಾತಿ ಅರ್ಜಿದಾರರ ಬದುಕು ಬೀದಿಗೆ: 94ಸಿ ಮನೆ ನಿವೇಶನ ಅರ್ಜಿ ತಾಲೂಕು ಕಛೇರಿಯಲ್ಲಿ ನಾಪತ್ತೆ: ಜೂ.17 ರಿಂದ ಕಂದಾಯ ಸಚಿವ ಕೃಷ್ಣ ಬೈರೆ ಗೌಡರಿಗೆ ಪತ್ರ ಚಳುವಳಿ: ಜೂನ್ 26 ರಂದು ಕೃಷಿಕರಿಂದ ಹಕ್ಕೊತ್ತಾಯ ಸಭೆ

Suddi Udaya

ಕುದ್ರೋಳಿ‌ ಕ್ಷೇತ್ರದ ನಿರ್ಮಾತೃ ಬಿ.ಜನಾರ್ಧನ ಪೂಜಾರಿಯವರನ್ನು ಭೇಟಿ ಮಾಡಿದ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ‌ ಸದಸ್ಯರು

Suddi Udaya

ಗೇರುಕಟ್ಟೆ : ಕಳಿಯ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ: ನಿವೃತ್ತಿ ಹೊಂದಿದ ಪಂಪು ಚಾಲಕ ಕೊರಗಪ್ಪರಿಗೆ ಬೀಳ್ಕೊಡುಗೆ

Suddi Udaya

ಬಟ್ಲಡ್ಕ ಜಮಾಅತ್ ನ ಉರೂಸ್ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ

Suddi Udaya

ಮಚ್ಚಿನ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಮಂತ್ರಿಮಂಡಲದ ಚುನಾವಣೆ

Suddi Udaya
error: Content is protected !!