30 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಯಕ್ಷಭಾರತಿಯಿಂದ ಯಕ್ಷಗಾನ ಪ್ರದರ್ಶನ “ಇಂದ್ರಜಿತು ಕಾಳಗ”

ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಜಾತ್ರೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಉಜಿರೆಯ ಶಾರದಾ ಮಂಟಪದಲ್ಲಿ ಯಕ್ಷಭಾರತಿ ಕನ್ಯಾಡಿ ಬೆಳ್ತಂಗಡಿ ಸಂಯೋಜನೆಯಲ್ಲಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಪ್ರದರ್ಶನ “ಇಂದ್ರಜಿತು ಕಾಳಗ” ನಡೆಯಿತು.

ಹಿಮ್ಮೇಳದಲ್ಲಿ ಭಾಗವತರಾಗಿ ಮಹೇಶ ಕನ್ಯಾಡಿ, ಚೆಂಡೆ ಮದ್ದಳೆಯಲ್ಲಿ ಶಿತಿಕಂಠ ಭಟ್ ಉಜಿರೆ, ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ, ವಾಸುದೇವ ಆಚಾರ್ಯ, ಚಕ್ರತಾಳದಲ್ಲಿ ಕೌಸ್ತುಭ ಕನ್ಯಾಡಿ ಸಹಕರಿಸಿದರು.

ಪಾತ್ರವರ್ಗದಲ್ಲಿ ರಾಮನಾಗಿ ಪ್ರಶಾಂತ ಮುಂಡ್ಕೂರು, ಲಕ್ಷ್ಮಣನಾಗಿ ಆದರ್ಶ ಮೂಡಬಿದರೆ, ವಿಭೀಷಣನಾಗಿ ಪ್ರಶಾಂತ್ ಆಚಾರ್ಯ ಪುತ್ತೂರು, ಹನುಮಂತನಾಗಿ ಈಶ್ವರಪ್ರಸಾದ ನಿಡ್ಲೆ, ರಾವಣನಾಗಿ ಶೀಶ ಮಣಿಲ, ರಾವಣ ದೂತ, ಜಾಂಬವಂತ ಮತ್ತು ಶುಕ್ರಾಚಾರ್ಯನಾಗಿ ಪೆರ್ವೋಡಿ ಅಶೋಕ ಸುಬ್ರಹ್ಮಣ್ಯ ಭಟ್,ಇಂದ್ರಜಿತುವಾಗಿ ಗಣೇಶ ಶೆಟ್ಟಿ ಸಾಣೂರು, ಮಾಯಾ ಸೀತೆಯಾಗಿ ಸುಹಾನ್ ಜೆಪ್ಪಿನಮೊಗರು ಪಾತ್ರ ನಿರ್ವಹಿಸಿದರು. ದೇವಸ್ಥಾನದ ವತಿಯಿಂದ ಭರತ್ ಕುಮಾರ್ ಉಜಿರೆ ಯಕ್ಷಭಾರತಿ ಸಂಸ್ಥೆಯ ಸಂಚಾಲಕ ಮಹೇಶ ಕನ್ಯಾಡಿಯವರನ್ನು ಗೌರವಿಸಿದರು. ರವೀಂದ್ರ ಶೆಟ್ಟಿ ಬಳೆಂಜ ಉಪಸ್ಥಿತರಿದ್ದರು.

Related posts

ಬೆಳಾಲು: ವಿದ್ಯುತ್ ಕಂಬಕ್ಕೆ ಇನೋವಾ ಡಿಕ್ಕಿ

Suddi Udaya

ಕವಿ ಸರ್ವಜ್ಞ ಜಯಂತಿ ಆಚರಣೆ

Suddi Udaya

ಉಜಿರೆ ಗ್ರಾಮ ಪಂಚಾಯತ್ ವತಿಯಿಂದ ವಿಶೇಷ ಚೇತನರ ಸಮನ್ವಯ ಗ್ರಾಮ ಸಭೆ

Suddi Udaya

ಅಡಿಕೆ ವರ್ತಕರ ಜಿಲ್ಲಾ ಸಂಘಟನೆಯ ಸಭೆ: ಅಧ್ಯಕ್ಷರಾಗಿ ಪ್ರಶಾಂತ್ ಶೆಟ್ಟಿ ಮೂಡಯೂರು, ಕಾರ್ಯದರ್ಶಿಯಾಗಿ ತೇಜಸ್ವಿ ರಾಜ್ ಆಯ್ಕೆ

Suddi Udaya

ಉಜಿರೆ: ಎಸ್.ಡಿ.ಎಂ ಪ ಪೂ ಕಾಲೇಜಿನಲ್ಲಿ ಆಟಿದ ಗೌಜಿ ಕಾರ್ಯಕ್ರಮ

Suddi Udaya

ಜು.1ರಿಂದ ಪದ್ಯಾಣ ಭಾಗವತ ಸಂಸ್ಮರಣೆ, ತಾಳಮದ್ದಳೆ ಸಪ್ತಾಹ: ಭಾಗವತ ಕುರಿಯ ಗಣಪತಿ ಶಾಸ್ತ್ರಿಗಳಿಗೆ ಪದ್ಯಾಣ ಪ್ರಶಸ್ತಿ ಹಾಗೂ ಹಿಮ್ಮೇಳ ವಾದಕ ಸೀತಾರಾಮ ತೋಳ್ಪಾಡಿತ್ತಾಯರಿಗೆ ಕುರಿಯ ಪ್ರಶಸ್ತಿ,

Suddi Udaya
error: Content is protected !!