ಉಜಿರೆ: ಸುಳ್ಯ ತಾಲೂಕಿನ ಕೆವಿಜಿ ಶಿಕ್ಷಣ ಸಂಸ್ಥೆಯ ಕ್ರೀಡಾಂಗಣದಲ್ಲಿ ಆಯೋಜಿಸಿದ ಮ್ಯಾರಥನ್ ಸ್ಪರ್ಧೆಯಲ್ಲಿ ಭಾಗವಹಿಸಿದ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜಿನ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪಡೆದಿದ್ದಾರೆ.
10 ಕಿ.ಮೀ ಓಟದಲ್ಲಿ ಮಿಥೇಶ್ ಸಿ.ಜಿ. ಚಿನ್ನದ ಪದಕ, ಆದಿತ್ಯ ಎನ್.ಪಿ. ಬೆಳ್ಳಿ ಪದಕ, 5 ಕಿ.ಮೀ ಓಟದಲ್ಲಿ ನಿತಿನ್ ಯು.ಎಲ್. ಚಿನ್ನದ ಪದಕ, 3 ಕಿ.ಮೀ ಓಟದಲ್ಲಿ ಆಶ್ಲೇಶ್ ಚಿನ್ನದ ಪದಕ ಹಾಗೂ ಮಹೇಶ್ ಆರ್ ಬೆಳ್ಳಿ ಪದಕ, 21 ಕಿ.ಮೀ ಓಟದಲ್ಲಿ ಚಾಣಕ್ಯ ಕೇಶವ್ ಕಂಚಿನ ಪದಕ ಹಾಗು ಫಾರಂಗ್ 7ನೇ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಎಸ್.ಡಿ.ಎಂ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ಸಂದೇಶ್ ಪೂಂಜ ಬಿ ತರಬೇತಿ ನಿಡಿರುತ್ತಾರೆ.











