July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಜ.29 (ಇಂದು): ಬದ್ಯಾರಿನಲ್ಲಿ “ಹಿಬರೋಡಿ ಯಕ್ಷೋತ್ಸವ”‌ -“ಸಹಸ್ರ ಕವಚ ಮೋಕ್ಷ” ಯಕ್ಷಗಾನ ಬಯಲಾಟ”

ಬದ್ಯಾರು:ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದಿಂದ ಶ್ರೀ ಮಂಜುನಾಥ ಸ್ವಾಮಿ ಹಾಗೂ ಶ್ರೀ ಮಹಾಗಣಪತಿ ದೇವರ ಸೇವಾರ್ಥ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿಯ ನಿರಂತರ ಸೇವಾ ಬಯಲಾಟ “ಸಹಸ್ರ ಕವಚ ಮೋಕ್ಷ” ತೆಂಕಕಾರಂದೂರಿನ ಬದ್ಯಾರಿನಲ್ಲಿರುವ ಹಿಬರೋಡಿ ಅನುಗ್ರಹ ನಿಲಯದ ವಠಾರದಲ್ಲಿ ಜ.29 ರಂದು ರಾತ್ರಿ ಗಂಟೆ 7ರಿಂದ ರಾತ್ರಿ 12ರ ತನಕ ಪ್ರದರ್ಶನಗೊಂಡು ಯಕ್ಷ ಕಲಾಪ್ರೇಮಿಗಳಿಗೆ ರಸದೌತಣ ನೀಡಲಿದೆ ಎಂದು ಸೇವಾಕರ್ತರು, ಬೆಳ್ತಂಗಡಿ ಲಯನ್ಸ್ ಕ್ಲಬ್ ನಿಕಟಪೂರ್ವಧ್ಯಕ್ಷ,ಯಕ್ಷಪ್ರೇಮಿ ದೇವದಾಸ್ ಶೆಟ್ಟಿ ಹಿಬರೋಡಿ ತಿಳಿಸಿರುತ್ತಾರೆ.

ಪ್ರತಿ ವರ್ಷ ನೂತನ ಪ್ರಸಂಗ:

ಇದೇ ಸ್ಥಳದಲ್ಲಿ 2004 ಮತ್ತು 2005ರಲ್ಲಿ ಕಟೀಲು ಮೇಳದ ಪ್ರಸಂಗಗಳನ್ನು ಪ್ರದರ್ಶಿಸುವುದರೊಂದಿಗೆ ಆರಂಭವಾದ ಕಲಾಪ್ರೇಮ ನಿರಂತರ ಬೆಳೆಯುತ್ತ ಬಂದಿದೆ. 2006ರಲ್ಲಿ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಬಯಲಾಟದೊಂದಿಗೆ ಈ ಸೇವೆ ಮುಂದುವರೆದು ಪ್ರತಿ ವರ್ಷವೂ ಅದೇ ಮೇಳದ ನೂತನ ಪ್ರಸಂಗ ಪ್ರದರ್ಶನದ ಮೂಲಕ ಜನಮನ ರಂಜನೆಯನ್ನೂ ಮಾಡಿಕೊಂಡು ಬಂದಿದೆ. ಮಧ್ಯೆ ಒಂದು ವರ್ಷ ಧರ್ಮಸ್ಥಳ ಮತ್ತು ಕಟೀಲು ಮೇಳಗಳ ಪ್ರತ್ಯೇಕ ಪ್ರದರ್ಶನಗಳೂ ಆಗಿವೆ.

ನಿರಂತರ 22ವರ್ಷಗಳಿಂದ ಸೇವೆ:

ಕಳೆದ 22 ವರ್ಷಗಳಿಂದ ನಿರಂತರ ಯಕ್ಷಗಾನ ಸೇವೆ ನಡಿತೀದೆ. ಸಾವಿರಾರು ಕಲಾಸಕ್ತರಿಗೆ ಕಲಾರಂಜನೆಯ ಜೊತೆಗೆ ಆತಿಥ್ಯ ಸತ್ಕಾರದ ಮೂಲಕವೂ ಸಂತೃಪ್ತಿಯನ್ನು ನೀಡುತ್ತಿರುವುದು ಇಲ್ಲಿರುವ ವೈಶಿಷ್ಟ್ಯ.

Related posts

ಮಡಂತ್ಯಾರು ಸಿಎ ಬ್ಯಾಂಕ್ ನೇತೃತ್ವದಲ್ಲಿ ದ.ಕ. ಜಿಲ್ಲಾ ಮಟ್ಟದ 72ನೇ ಸಹಕಾರ ಸಪ್ತಾಹಕ್ಕೆ ಚಾಲನೆ: ಮಡಂತ್ಯಾರು ನಗರದಲ್ಲಿ ಆದ್ದೂರಿಯ ಮೆರವಣಿಗೆ, ಸಾಧಕ 72 ಮಂದಿಗೆ ಕೃಷಿ ಸಿಂಧೂರ ಪ್ರಶಸ್ತಿ ಹಾಗೂ 86ಮಂದಿ ಸಾಧಕರಿಗೆ ಕ್ಷೀರ ರತ್ನ ಪ್ರಶಸ್ತಿ ಪ್ರದಾನ

Suddi Udaya

ಧರ್ಮಸ್ಥಳ: ಅಪರಿಚಿತ ವ್ಯಕ್ತಿ ಮೃತದೇಹ ಪತ್ತೆ: ವಾರೀಸುದಾರರು ಧರ್ಮಸ್ಥಳ ಠಾಣೆಯನ್ನು ಸಂಪರ್ಕಿಸುವಂತೆ ಮನವಿ

Suddi Udaya

ಎಕ್ಸೆಲ್ ನಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳ ಒರಿಯಂಟೇಶನ್

Suddi Udaya

ಆರು ಜನ ನಕ್ಸಲರು ಶರಣಾಗತಿ ಬೆನ್ನಲ್ಲೇ ನಕ್ಸಲರು ಬಳಸುತ್ತಿದ್ದ ಶಸ್ತ್ರಾಸ್ತ್ರಗಳು ಪತ್ತೆ

Suddi Udaya

ಮದ್ದಡ್ಕ ಭಜನಾ ಮಂದಿರದಲ್ಲಿ ಶ್ರೀ ರಾಮನವಮಿ ಉತ್ಸವ: ಭಜನಾ ಕಾರ್ಯಕ್ರಮ

Suddi Udaya

ಕುವೆಟ್ಟು ಸ.ಉ.ಹಿ.ಪ್ರಾ.ಶಾಲೆ ಪ್ರತಿಭಾ ಪುರಸ್ಕಾರ 2025

Suddi Udaya
error: Content is protected !!