ಅಳದಂಗಡಿ: ಗಣರಾಜ್ಯೋತ್ಸವದ ಪ್ರಯುಕ್ತ ಸರಕಾರಿ ಪ್ರೌಢ ಶಾಲೆ ಅಳದಂಗಡಿ ಮಕ್ಕಳಿಂದ ಹಳೆ ವಿದ್ಯಾರ್ಥಿಗಳ ಸಹಕಾರದಲ್ಲಿ, ಮುಖ್ಯೋಪಾಧ್ಯಾಯಿನಿ ಶಾಂತಿ ಸಲ್ದಾನಾ ಹಾಗೂ ವಿಜ್ಞಾನ ಶಿಕ್ಷಕಿ ಲಲಿತ ಹಾಗೂ ದೈಹಿಕ ಶಿಕ್ಷಕ ಶೇಖರ್ ಎನ್ ಮತ್ತು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸದಾಶಿವ ಶಿರ್ಲಾಲು ಇವರ ಮುಂದಾಳತ್ವದಲ್ಲಿ ಶಾಲೆಯಿಂದ ಕೆದ್ದು ಪರಿಸರ, ಅಳದಂಗಡಿ ದೇವಸ್ಥಾನದ ಇಕ್ಕೆಲಗಳಲ್ಲಿ ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮ ಹಾಗೂ ನಗರ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿ, ಜಾಥಾ ಕೈಗೊಳ್ಳಲಾಯಿತು.

ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳಾದ ಪ್ರಾದ್ವಿ ಚಾಲೆಂಜರ್ಸ್ ನ ಅಭಿಷೇಕ್ ನೀರಲ್ಕೆ , ಅರ್ವ ಎಂಟರ್ಪ್ರೈಸಸ್ ನ ಸುಬ್ರಹ್ಮಣ್ಯ ಆಚಾರ್ಯ ಸಹಕರಿಸಿದರು.











