ಬೆಳ್ತಂಗಡಿ: ನೆರಿಯ ಗ್ರಾಮದ ಕೋಲೋಡಿ ಪರಿಸರದ ಬಡ ಕುಟುಂಬವೊಂದು ರೇಷನ್ ಕಾರ್ಡ್ ಇಲ್ಲದೇ ಸಮಸ್ಯೆಗೆ ಸಿಲುಕ್ಕಿಕೊಂಡಿರುವ ಬಗ್ಗೆ ಸುದ್ದಿಯಾಗಿತ್ತು ಇದೀಗ ಆ ಕುಟುಂಬಕ್ಕೆ ಪಡಿತರ ಚೀಟಿ ಆಹಾರ ಇಲಾಖೆಯಿಂದ ಸೃಜೀಸಲಾಗಿದೆ.
ಕೋಲೋಡಿಯ ನೀಲಮ್ಮ ಕುಟುಂಬ ಸಮರ್ಪಕ ದಾಖಲೆಗಳಲು ಇಲ್ಲದೇ ಸಣ್ಣ ಕುಟೀರದಲ್ಲಿ ವಾಸವಾಗಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ಸುದ್ದಿ ಹರಿದಾಡಿತ್ತು. ಸಮಸ್ಯೆಯನ್ನು ಆಲಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿ ಪ್ರಸ್ತುತವಾಗಿ ಯಾವುದೇ ಹೊಸ ಪಡಿತರ ಚೀಟಿ ಪಡೆಯಲು ಅವಕಾಶವಿಲ್ಲದ ಕಾರಣ ವೈದ್ಯಕೀಯ ನೆಲೆಯಲ್ಲಿ ಅವರಿಗೆ ರೇಷನ್ ಕಾರ್ಡ್ ನೀಡಲಾಗಿದೆ. ಈ ಬಗ್ಗೆ ಬೆಳ್ತಂಗಡಿ ತಹಶೀಲ್ದಾರ್ ವಿಶೇಷ ವರದಿಯನ್ನು ಮಂಗಳೂರು ಆಹಾರ ಇಲಾಖೆಯ ಉಪ ನಿರ್ದೇಶಕರಿಗೆ ಸಲ್ಲಿಸಿದ್ದರು.











