ಉಜಿರೆ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ 9 ಜನ ವಿದ್ಯಾರ್ಥಿಗಳು ಇದೇ ಬರುವ ಫೆಬ್ರವರಿ 14ರಿಂದ 18ವರೆಗೆ ವಿಜಯವಾಡದಲ್ಲಿ ನಡೆಯಲಿರುವ ಅಖಿಲಾ ಭಾರತ ಮಟ್ಟದ ಅಂತರ್ ವಿಶ್ವವಿದ್ಯಾಲಯಗಳ ಮಹಿಳಾ ನೆಟ್ ಬಾಲ್ ಪಂದ್ಯಾಟಕ್ಕೆ ಆಯ್ಕೆಗೊಂಡಿದ್ದಾರೆ.
ಇವರು ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಲಿದ್ದಾರೆ. ತಂಡದಲ್ಲಿ ಎಸ್.ಡಿ.ಎಂ ಕಾಲೇಜಿನ ಎಂಎಸ್ ಡಬ್ಲ್ಯೂ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳಾದ ವರ್ಷಿತಾ, ರಶ್ಮೀ ಎಸ್, ಎಂ.ಕಾಂ ವಿದ್ಯಾರ್ಥಿನಿ ಮನಿಷಾ, ಬಿಕಾಂ ವಿದ್ಯಾರ್ಥಿಳಾದ ಸುರಕ್ಷಾ, ಪಲ್ಲವಿ, ಸಿಂಚನಾ, ಬಿಎ ವಿದ್ಯಾರ್ಥಿನಿ ಧನು ಶ್ರೀ ಎಚ್.ಆರ್. ಬಿ.ಎಸ್ ಸಿ ವಿದ್ಯಾರ್ಥಿನಿ ಸ್ಪೂರ್ತಿ ಎಂ.ಆರ್ ತಂಡದಲ್ಲಿ ಭಾಗವಹಿಸಲಿದ್ದಾರೆ. ಇದೇ ಮಂಗಳೂರು ವಿಶ್ವವಿದ್ಯಾನಿಲಯ ತಂಡಕ್ಕೆ ಆಳ್ವಾಸ್ ಕಾಲೇಜಿನ ಜೋಸ್ಮಿನ್ ಮಾರಿಯಾ ಮತ್ತು ನಿರ್ಮಾಲಾ ಕಾಮತ್ ಸೇರಿದಂತೆ ಮೂಡುಬಿದಿರೆಯ ದವಳ ಕಾಲೇಜಿನ ವಿಶ್ಮೀತಾ ವಿ ಶೆಟ್ಟಿ ಆಯ್ಕೆಗೊಂಡಿರುತ್ತಾರೆ. ಆಯ್ಕೆಯಾಗಿರುವ ವಿದ್ಯಾರ್ಥಿಗಳಿಗೆ ಎಸ್.ಡಿ.ಎಂ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ಸುದೀನ್ ಪುಜಾರಿ ತರಬೇತಿ ನೀಡಿರುತ್ತಾರೆ.











