32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಚಾರ್ಮಾಡಿ: ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವರ ವಾರ್ಷಿಕ ಜಾತ್ರೋತ್ಸವಕ್ಕೆ ಚಾಲನೆ

ಚಾರ್ಮಾಡಿ: ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆ ಮತ್ತು ಆರಾಟ್ ಉತ್ಸವ ಬ್ರಹ್ಮ ಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರ ಹಿರಿತನದಲ್ಲಿ ಫೆ. 12ರಿಂದ 16ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.

ಫೆ. 12ರಂದು ಬೆಳಿಗ್ಗೆ ಪ್ರಾರ್ಥನೆ ಪಂಚಗವ್ಯ ಪುಣ್ಯಾಹ, ಗಣಹೋಮ, ಸಾನಿಧ್ಯ ಕಲಶ ಪೂಜೆ, ಸಾನಿಧ್ಯ ಕಲಶಾಭಿಷೇಕ ಬಳಿಕ ಕೊಡಿ ಏರುವುದರ ಮೂಲಕ ಜಾತ್ರೋತ್ಸವ ಚಾಲನೆ ಗೊಂಡಿತು. ಮಧ್ಯಾಹ್ನ ಮಹಾಪೂಜೆ ಉತ್ಸವಬಲಿ ನಡೆಯಿತು.

ಸಂಜೆ ದೀಪರಾಧನೆ, 7-00ರಿಂದ ಊರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ರಾತ್ರಿ ದೊಡ್ಡ ರಂಗ ಪೂಜೆ, ಫೆ.13ರಂದು ಬೆಳಿಗ್ಗೆ ಗಣಹೋಮ ಉಷ ಪೂಜೆ, ಬಿಂಬ ಶುದ್ಧಿ, ಕಲಶ ಪೂಜೆ, ಸಾನಿಧ್ಯ ಕಲಶಾಭಿಷೇಕ, ಮಹಾ ಪೂಜೆ, ತತ್ವ ಬಲಿ, ಉತ್ಸವ ಬಲಿ, ದೀಪರಾಧನೆ, ರಾತ್ರಿ ರಂಗ ಪೂಜೆ, ಉತ್ಸವ ಬಲಿ, ನೃತ್ಯ ಬಲಿ, ಶಾರದಾ ಆರ್ಟ್ಸ್ ಐಸಿರಿ ಕಲಾವಿದರು ಮಂಜೇಶ್ವರ ಇವರಿಂದ ಪೌರಾಣಿಕ ನಾಟಕ. “ಭಜರಂಗಿ ಬಲಿ ” ಪ್ರದರ್ಶನ ಗೊಳ್ಳಲಿದೆ.

ಫೆ.14ರಂದು ಬೆಳಿಗ್ಗೆ ಗಣಹೋಮ, ಉಷಪೂಜೆ, ಪ್ರಾತ ಬಲಿ, ಸಾನಿಧ್ಯ ನವಕ ಕಲಶಾಭಿಷೇಕ, ಉತ್ಸವ ಬಲಿ, ಸಂಜೆ ದೀಪರಾಧನೆ, ರಾತ್ರಿ ದೊಡ್ಡ ರಂಗ ಪೂಜೆ, ಧಾರ್ಮಿಕ ಸಭೆ, ಪಂಚಶ್ರೀ ಸಾಂಸ್ಕೃತಿಕ ಕಲಾ ಕೇಂದ್ರದ ವಿದ್ಯಾರ್ಥಿಗಳಳಿಂದ ಯಕ್ಷಗಾನ “ಪಾಂಚಜನ್ಯ”, ಫೆ.15ರಂದು ಬೆಳಿಗ್ಗೆ ಗಣಹೋಮ, ವೈದಿಕ ವಿಧಿವಿಧಾನ, ತುಲಾಭಾರ ಸೇವೆಸಂಜೆ ದೀಪರಾಧನೆ,, ಮತ್ತೂರು ಬೆಡಿ ಸೇವೆ, ಭಜನಾ ಕಮ್ಮಟೋತ್ಸವ, ರಾತ್ರಿ ದೊಡ್ಡ ರಂಗಪೂಜೆ, ರಥಬೀದಿ ಯಿಂದ ದೇವರ ಕಟ್ಟೆಗೆ ದೇವರ ಸವಾರಿ ಕಟ್ಟೆ ಪೂಜೆ ಸಿಡಿ ಮದ್ದು ಪ್ರದರ್ಶನ, ನೃತ್ಯ ಬಲಿ, ಬಟ್ಟಲು ಕಾಣಿಕೆ, ಕವಾಟ ಬಂಧನ. ಫೆ. 16ರಂದು ಬೆಳಿಗ್ಗೆ, ಕವಾಟೋದ್ಘಾಟನೆ, ಆರಟು ಬಲಿ, ಅರಾಟು ಉತ್ಸವ, ದೇವರ ಜಳಕ, ಕಟ್ಟೆ ಪೂಜೆ, ಬಟ್ಟಲು ಕಾಣಿಕೆ, ಕೋಡಿ ಇಳಿಸುವುದು, ಸಂಪ್ರೋಕ್ಷಣೆ ಸಂಜೆ ದೈವಗಳ ಭಂಡಾರ ಹೊರಡುವುದು ಬಳಿಕ ಪಿಲಿಚಾಮುಂಡಿ ಮತ್ತು ಅಂಗಣ ಪಂಜುರ್ಲಿ ದೈವಗಳಿಗೆ ನೇಮೋತ್ಸವ, ರಾತ್ರಿ ರಂಗಪೂಜೆ ನಡೆಯಲಿದೆ.

Related posts

ಕೊಯ್ಯೂರು : ಆದೂರು ಪೆರಲ್ ನಲ್ಲಿ ಕುಣಿತ ಭಜನೆ ತರಬೇತಿ ಉದ್ಘಾಟನೆ

Suddi Udaya

ಕಸ್ತೂರಿ ರಂಗನ್ ವರದಿಯ ವಿರುದ್ಧ ನಡೆಯಲಿರುವ ಪ್ರತಿಭಟನೆಗೆ ಬೆಳ್ತಂಗಡಿ ಕರ್ನಾಟಕ ಸಿರೋ ಮಲಬಾರ್ ಕ್ಯಾಥೋಲಿಕ್ ಅಸೋಸಿಯೇಷನ್ ನಿಂದ ಬೆಂಬಲ

Suddi Udaya

ಬೆಳಾಲು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ, ಗ್ರಾಮ ಸಮಿತಿಯ ವಾರ್ಷಿಕ ಕ್ರೀಡಾಕೂಟ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

Suddi Udaya

ಧರ್ಮಸ್ಥಳ ಗ್ರಾ.ಪಂ. ಡಿಜಿಟಲ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದಲ್ಲಿ ಯೋಗ ದಿನಾಚರಣೆ

Suddi Udaya

ಮುಂಡೂರು ಶ್ರೀ ಕ್ಷೇತ್ರ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಪೂಜೆ

Suddi Udaya
error: Content is protected !!