ಅರಸಿನಮಕ್ಕಿ : ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇದರ ಸಹಯೋಗದೊಂದಿಗೆ ಜೇನು ಕೃಷಿ ತರಬೇತಿ ಹಾಗೂ ಮಾಹಿತಿ ಕಾರ್ಯಕ್ರಮ ಫೆ.13 ರಂದು ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ “ಸಭಾಭವನದಲ್ಲಿ ನಡೆಯಲಿದೆ.
ಅಧ್ಯಕ್ಷತೆಯನ್ನು ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷ ರಾಘವೇಂದ್ರ ನಾಯಕ್ ವಹಿಸಲಿದ್ದಾರೆ. ಉದ್ಘಾಟನೆಯನ್ನು ರಾಜಗೋಪಾಲ್ ಪೆರಡೇಲು ಪ್ರಗತಿಪರ ಕೃಷಿಕರು ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಉಪಾಧ್ಯಕ್ಷ ರಾಜು ಕೆ. ಸಾಲಿಯಾನ್, ಸುಬ್ರಮಣ್ಯ ಡಿ. ಪಡ್ಡಾಯಿಬೆಟ್ಟು ಪ್ರಗತಿಪರ ಕೃಷಿಕರು, ಮೋಹನ ಗೌಡ ಶಿಶಿಲ ಪ್ರಗತಿಪರ ಕೃಷಿಕರು, ಭಾಗವಹಿಸಲಿದ್ದಾರೆ.
ಸಂಪನ್ಮೂಲ ವ್ಯಕ್ತಿವಾಗಿ ಪ್ರಸಿದ್ಧ ಜೇನು ಕೃಷಿಕರು ಮತ್ತು ತರಬೇತಿದಾರರು ವಾದ್ಯಕೋಡಿ ಶಾಮ ಭಟ್ ವಹಿಸಲಿದ್ದಾರೆ.
ಕೃಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಸದುಪಯೋಗವನ್ನು ಪಡೆಯುವಂತೆ ತಿಳಿಸಲಾಗಿದೆ.











