ಬೆಳ್ತಂಗಡಿ: ತನ್ನ ವೃತ್ತಿ ಬದುಕಿನೊಂದಿಗೆ ಪಾರಂಪರಿಕ ಕುಲಕಸುಬು ಆಗಿರುವ ಕಂಬಾರಿಕೆ ವೃತಿಯನ್ನು ಉಳಿಸಿ, ಯುವ ಪೀಳಿಗೆಗೆ ಕೊಂಡೊಯ್ಯುವ ನಿಟ್ಟಿನಲ್ಲಿ, ವೃತ್ತಿಯಲ್ಲಿ ವಕೀಲರು ಆಗಿರುವ, ವಿನೋದರ್ ಕುಂಬಾರ, ಇವರ ಸಾರಥ್ಯದಲ್ಲಿ ‘ವಿನು ಪೋಟರಿ ಸ್ಟುಡಿಯೋ’ ಇದರ ಅಧಿಕೃತ ಪೋಸ್ಟರ್’ ಅನ್ನು ಫೆ.13 ರಂದು ಬೆಳ್ತಂಗಡಿಯ ಖ್ಯಾತ ವಕೀಲರು ಸುಬ್ರಮಣ್ಯ ಕುಮಾರ್ ಆಗರ್ತ ಬಿಡುಗಡೆಗೊಳಿಸಿದರು.

ಪೋಸ್ಟರ್ ಬಿಡುಗಡೆ ಗೊಳಿಸಿ ಸಹದ್ಯೋಗಿ ವಕೀಲ ಹಾಗೂ ವೃತಿ ಶಿಷ್ಯ ವಿನೋದರ್ ಕುಂಬಾರರವರಿಗೆ ಶುಭ ಹಾರೈಸಿ ನಾಡಿನೆಲ್ಲಡೆ ಪಾರಂಪರಿಕವಾಗಿರುವ ಹಾಗೂ ಅಳಿವಿನಂಚಿನಲ್ಲಿರುವ ಕುಂಬಾರ ಕಸುಬನ್ನು ಉಳಿಸಿ ಬೆಳೆಸುವ ಈ ವಿಭಿನ್ನ ಪ್ರಯತ್ನವನ್ನು ನಾವೆಲ್ಲರೂ ಪ್ರೊತ್ಸಾಹಿಸಿ ಬೆಳೆಸೋಣ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಅನ್ನಪೂರ್ಣ, ವಕೀಲರಾದ ಉಮೇಶ್ ದೇವಾಡಿಗ, ಜಗದೀಶ್ ಎನ್. ಗೌಡ, ಚಂದ್ರಿಕಾ ನೆರಿಯ, ವಿಖ್ಯಾತ್ ಗೌಡ ಹಾಗೂ ಮಿತ್ರರಾದ ಕವಿತಾ, ಪೂಜಾರವರು ಉಪಸ್ಥಿತರಿದ್ದರು.











