September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕೊಕ್ಕಡ: ಉಪ್ಪಾರಪಳಿಕೆ-ಉಪ್ಪಾರಹಳ್ಳ ರಸ್ತೆಗೆ ಕಾಂಕ್ರೀಟ್ ಹಾಕಿ ಶ್ರಮದಾನ

ಕೊಕ್ಕಡ :ಕೊಕ್ಕಡ ಗ್ರಾಮದ ಉಪ್ಪಾರಪಳಿಕೆಯಿಂದ ಗೋಳಿತೊಟ್ಟು ಜಿಲ್ಲಾ ಪಂಚಾಯತ್ ರಸ್ತೆ ಉಪ್ಪಾರಹಳ್ಳದವರೆಗೆ ರಸ್ತೆಯಲ್ಲಿ ಉಂಟಾಗಿದ್ದ ದೊಡ್ಡ ದೊಡ್ಡ ಹೊಂಡಗಳನ್ನು ಕಾಂಕ್ರೀಟ್ ಹಾಕಿ ಮುಚ್ಚಲಾಯಿತು ಹಾಗೂ ರಸ್ತೆಯ ಬದಿಯ ಗಿಡಗoಟಿಗಳ ತೆರವು ಕಾರ್ಯವನ್ನು ಫೆ. 15ರಂದು ಶ್ರಮದಾನದ ಮೂಲಕ ಮಾಡಲಾಯಿತು.

ಶ್ರದ್ದಾ ಗೆಳೆಯರ ಬಳಗ ಉಪ್ಪಾರಪಳಿಕೆ, ಶ್ರೀಕೃಷ್ಣ ಭಜನಾ ಮಂದಿರ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಅಮೃತ ಗ್ರಾಮ ಪಂಚಾಯತ್ ಕೊಕ್ಕಡ ಹಾಗೂ ದಾನಿಗಳ ಸಹಕಾರದಲ್ಲಿ ಶ್ರಮದಾನವು ನಡೆಯಿತು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪರಮೇಶ್ವರ್, ಶ್ರೀ ಕಲ್ಕೂಡ ಕಲ್ಲುರ್ಟಿ ಗ್ರಾಮ ದೈವಸ್ಥಾನ ಕೆಂಪಕೋಡಿ ಟ್ರಸ್ಟ್ ಅಧ್ಯಕ್ಷರು ನಾರಾಯಣ ಗೌಡ ಆಳಂಬಿಲ, ಕಾರ್ಯದರ್ಶಿ ಜಗದೀಶ್ ಕೆಂಪಕೋಡಿ ಉಪಸ್ಥಿತರಿದ್ದು ಶುಭ ಹಾರೈಸಿದರು.

ಕಾಂಕ್ರೀಟ್ ಕಾಮಗಾರಿಗೆ ವಾಹನ ವನ್ನು ಶ್ರೀಕಾಂತ್ ಬಡೆಕಾಯಿಲ್ ಹಾಗೂ ಶ್ರೀಪಾದ್ ಬಡೆಕಾಯಿಲ್ ನೀಡಿದರು. ಅನ್ನದಾನದ ವ್ಯವಸ್ಥೆಗೆ ಜಯಪ್ರಕಾಶ್ ಕಲ್ಲಡ್ಕ ದೇರಾಜೆ ರೆಂಜೆರ್ ಮಂಗಳೂರು ಸಹಕರಿಸಿದರು.

ಈ ಸಂದರ್ಭ ಶ್ರೀಕೃಷ್ಟ ಭಜನಾ ಮಂದಿರ ಸೇವಾ ಟ್ರಸ್ಟ್ ಗೌರವಾಧ್ಯಕ್ಷ ಯೋಗೀಶ್ ಆಳಂಬಿಲ, ಅಧ್ಯಕ್ಷ ಶ್ರೀನಾಥ್ ಬಡೆಕಾಯಿಲ್ ಹಾಗೂ ಪದಾಧಿಕಾರಿಗಳು, ಸದಸ್ಯರು, ಶ್ರದ್ದಾ ಗೆಳೆಯರ ಬಳಗದ ಅಧ್ಯಕ್ಷ ಜೀವನ್ ಕೊಡಿಗೇoರಿ, ಕಾರ್ಯದರ್ಶಿ ಶ್ರೀಪಾದ್ ಬಡೆಕಾಯಿಲು ಹಾಗೂ ಪದಾಧಿಕಾರಿಗಳು, ಸದಸ್ಯರು, ಭಜನಾ ಮಂದಿರ ಪ್ರಾರಂಭೋತ್ಸವ ಸಮಿತಿ ಕಾರ್ಯದರ್ಶಿ ಶಿವಾನಂದ ಸಂಕೇಶ ಉಪಸ್ಥಿತರಿದ್ದು, ಸಹಕರಿಸಿದರು.

Related posts

ಕಲ್ಮಂಜದಲ್ಲಿ ಕಾಡಾನೆಗಳ ಹಾವಳಿ: ಬಾಳೆ ಕೃಷಿ, ಅಡಿಕೆ ಬೆಳೆ ಹಾನಿ

Suddi Udaya

ವೇಣೂರು: ಪಡ್ಡಂದಡ್ಕ ನೂರುಲ್ ಹುಧಾ ಮಸೀದಿಯಲ್ಲಿ ಸಂಭ್ರಮದ ಈದುಲ್ ಅಧಾ ಆಚರಣೆ

Suddi Udaya

ಬೆಳ್ತಂಗಡಿ ಪ.ಪಂ. ವ್ಯಾಪ್ತಿಯಲ್ಲಿ ಮಳೆಯಿಂದ ಹಾನಿಗೊಳಗಾದರೆ ಪ.ಪಂ. ಸಹಾಯವಾಣಿ ತಿಳಿಸುವಂತೆ ಮುಖ್ಯಾಧಿಕಾರಿ ಮನವಿ

Suddi Udaya

ಕಡಿರುದ್ಯಾವರದಲ್ಲಿ ಗಾಳಿ ಮಳೆಗೆ ಮನೆಯ ಮೇಲೆ ಬಿದ್ದ ಬೃಹದಾಕಾರದ ಮರ: ವಾಸ್ತವ್ಯದ ಮನೆಗೆ ಭಾಗಶಃ ಹಾನಿ, ಮನೆಯಲ್ಲಿದ್ದವರು ಪ್ರಾಣಪಾಯದಿಂದ ಪಾರು

Suddi Udaya

ನಡ ಜಮಲಾಬಾದ್ ಈದ್ಗ ಮೈದಾನದಲ್ಲಿ ಈದ್ ಆಚರಣೆ

Suddi Udaya

ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನಕ್ಕೆ ಪ್ರೋತ್ಸಾಹ :ಎಸ್.ಡಿ.ಎಂ ಪ್ರತಿಪಾದನೆಗೆ ರಾಷ್ಟಮಟ್ಟದ ಮನ್ನಣೆ

Suddi Udaya
error: Content is protected !!