July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕುಂಟಾಲಪಲ್ಕೆ ಶ್ರೀ ಸರಸ್ವತಿ ಭಜನಾ ಮಂಡಳಿಯ ಬೆಳ್ಳಿ ಹಬ್ಬ ಸಂಭ್ರಮ-ಭಜನಾ ಕಮ್ಮಟೋತ್ಸವ


ಬಂದಾರು: ಶ್ರೀ ಸರಸ್ವತಿ ಭಜನಾ ಮಂಡಳಿ ಕುಂಟಾಲಪಲ್ಕೆಯ ಬೆಳ್ಳಿಹಬ್ಬ ಸಂಭ್ರಮ ಮತ್ತು ಭಜನಾ ಕಮ್ಮಟೋತ್ಸವವು ಫೆ. 14 ರಂದು ನಡೆಯಿತು.

ಬೆಳಗ್ಗೆ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಯೋಜನಾ ನಿರ್ದೇಶಕರಾದ ದಿನೇಶ್ ಡಿ ಮಾತನಾಡಿ, ಕಳೆದ 25 ವರ್ಷಗಳ ಹಿಂದೆ ಹಿರಿಯರ ಶ್ರಮ, ಶ್ರದ್ಧೆ, ಭಕ್ತಿಯಿಂದ ಪ್ರಾರಂಭಿಸಿದ ಈ ಮಂಡಳಿಯನ್ನು ಈಗಿನ ಕಿರಿಯರು ಅಭಿವೃದ್ಧಿ ಪಡಿಸಿಕೊಂಡು ರಜತ ಸಂಭ್ರಮ ವನ್ನು ಆಚರಣೆ ಮಾಡುತ್ತಿರುವುದು ಶ್ಲಾಘನೀಯ ಕೆಲಸ. ಎಳೆಯ ಮಕ್ಕಳಲ್ಲಿ ಸಂಸ್ಕಾರ ಬೆಳೆಸುವ ಕಾರ್ಯದ ಜೊತೆಗೆ ಊರಿನ ಅಭಿವೃದ್ಧಿಗೂ ಪ್ರೇರಣೆಯಾಗಿ ನಿಲ್ಲಬೇಕೆಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ನಿವೃತ್ತ ಮುಖ್ಯೋಪಾಧ್ಯಾಯರಾದ ಅನಂತರಾಮ ಶಬರಾಯ ಮಾತನಾಡಿ,’ ಭಜನೆಗೊಂದು ಶಕ್ತಿಯಿದೆ,ಜನ ಸಾಮಾನ್ಯರಿಗೆ ಸರಳವಾಗಿ ದೇವರನ್ನು ಒಲಿಸಿಕೊಳ್ಳಲು ಭಜನೆ ಉತ್ತಮ ದಾರಿ’ ಎಂದರು.ಧಾರ್ಮಿಕ ಮುಖಂಡರಾದ ಕಿರಣ್ ಚಂದ್ರ ಪುಷ್ಪಗಿರಿ ಮಾತನಾಡಿ,’ಧಾರ್ಮಿಕತೆ ಗ್ರಂಥ ಓದುವುದರಿಂದ, ಯಾರದೋ ಉಪದೇಶದಿಂದ ಬರುವುದಲ್ಲ, ನಮ್ಮೊಳಗೆ ಅಳವಡಿಸಿಕೊಂಡಾಗ ಮಾತ್ರ ನಮ್ಮದಾಗುತ್ತದೆ.ಪ್ರಕೃತಿಯನ್ನು ಆರಾಧಿಸುವ ಸಂಸ್ಕೃತಿ ನಮ್ಮದು.ಹಿರಿಯರಿಂದ ಬಂದಂತಹ ಆಚಾರ ವಿಚಾರಗಳು, ಪದ್ದತಿಗಳು ಇಂದಿನ ಯುವ ಪೀಳಿಗೆ ಗೌರವಿಸಿ ಮುಂದುವರಿಸಿಕೊಂಡು ಹೋಗಬೇಕು. ಭಜನಾ ಮಂಡಳಿಯ ಅಭಿವೃದ್ಧಿಗೆ ಸಹಕರಿಸುವುದಾಗಿ ಭರವಸೆ ನೀಡಿದರು.

ನಿವೃತ್ತ ಯೋಧರಾದ ರಮೇಶ್ ಕೊಂಕನೊಟ್ಟು, ಬಂದಾರು ಗ್ರಾ.ಪಂ.ಅಧ್ಯಕ್ಷರಾದ ದಿನೇಶ್ ಖಂಡಿಗ,ಕುಂಟಾಲಪಲ್ಕೆ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಗಾಯತ್ರಿ ಕೆ, ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ಬಾಲಕೃಷ್ಣ ಗೌಡ ನೆಲ್ಲಿಗೇರು, ಮಹಮ್ಮಾಯಿ ಗುಡಿಯ ಅಧ್ಯಕ್ಷರಾದ ಧರ್ಣಪ್ಪಗೌಡ ಕೋಡ್ಯೇಲು, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಜೇಶ್ ಕಲ್ಲಿಮಾರು ಉಪಸ್ಥಿತರಿದ್ದರು. ಭಜನಾ ಮಂಡಳಿಯ ಅಧ್ಯಕ್ಷರಾದ ಬಾಲಕೃಷ್ಣ ಗೌಡ ಕಜೆ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಪುಲ್ವಾಮ ದಾಳಿಯ ಹುತಾತ್ಮರಿಗೆ ‘ಯೋಧ ನಮನ’ ಸಲ್ಲಿಸಲಾಯಿತು. ಅಗಲಿದ ಭಜನಾ ಮಂಡಳಿಯ ಪದಾಧಿಕಾರಿಗಳಿಗೆ ಮೌನ ಪ್ರಾರ್ಥನೆ ಮಾಡಲಾಯಿತು. ಭಜನಾ ಮಂಡಳಿಯ ರಜತ ಸಂಭ್ರಮಕ್ಕೆ ವಿವಿಧ ರೀತಿಯಲ್ಲಿ ಕೊಡುಗೆಗಳನ್ನು ನೀಡಿದ ದಾನಿಗಳನ್ನು ಗೌರವಿಸಲಾಯಿತು. ಶಾಲಾ ಮಕ್ಕಳಾದ ಸುಸ್ಮಿತ,ಕಾವ್ಯ ಮತ್ತು ಸುಭಿಕ್ಷಾ ಪ್ರಾರ್ಥನೆ ನೇರವೆರಿಸಿದರು.ಮಂಡಳಿಯ ಸದಸ್ಯರಾದ ನಿತಿನ್ ಕೋಡ್ಯೇಲು ಸ್ವಾಗತಿಸಿ, ಶಿಕ್ಷಕರಾದ ಸುರೇಶ್ ಮಾಚಾರ್ ನಿರೂಪಿಸಿದರು. ಸದಸ್ಯರಾದ ಶ್ರವಣ್ ನೆಲ್ಲಿಗೇರು ವಂದಿಸಿದರು‌. ಕಾರ್ಯದರ್ಶಿಗಳಾದ ಸುರೇಶ್ ನಡುಮಜಲು, ಕೋಶಾಧಿಕಾರಿ ಸತೀಶ್ ಕೋಡ್ಯೇಲು, ಉಪಾಧ್ಯಕ್ಷರಾದ ಕೃಷ್ಣಪ್ಪ ಗೌಡ, ಸದಸ್ಯರು ಸಹಕರಿಸಿದರು. ಅಂಗನವಾಡಿ ಮಕ್ಕಳಿಂದ ಮತ್ತು ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು.

ಸಂಜೆ ಕುಣಿತಾ ಭಜನಾ ಗುರುಗಳಾದ ನಾಗೇಶ್ ಬಿ.ನೆರಿಯ ಸಾರಥ್ಯದಲ್ಲಿ ನಡೆದ ಭಜನಾ ಕಮ್ಮಟೋತ್ಸವದಲ್ಲಿ ತಾಲೂಕಿನ ಸುಮಾರು 21 ಭಜನಾ ತಂಡಗಳು ಏಕಕಾಲದಲ್ಲಿ ಆಕರ್ಷಕ ಕುಣಿತ ಭಜನೆಯ ಮೂಲಕ ಮನಸೆಳೆದರು. ಶಾಸಕರಾದ ಹರೀಶ್ ಪೂಂಜ ಪಾಲ್ಗೊಂಡು ಶುಭ ಹಾರೈಸಿದರು.ರಾತ್ರಿ ಗಯಾಪದ ಕಲಾವಿದೆರ್ ಉಬಾರ್ ಅಭಿನಯಿಸಿದ ‘ನಾಗಮಾಣಿಕ್ಯ’ ನಾಟಕ ಪ್ರದರ್ಶನ ನಡೆಯಿತು.

Related posts

ಬೆಳ್ತಂಗಡಿ ಯುವವಾಹಿನಿ ಮಹಿಳಾ ಸಂಚಲನಾ ಸಮಿತಿಯಿಂದ “ಮನಸು “ಅಂತರಾಳದ ಅವಲೋಕನ

Suddi Udaya

ಉಜಿರೆ ಲಕ್ಷ್ಮಿ ಗ್ರೂಪ್ ಮಾಲಕ ಮೋಹನ್ ಕುಮಾರ್ ರವರಿಂದ ಯೋಗಾಸನ ಸ್ಪರ್ಧೆಗೆ ವಿದ್ಯಾರ್ಥಿಗಳಿಗೆ ಯೂನಿಪಾರ್ಮ್ ವಿತರಣೆ

Suddi Udaya

ಬಸ್ ಸಮಸ್ಯೆ: ಜುಲೈ 1ರಂದು ಬೆಳ್ತಂಗಡಿಯಲ್ಲಿ ಶಾಸಕರಿಂದ ಜನಸ್ಪಂದನ ಕಾರ್ಯಕ್ರಮ: ಸಾವ೯ಜನಿಕ ಅಹವಾಲು ಸ್ವೀಕಾರ ಮತ್ತು ಮಾಹಿತಿ ಕಾರ್ಯಕ್ರಮ

Suddi Udaya

ಕೊಯ್ಯೂರು ಪಂಚದುರ್ಗ ಸಂಜೀವಿನಿ ಗ್ರಾ.ಪಂ. ಮಟ್ಟದ ಮಹಿಳಾ ಒಕ್ಕೂಟದ ವಾರ್ಷಿಕ ಮಹಾಸಭೆ

Suddi Udaya

ಒಂದು ವಾರದ ಒಳಗೆ ಬೆಳೆ ವಿಮೆ ರೈತರ ಖಾತೆಗೆ ಜಮೆ ಮಾಡದೇ ಇದ್ದಲ್ಲಿ ಕಾನೂನು ಹೋರಾಟ : ರಕ್ಷಿತ್ ಪಣೆಕ್ಕರ

Suddi Udaya

8 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ್ದ ಬೆಳ್ತಂಗಡಿ ಪೊಲೀಸರು

Suddi Udaya
error: Content is protected !!