ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ಸಾಮೂಹಿಕ ಯೋಗ ಶಿವ ನಮಸ್ಕಾರ

ಬೆಳ್ತಂಗಡಿ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ಕೇಂದ್ರ ಕಛೇರಿ ತುಮಕೂರು, ನೇತ್ರಾವತಿ ವಲಯ‌, ಮಂಗಳೂರು ಹಾಗೂ ಶ್ರೀ ಕ್ಷೇತ್ರ ಸದಾಶಿವ ರುದ್ರ ದೇವಸ್ಥಾನ ಸುರ್ಯ ಇವರ ಸಹಯೋಗದಲ್ಲಿ ಶ್ರೀ ಸದಾಶಿವ ರುದ್ರ ದೇವಸ್ಥಾನದ ಸನ್ನಿಧಾನದಲ್ಲಿ ಬೆಳ್ತಂಗಡಿಯ ಯೋಗಬಂಧುಗಳು ಶಿವರಾತ್ರಿಯ ಪ್ರಯುಕ್ತ ಫೆಬ್ರವರಿ 15 ರಿಂದ ಫೆ. 16 ರ ಮುಂಜಾನೆ 6 ಗಂಟೆಯವರೆಗೆ ಶಿವ ಭಜನೆ, ಶಿವ ಅಷ್ಟೋತ್ತರ ಶತನಾಮಾವಳಿ ಪಠಣ, 108 ಬಾರಿ ಮೃತ್ಯುಂಜಯ ಮಂತ್ರಜಪ‌, 1008 ಬಾರಿ ಶಿವಪಂಚಾಕ್ಷರಿ ಜಪ ಹಾಗೂ 4 ಆವೃತ್ತಿಯಲ್ಲಿ 11 ಬಾರಿ ಯೋಗ ಶಿವ ನಮಸ್ಕಾರ ಕಾರ್ಯಕ್ರಮವು ನಡೆಯಿತು.

ನೂರಾರು ಯೋಗ ಹಾಗೂ ಯೋಗೇತರ ಬಂಧುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೃತಾರ್ಥರಾದರು‌.
ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ಸತೀಶ್ಚಂದ್ರ ಸುರ್ಯಗುತ್ತು ಇವರು ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ರಾಜಶೇಖರ ಅಜ್ರಿ, ಮುನಿರಾಜ ಅಜ್ರಿ ಹಾಗೂ ಸಂಗ್ರಾಮ್ ವೇದಿಕೆಯಲ್ಲಿದ್ದು ಶುಭ ಹಾರೈಸಿದರು. ಪ್ರಾಂತ ಸಂಘಟನಾ ಪ್ರಮುಖರಾದ ಹರೀಶ್, ಜಿಲ್ಲಾ ಸಂಚಾಲಕರಾದ ನಾರಾಯಣ, ಪ್ರಾಂತ ಪ್ರಶಿಕ್ಷಣ ಪ್ರಮುಖರಾದ ಪ್ರತಾಪ್, ಜಿಲ್ಲಾ ಸಹ ಸಂಚಾಲಕ ಯೋಗೀಶ್, ಜಾಲತಾಣ ಪ್ರಮುಖರಾದ ಅನುಪಮಾ ಬೆಳ್ತಂಗಡಿ, ಶಾಖಾ ಸಂಚಾಲಕ ವಸಂತ ಕೆಂಬರ್ಜೆ ಹಾಗೂ ಕಾರ್ಯಕ್ರಮದ ಸಂಚಾಲಕ ಗಣಪತಿ ಉಪಸ್ಥಿತರಿದ್ದರು.

ವಿವರಣೆಯಲ್ಲಿ ಮಾನಸ, ಸುರೇಶ, ಸಂತೋಷ್ ಕರ್ಕೇರ, ಐಶ್ವರ್ಯ, ಕೋಮಲ ಹಾಗೂ ಪ್ರಾತ್ಯಕ್ಷಿಕೆಯಲ್ಲಿ ಆಶಾ, ನಾಗಶ್ರೀ, ಪುಷ್ಪಾ, ರಕ್ಷಿತಾ, ಸೌಮ್ಯ, ಆನಂದ, ಅರುಣ್, ಪ್ರಶಾಂತ‌, ಪ್ರಕಾಶ‌, ನಾಗೇಶ ಇವರುಗಳು ಜೋಡಿಸಿಕೊಂಡಿದ್ದರು.

ಶ್ರೀಮತಿ ಆಶಾ ಹಾಗೂ ರಘುನಾಥ ಶಾಂತಿ ದಂಪತಿಗಳು ಅಗ್ನಿಹೋತ್ರವನ್ನು ನಿರ್ವಹಿಸಿದರು. ಜಿಲ್ಲಾ ಸಮಿತಿಯ ಮಾರ್ಗದರ್ಶನದೊಂದಿಗೆ, ಬೆಳ್ತಂಗಡಿ ಶಾಖೆಯ ಮುಖ್ಯ ಶಿಕ್ಷಕಿ ಶ್ರೀಮತಿ ಪ್ರೇಮಲತಾ ಗಣೇಶ್ ಹಾಗೂ ಶಿಕ್ಷಕರಾದ ಸಂತೋಷ್ ಕಾಪಿನಡ್ಕ ಕೋಮಲ ಪ್ರಕಾಶ್ ಇವರ ನೇತೃತ್ವದಲ್ಲಿ ಎಲ್ಲಾ ಯೋಗ ಬಂಧುಗಳ ಸಹಕರಿಸಿದರು.

Related posts

ಮಳೆ ಹಿನ್ನೆಲೆ: ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

Suddi Udaya

ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ವಲಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆ

Suddi Udaya

ಬೆಳ್ತಂಗಡಿ ಸಂತ ತೆರೇಸಾ ಪ್ರೌಢಶಾಲೆಯಲ್ಲಿ ತ್ರಿವಳಿ ಸಂಭ್ರಮ

Suddi Udaya

ಬೆಳ್ತಂಗಡಿ ತಾಲೂಕು ಆದಿದ್ರಾವಿಡ ಸಮಾಜ ಸೇವಾ ಸಂಘದ ವತಿಯಿಂದ ದಿ| ಅಮ್ಮುಕುಮಾರ್ ರವರಿಗೆ ನುಡಿನಮನ

Suddi Udaya

ಗಾಳಿ ಮಳೆಗೆ ಸವಣಾಲು ಬೇಬಿಯವರ ಮನೆಗೆ ಹಾನಿ

Suddi Udaya

ಪೆರಿಂಜೆ : ಭಗವಾನ್ ಪುಷ್ಪದಂತ ಸ್ವಾಮಿ ಬಸದಿಯಲ್ಲಿ ಮಂಗಲಪ್ರವಚನ

Suddi Udaya
error: Content is protected !!