ಮಡಂತ್ಯಾರು: ರುದ್ರಗಿರಿ ಶ್ರೀ ಮೃತ್ಯುಂಜಯ ದೇವಸ್ಥಾನದಲ್ಲಿ ಮಾ. 13 , 14 ರಂದು ನಡೆಯುವ ಜಾತ್ರೋತ್ಸವ & ನೇಮೋತ್ಸವದ ಆಮಂತ್ರಣ ಪತ್ರಿಕೆಯನ್ನು ಶಾಸಕ ಹರೀಶ್ ಪೂಂಜಾರವರು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಗೌರವಧ್ಯಕ್ಷ ಮಾಧವ ಜೋಗಿತ್ತಾಯ, ಪ್ರಧಾನ ಅರ್ಚಕ ಆಶೋಕ್ ಭಟ್ , ಮತ್ತು ಟ್ರಸ್ಟ್ ನ ಕಾರ್ಯದರ್ಶಿ ದೇಜಪ್ಪ ಪೂಜಾರಿ ಅಳಕ್ಕೆ , ಟ್ರಸ್ಟ್ ನ ಸದಸ್ಯರಾದ ದುಗ್ಗಪ್ಪ ಗೌಡ ಪೊಸಂದೋಡಿ, ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಪ್ರಭಾಕರ ಗೌಡ ಪೊಸಂದೋಡಿ , ಶಾರದಾಂಬ ಭಜನಾ ಮಂಡಳಿ ತಣ್ಣಿರುಪಂಥ ಅಧ್ಯಕ್ಷ ಮಿಥನ್ ಕುಲಾಲ್ , ಮತ್ತು ವ್ಯವಸ್ಥಾಪನ ಸಮಿತಿ ಪದಾಧಿಕಾರಿಗಳು ಮತ್ತು ಸದಸ್ಯರು, ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು, ಜಾತ್ರೋತ್ಸವದ ಸಮಿತಿಯ ಅಧ್ಯಕ್ಷ ಕಮಲಾಕ್ಷ ಕರ್ಪಾಡಿ , ಉಪಾಧ್ಯಕ್ಷ ವಜ್ರ ಕುಮಾರ್ ಅಂತರ, ಕಾರ್ಯದರ್ಶಿ ರಾಘವ ಸನ್ನಿಧಿ ಸ್ಟೋರ್ , ಹಾಗೂ ಜಾತ್ರೋತ್ಸವ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ವರಮಹಾಲಕ್ಷ್ಮಿ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು, ಭಜನಾ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಬೈಲುವಾರು ಸಮಿತಿಯ ಸದಸ್ಯರು . ಹಾಗೂ ಊರಿನ ಸಮಸ್ತ ಭಕ್ತರು ಉಪಸ್ಥಿತರಿದ್ದರು.











