30 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬಿಸಿಲ ಝಳಕ್ಕೆ ತಂಪೆರೆದ ವರುಣ


ಬೆಳ್ತಂಗಡಿ: ಹಗಲಿನಲ್ಲಿ ಸೂರ್ಯನ ತಾಪಕ್ಕೆ ಕಾದಿದ್ದ ಭೂಮಿಗೆ ಬೆಳ್ತಂಗಡಿ ತಾಲೂಕಿನ ವಿವಿಧ ಕಡೆ ಫೆ.21ರಂದು ವರುಣನ ಆಗಮನದಿಂದ ತಂಪಿನ ಸ್ಪರ್ಶ ನೀಡಿತು.

ನಾರಾವಿ, ಕಾಶಿಪಟ್ಣ, ಕಡಿರುದ್ಯಾವರ, ನಡ, ಕಕ್ಕಿಂಜೆ, ನೆರಿಯ, ನಿಡ್ಲೆ ,ಅರಸಿನಮಕ್ಕಿ, ಚಾರ್ಮಾಡಿಯಲ್ಲಿ ಗುಡುಗು ಸಹಿತ ಮಳೆ ಆಗಿದೆ ,ಮಿತ್ತಬಾಗಿಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಕ್ಕಾವು ಮತ್ತು ಕಾಜೂರು ಧರ್ಮಸ್ಥಳ, ಬಳಂಜ ಪರಿಸರದಲ್ಲಿ ತುಂತುರು ಸಾಧರಣ ಮಳೆಯಾಗಿದೆ. ಗುರುವಾಯನಕೆರೆ, ಮಡಂತ್ಯಾರು, ಬೆಳ್ತಂಗಡಿ ಸಹಿತ ನಾನಾ ಭಾಗದಲ್ಲಿ ಗುಡುಗು ಸಹಿತ ಮೋಡ ಕವಿದ ವಾತವಾರಣವಿದೆ. ಮನೆ ಅಂಗಳದಲ್ಲಿ ಒಣಗಲು ಹಾಕಿದ ಅಡಕೆಗಳನ್ನು ರಭರಭಸನೆ ತುಂಬಿಸುವ ದೃಶ್ಯಗಳು ಕಂಡು ಬಂದವು.

ಕಕ್ಕಿಂಜೆ ಬಸ್ತಿ ಸಮಿಪ ಗಾಳಿ ಮಳೆಗೆ ಮರವೊಂದು ವಿದ್ಯುತ್ ತಂತಿ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ಮುರಿದು ಬಿದ್ದಿದೆ ಎಂದು ತಿಳಿದು ಬಂದಿದೆ. ಒಟ್ಟಿನಲ್ಲಿ ಬಿಸಿಲ ಝಳಕ್ಕೆ ವರುಣ ತಂಪೆರೆದಿದೆ.

Related posts

ಕಾಲು ಸೇತುವೆ ಬಿರುಕು ಸಂಪರ್ಕ ಕಡಿತ ಭೀತಿ

Suddi Udaya

ನಿಡ್ಲೆ ಬೂತ್ ಗೆ ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್ ಭೇಟಿ

Suddi Udaya

ನಡ : ಗ್ರಾಮ ಪಂಚಾಯತ್ ಗ್ರಾಮಸಭೆ

Suddi Udaya

ಪಡಂಗಡಿ ಗ್ರಾ.ಪಂ. ಸದಸ್ಯ ಹಾಮದ್ ಬಾವ ಹೃದಯಾಘಾತದಿಂದ ನಿಧನ

Suddi Udaya

ಮೈರೋಳ್ತಡ್ಕ ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆಯ ಒಕ್ಕೂಟದ ಸದಸ್ಯರಿಂದ ಬಂದಾರು ಶಾಲೆಯಲ್ಲಿ ಸ್ವಚ್ಛತಾ ಶ್ರಮದಾನ

Suddi Udaya

ಮತ್ಸ್ಯ ತೀರ್ಥ ಶಿಶಿಲ ದೇವಸ್ಥಾನಕ್ಕೆ ಹೆಗ್ಗಡೆ ದಂಪತಿ ಭೇಟಿ

Suddi Udaya
error: Content is protected !!