ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ವಿವಿಧ ಕಡೆ ಫೆ.21ರಂದು ವರುಣನ ಆಗಮನದಿಂದ ತಂಪಿನ ಸ್ಪರ್ಶ ನೀಡಿತು. ಆದರೆ ಕೆಲವು ಕಡೆಗಳಲ್ಲಿ ಸುರಿದ ಭಾರಿ ಗಾಳಿ ಮಳೆಗೆ ಅಪಾರ ಹಾನಿಯುಂಟಾಗಿದ್ದು,
ರೆಖ್ಯ ಗ್ರಾಮದ ಕೆಲೆಂಜಿನೋಡಿಯ ಪಂಚಾಯತ್ ಮಾಜಿ ಅಧ್ಯಕ್ಷ ನವೀನ್ ರವರ ಮನೆಯ ಹಂಚು ಹಾಗೂ ಸೀಟು ಹಾರಿ ಹೋಗಿ ಅಪಾರ ಹಾನಿಯುಂಟಾಗಿತ್ತು. ನಂತರ ಗ್ರಾಮಸ್ಥರು ಸೇರಿ ದುರಸ್ತಿ ಕಾರ್ಯ ನಡೆಸಿದರು.











