ಬೆಳ್ತಂಗಡಿ: ಬೈಕ್ ಅಪಘಾತದಿಂದ ಗಾಯಗೊಂಡ ಕಳೆಂಜ ಗ್ರಾಮದ ಪಂಚಮಿಪಾದೆ ನಿವಾಸಿ ಶಶಿಧರ ಹಾಗೂ ಕಳೆಂಜ ಗ್ರಾಮ ಮಡ್ಯಾದ ಗುಡ್ಡೆ ನಿವಾಸಿ ಗೋಪಾಲಕೃಷ್ಣ ಅವರನ್ನ ಬೆನಕ ಹಾಸ್ಪಿಟಲ್ ನಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ ಎಂ ನಾಗೇಶ್ ಕುಮಾರ್ ಗೌಡ ಭೇಟಿ ಮಾಡಿ ಕುಟುಂಬದವರಿಗೆ ಧೈರ್ಯ ತುಂಬಿದರು ಹಾಗೂ ಆರ್ಥಿಕವಾಗಿ ಸಹಾಯ ಮಾಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಶರತ್ ಕಳೆಂಜ, ಶ್ರೀಧರ್ ಕಳೆಂಜ, ವಿಜಯಲಕ್ಷ್ಮಿ ಎನ್.ಡಿ, ಶೋಭಾ ನಾರಾಯಣ ಗೌಡ, ಕಾವ್ಯ ಗಣೇಶ್ ನಿಡ್ಲೆ ಉಪಸ್ಥಿತರಿದ್ದರು.











