September 6, 2026
ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ನಾಳ: ದ್ವಿತೀಯ ವರ್ಷದ ಶ್ರೀ ದುರ್ಗಾ ಕಪ್ ಹಿರಿಯರ ಕ್ರಿಕೆಟ್ ಪಂದ್ಯಾಟ

ನಾಳ: 40 ವರ್ಷ ಮೇಲ್ಪಟ್ಟ ವಯೋಮಾನದ ಹಿರಿಯ ಕ್ರೀಡಾಪಟುಗಳ ಶ್ರೀದುರ್ಗಾ ಕಪ್ ಕ್ರಿಕೆಟ್ ಪಂದ್ಯಾಟ ಮಾ.2ರಂದು ನಾಳ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ರಥಬೀದಿಯಲ್ಲಿ ನಡೆಯಿತು.

ನಾಳ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ. ರಾಘವೇಂದ್ರ ಅಸ್ರಣ್ಣ ದೀಪ ಪ್ರಜ್ವಲನೆಗೊಳಿಸುವ ಮೂಲಕ ಪಂದ್ಯಾಟಕ್ಕೆ ಚಾಲನೆ ನೀಡಿದರು.

ಸಂಜೆ ನಡೆದು ಸಮಾರೋಪ ಸಮಾರಂಭದಲ್ಲಿ ಕಳಿಯ ಗ್ರಾ.ಪಂ. ಪ್ರಭಾರ ಪಿಡಿಒ ಕುಂಞ, ನಾಳ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್, ಉಪನ್ಯಾಸಕ ಕೇಶವ ಬಂಗೇರ, ಹಿರಿಯ ಕ್ರೀಡಾಪಟುಗಳಾದ ತುಕರಾಮ್ ಪೂಜಾರಿ, ಸುರೇಶ್ ಕುಮಾರ್ ಆರ್.ಎನ್., ಪ್ರಶಸ್ತಿ ವಿತರಿಸಿದರು.

ಸುಂದರ ನಾಯ್ಕ್ ಕುಳಾಯಿ, ಶರತ್ ಕುಮಾರ್ ಕುಳಾಯಿ, ಸುಭಾಷಿಣಿ ಜನಾರ್ದನ ಗೌಡ ಕುಳಾಯಿ, ವಿಕ್ರಂ ವಂಜಾರೆ ಹಾಗೂ ಸಿದ್ದಪ್ಪ ಗೌಡ ಹಾಕೋಟೆ ಅವರು ಪಂದ್ಯಾಟವನ್ನು ಸಂಘಟಿಸಿದ್ದರು.

ಲೀಗ್ ಮಾದರಿಯಲ್ಲಿ ನಡೆದ ಈ ಕ್ರಿಕೆಟ್ ಪಂದ್ಯಾಟದಲ್ಲಿ ಆರು ತಂಡಗಳು ಭಾಗವಹಿಸಿದ್ದವು. ದುರ್ಗಾಪರಮೇಶ್ವರಿ ವಾರಿಯರ್ಸ್ ಎಸ್. ಆರ್ ತಂಡ ಪ್ರಥಮ ಸ್ಥಾನವನ್ನು, ಜ್ಯೋತಿ ಎಂಟರ್ ಪ್ರೈಸಸ್ ದ್ವಿತೀಯ ಸ್ಥಾನವನ್ನು ತನ್ನದಾಗಿಸಿಕೊಂಡಿತು. ಶ್ರೀ ದುರ್ಗಾ ವಾರಿಯರ್ಸ್ ನಾಳ ತೃತೀಯ ಸ್ಥಾನವನ್ನು, ಶುಭೋದಯ ಕುಳಾಯಿ ತಂಡವು ಚತುರ್ಥ ಸ್ಥಾನವನ್ನು ಪಡೆದುಕೊಂಡಿತು.

Related posts

ಗೋಳಿಯಂಗಡಿ ಬದ್ರಿಯಾ ಜುಮಾ ಮಸ್ಜಿದ್ ಯಲ್ಲಿ ಈದ್ ಹಬ್ಬ ಆಚರಣೆ

Suddi Udaya

ಫೆ.14: ಕರಂಬಾರು ಬೊಟ್ಯೆಲ್ಮಾರಿನಲ್ಲಿ ಶ್ರೀ ಕೊಡಮಣಿತ್ತಾಯ ಮತ್ತು ಪರಿವಾರ ದೈವಗಳ ನೇಮೋತ್ಸವ

Suddi Udaya

ಮಲವಂತಿಗೆ ಶ್ರೀ ವಿದ್ಯಾ ಗಣಪತಿ ಪೂಜ್ಯೋತ್ಸವ ಸಮಿತಿ ಅಧ್ಯಕ್ಷರಾಗಿ ತೀಕ್ಷಿತ್ ಕೆ., ಕಾರ್ಯದರ್ಶಿಯಾಗಿ ಜಯಂತ ಹೆಗ್ಡೆ ಆಯ್ಕೆ

Suddi Udaya

ಸ್ಪಂದನಾ ನಿಧನ: ಬೆಳ್ತಂಗಡಿ ಬ್ಲಾಕ್ ಕಾಂಗ್ರೇಸ್ ಸಂತಾಪ

Suddi Udaya

ಯಂಗ್ ಡೆಮಾಕ್ರಟ್ಸ್ ಮಂಗಳೂರು ಗ್ರಾಮಾಂತರ ಜಿಲ್ಲಾ ಸಂಘಟನಾ ಸಮಿತಿ ಕನ್ವಿನರ್ ಆಗಿ ನ್ಯಾಯವಾದಿ ಅಸ್ಮಾ ಬೆಳ್ತಂಗಡಿ ಆಯ್ಕೆ

Suddi Udaya

ಮೇಲಂತಬೆಟ್ಟು ಬದಿನಡೆ ಶ್ರೀ ನಾಗಬ್ರಹ್ಮ ದೇವಸ್ಥಾನದಲ್ಲಿ ನಾಗ ದೇವರಿಗೆ ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ

Suddi Udaya
error: Content is protected !!