23.5 C
ಪುತ್ತೂರು, ಬೆಳ್ತಂಗಡಿ
June 8, 2026
ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ನಾಳ: ದ್ವಿತೀಯ ವರ್ಷದ ಶ್ರೀ ದುರ್ಗಾ ಕಪ್ ಹಿರಿಯರ ಕ್ರಿಕೆಟ್ ಪಂದ್ಯಾಟ

ನಾಳ: 40 ವರ್ಷ ಮೇಲ್ಪಟ್ಟ ವಯೋಮಾನದ ಹಿರಿಯ ಕ್ರೀಡಾಪಟುಗಳ ಶ್ರೀದುರ್ಗಾ ಕಪ್ ಕ್ರಿಕೆಟ್ ಪಂದ್ಯಾಟ ಮಾ.2ರಂದು ನಾಳ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ರಥಬೀದಿಯಲ್ಲಿ ನಡೆಯಿತು.

ನಾಳ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ. ರಾಘವೇಂದ್ರ ಅಸ್ರಣ್ಣ ದೀಪ ಪ್ರಜ್ವಲನೆಗೊಳಿಸುವ ಮೂಲಕ ಪಂದ್ಯಾಟಕ್ಕೆ ಚಾಲನೆ ನೀಡಿದರು.

ಸಂಜೆ ನಡೆದು ಸಮಾರೋಪ ಸಮಾರಂಭದಲ್ಲಿ ಕಳಿಯ ಗ್ರಾ.ಪಂ. ಪ್ರಭಾರ ಪಿಡಿಒ ಕುಂಞ, ನಾಳ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್, ಉಪನ್ಯಾಸಕ ಕೇಶವ ಬಂಗೇರ, ಹಿರಿಯ ಕ್ರೀಡಾಪಟುಗಳಾದ ತುಕರಾಮ್ ಪೂಜಾರಿ, ಸುರೇಶ್ ಕುಮಾರ್ ಆರ್.ಎನ್., ಪ್ರಶಸ್ತಿ ವಿತರಿಸಿದರು.

ಸುಂದರ ನಾಯ್ಕ್ ಕುಳಾಯಿ, ಶರತ್ ಕುಮಾರ್ ಕುಳಾಯಿ, ಸುಭಾಷಿಣಿ ಜನಾರ್ದನ ಗೌಡ ಕುಳಾಯಿ, ವಿಕ್ರಂ ವಂಜಾರೆ ಹಾಗೂ ಸಿದ್ದಪ್ಪ ಗೌಡ ಹಾಕೋಟೆ ಅವರು ಪಂದ್ಯಾಟವನ್ನು ಸಂಘಟಿಸಿದ್ದರು.

ಲೀಗ್ ಮಾದರಿಯಲ್ಲಿ ನಡೆದ ಈ ಕ್ರಿಕೆಟ್ ಪಂದ್ಯಾಟದಲ್ಲಿ ಆರು ತಂಡಗಳು ಭಾಗವಹಿಸಿದ್ದವು. ದುರ್ಗಾಪರಮೇಶ್ವರಿ ವಾರಿಯರ್ಸ್ ಎಸ್. ಆರ್ ತಂಡ ಪ್ರಥಮ ಸ್ಥಾನವನ್ನು, ಜ್ಯೋತಿ ಎಂಟರ್ ಪ್ರೈಸಸ್ ದ್ವಿತೀಯ ಸ್ಥಾನವನ್ನು ತನ್ನದಾಗಿಸಿಕೊಂಡಿತು. ಶ್ರೀ ದುರ್ಗಾ ವಾರಿಯರ್ಸ್ ನಾಳ ತೃತೀಯ ಸ್ಥಾನವನ್ನು, ಶುಭೋದಯ ಕುಳಾಯಿ ತಂಡವು ಚತುರ್ಥ ಸ್ಥಾನವನ್ನು ಪಡೆದುಕೊಂಡಿತು.

Related posts

ದಕ್ಷಿಣ ಕನ್ನಡ ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಪದಾಧಿಕಾರಿಗಳಿಂದ ರಕ್ಷಿತ್ ಶಿವರಾಂ ಭೇಟಿ

Suddi Udaya

ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರರಿಗೆ ಬೆಳ್ತಂಗಡಿ ವಕೀಲರ ಸಂಘದಿಂದ ಅಭಿನಂದನೆ

Suddi Udaya

ಮಡಂತ್ಯಾರು: ಬಿದ್ದ ಪರ್ಸ್ ಹಿಂದುರುಗಿಸಿ ಕೊಟ್ಟು ಮಾನವೀಯತೆ ಮೆರೆದ ಆಟೋ ಚಾಲಕ ಇರ್ಷಾದ್

Suddi Udaya

ನಾವೂರು ರಿಕ್ಷಾ ನಿಲ್ದಾಣ ಎದುರು ಅಳವಡಿಸಿದ ಇಂಟರ್ ಲಾಕ್ ಹಾಳಾಗದಂತೆ ಅಡ್ಡವಾಗಿ ಇಟ್ಟ ಅಡಿಕೆ ಮರ: ತೆರವುಗೊಳಿಸುವಂತೆ ಸಾರ್ವಜನಿಕರ ಒತ್ತಾಯ

Suddi Udaya

ಅಳದಂಗಡಿಯ ಡಾ| ಮಮತಾ ಎಚ್ ರವರಿಗೆ ಉತ್ತಮ ಶಿಕ್ಷಕಿ ಪ್ರಶಸ್ತಿ

Suddi Udaya

ಬಿಜೆಪಿ ಜಿಲ್ಲಾ ಪ್ರಕೋಷ್ಠಗಳ ಸಹಸoಚಾಲಕರಾಗಿ ಪ್ರಸನ್ನ ದರ್ಬೆ ಆಯ್ಕೆ

Suddi Udaya
error: Content is protected !!