September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ನಿಡಿಗಲ್: ನಡ್ವಾಲ್ ಸಿರಿಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಕಲ್ಮಂಜ: ಇತಿಹಾಸ ಪ್ರಸಿದ್ಧ ಸಿರಿಗಳ ಆಲಡೆ ಕ್ಷೇತ್ರ ಲೋಕನಾಡು ಶ್ರೀ ಲೋಕನಾಥೇಶ್ವರ ದೇವಸ್ಥಾನ ನಿಡಿಗಲ್ ನಲ್ಲಿ ಮಾ31ರಿಂದ ಎ.4ರವರೆಗೆ ನಡೆಯುವ ಇತಿಹಾಸ ಪ್ರಸಿದ್ಧ ನಡ್ವಾಲ್ ಸಿರಿಜಾತ್ರ ಮಹೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಮಾ.8ರಂದು ದೇವಸ್ಥಾನದ ವಠಾರದಲ್ಲಿ ನಡೆಯಿತು.

ಆಮಂತ್ರಣ ಪತ್ರಿಕೆಯನ್ನು ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ ಸ್ವಾಮಿ ಪ್ರಸಾದ್ ನಿಡ್ಲೆ ಬಿಡುಗಡೆಗೊಳಿಸಿ ಕ್ಷೇತ್ರದಲ್ಲಿ ನಡೆಯುವ ನಡ್ವಾಲ್ ಸಿರಿಜಾತ್ರ ಮಹೋತ್ಸವ ವಿಜೃಂಭಣೆಯಿಂದ ಅಚ್ಚುಕಟ್ಟಾಗಿ ನಡೆಯಬೇಕು ಹಾಗೂ ಸಮಿತಿಯವರು ಹಾಗೂ ಊರವರೆಲ್ಲರೂ ಸೇರಿ ಈ ವರ್ಷ ಅದ್ದೂರಿಯಾಗಿ ಮಾದರಿ ಜಾತ್ರೋತ್ಸವ ನಡೆಸೋಣ ಜಾತ್ರೋತ್ಸವದ ಯಶಸ್ಸಿನಲ್ಲಿ ತಮ್ಮೆಲ್ಲರ ಸಹಕಾರ ಇರಲಿ ಎಂದರು.

ವೇದಿಕೆಯಲ್ಲಿ ಜಾತ್ರೋತ್ಸವ ಸಮಿತಿಯ ಪ್ರಧಾನ ಸಂಚಾಲಕ ಪಾಂಡುರಂಗ ಮರಾಟೆ ಹಡೀಲು, ಚಂದ್ರಹಾಸ ಪಟವರ್ಧನ್, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗುರುರಾಜ್ ಗುರಿಪಳ್ಳ, ಜಾತ್ರೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸದಾನಂದ ಪೂಜಾರಿ ಕೊಡೆಕ್ಕಲ್, ಅರ್ಚಕರಾದ ಹೆಚ್ ಎಸ್ ಮಾಧವ ಶರ್ಮ, ಮಂಗಳೂರಿನ ವಕೀಲರಾದ ಹರೀಶ್ ಆಳ್ವಾ, ಶ್ರೀಮತಿ ಸುಧಾ ನಾಗೇಶ್ ಕುಮಾರ್ ಗೌಡ, ಸಮಿತಿ ಸದಸ್ಯರಾದ ಯಶೋಧರ ಗೌಡ ಕೊಡ್ಡೋಲು, ಪ್ರಸಾದ್ ಕುಮಾರ್, ನಾಗೇಶ್ ಎಂ, ನಾಣ್ಯಪ್ಪ ಪೂಜಾರಿ, ಗುರುರಾಘವೇಂದ್ರ ಭಜನಾ ಮಂದಿರದ ಅಧ್ಯಕ್ಷರಾದ ಹರೀಶ್ ಕೆ, ಪ್ರಕಾಶ್ ಕುಮಾರ್ ಎಳನೀರು , ರಾಜೇಶ್ ಪೂಜಾರಿ ಗೋಳಿದೊಟ್ಟು, ಶ್ರೀಮತಿ ಬೇಬಿ ಉಮೇಶ್, ಶ್ರೀಮತಿ ಕುಸುಮ ಶೆಟ್ಟಿ ಕೋಡ್ಡೋಳು, ಅಂಜಲಿ ಶೆಟ್ಟಿ ಸುಪ್ರೀತಾ ಶೆಟ್ಟಿ ಗುತ್ತಿಲ್ಲಾರಬೆಟ್ಟು, ರತ್ನಾಕರ ಪೂಜಾರಿ ಗೋಲಿದೊಟ್ಟು ಸಂತೋಷ್ ಗೌಡ ಗೋಳಿದೊಟ್ಟು, ಸುಭಾಷ್ ಶೆಟ್ಟಿಗಾರ್, ಶ್ರೀಮತಿ ರೇಖಾ ಭಾಲಕೃಷ್ಣ ನಾಯ್ಕ , ವಿಘ್ನೇಶ್ ನಾಯ್ಕ, ಪ್ರವೀಣ್ ಗೌಡ, ಜಯಾನಂದ ಪಾಲೆದಡಿ, ಶ್ರೀಮತಿ ವಿನಯಪ್ರಕಾಶ್ ಶೆಟ್ಟಿ, ಶ್ರೀಮತಿ, ಗಂಗಯ್ಯ ಕುಂಬಾರ, ವಿಘ್ನೇಶ್ ಪೂಜಾರಿ, ಪ್ರಜ್ವಲ್ ಹೆಬ್ಬಾರ್ಧೋಡಿ, ಸೀತಾಲಕ್ಷ್ಮಿ ಹಾಗೂ ಊರವರು ಉಪಸ್ಥಿತರಿದ್ದರು.

Related posts

ಲೆಟ್ಸ್ ಥ್ಯಾಂಕ್ ಫೌಂಡೇಶನ್ ವತಿಯಿಂದ ಕಕ್ಕಿಂಜೆಯ ವಿಶೇಷ ಚೇತನ ಮೊಹಮ್ಮದ್ ಕುಂಞಿ ರವರಿಗೆ ಗೂಡಂಗಡಿಯ ಸಹಕಾರ

Suddi Udaya

ಧರ್ಮಸ್ಥಳ: ಪೊಸೊಳಿಕೆ ಅಂಗನವಾಡಿ ಕೇಂದ್ರದಲ್ಲಿ ಬಾಲ ಮೇಳ ಆಚರಣೆ

Suddi Udaya

ಬ್ರಹ್ಮಶ್ರೀ ನಾರಾಯಣ ಗುರು ಮತ್ತು ಗಾಂಧಿ ಸಂವಾದ ಶತಮಾನದ ಆಚರಣೆ: ಬೆಳ್ತಂಗಡಿಯಲ್ಲಿ ಪೂರ್ವಭಾವಿ ಸಭೆ

Suddi Udaya

ಮದ್ದಡ್ಕ: ಮಸೀದಿ ಸಮೀಪ ಬೈಕ್- ಸ್ಕೂಟಿ ಡಿಕ್ಕಿ: ಬೈಕ್ ಸವಾರ ಸಾವು

Suddi Udaya

ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ ಕಾಲೇಜಿನಲ್ಲಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದ ಕಂಚಿ ಕಾಮಕೋಟಿ ಪೀಠಾಧಿಪತಿ ಪೂಜ್ಯ ಶಂಕರ ವಿಜಯೇಂದ್ರ ಸರಸ್ವತಿ ಶಂಕರಾಚಾರ್ಯ ಸ್ವಾಮೀಜಿಯವರಿಗೆ ಪೂರ್ಣ ಕುಂಭ ಭವ್ಯ ಸ್ವಾಗತ

Suddi Udaya
error: Content is protected !!