ಉಜಿರೆ: ಎಸ್.ಡಿ.ಎಂ ಕಾಲೇಜಿನಲ್ಲಿ ಎಸ್.ಡಿ.ಎಂ ಯಕ್ಷಗಾನ ಕಲಾಕೇಂದ್ರ ಪ್ರಸ್ತುತ ಪಡಿಸಿದ ತಿಂಗಳ ತಿರುಳು – 25ನೇ ಕಾರ್ಯಕ್ರಮ “ಸೈಂಧವ ವಧೆ” ಕನ್ನಡ ಯಕ್ಷಗಾನ ತಾಳಮದ್ದಳೆ ಮಾ.12ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಉಜಿರೆ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವಿಶ್ವನಾಥ ಪಿ., ವಿಶ್ರಾಂತ ಪ್ರಬಂಧಕರು ಮತ್ತು ಯಕ್ಷಗಾನ ಸಂಘಟಕರು, ಚಿಂತಕರಾದ ಶೇಖರ ಟಿ, ಎಸ್.ಡಿ.ಎಂ. ಕಾಲೇಜಿನ ಕುಲ ಸಚಿವರು ಶ್ರೀಧರ ಭಟ್, ಹಿರಿಯ ಲೆಕ್ಕ ಪತ್ರ ನಿರ್ವಾಕ ದಿವಾಕರ ಪಟವರ್ಧನ್, ಸಾಂಸ್ಕೃತಿಕ ಸಮಿತಿ ಮುಖ್ಯಸ್ಥ ಡಾ. ನಾಗಣ್ಣ ಡಿ.ಎ, ಯಕ್ಷಗುರು ಅರುಣ್ ಕುಮಾರ್ ಧರ್ಮಸ್ಥಳ ಉಪಸ್ಥಿತರಿದ್ದರು.

ಭಾಗವತರಾಗಿ ದೇವಿಪ್ರಸಾದ್ ಆಚಾರ್ಯ, ಚೆಂಡೆಯಲ್ಲಿ ಶ್ರೇಯಸ್ ಪಾಳಂದೆ, ಮದ್ದಳೆಯಲ್ಲಿ ಪುರಂದರ ನಾರಿಯ ಭಾಗವಹಿಸಿದರು. ಶ್ರೀಕೃಷ್ಣ ಪಾತ್ರಧಾರಿಯಾಗಿ ತೇಜಸ್, ಅಮೋಘ ಶಂಕರ (ಅರ್ಜುನ), ಅನನ್ಯ ಶೆಟ್ಟಿ (ಸುಭದ್ರೆ), ನಿರಂಜನ್ (ಕೌರವ) ವಿಭಿನ್ (ಸೈಂಧವ), ಸಂಜನ(ಧರ್ಮರಾಯ) ಮಿಥುನ್ ರಾಜ್(ದ್ರೋಣಾಚಾರ್ಯ), ಪ್ರೀತಲ್(ಶ್ರುತಾಯುಧ), ಸಹನಾ(ಭೂರಿಶ್ರವ), ಸುಮಂತ್(ಸಾತ್ಯಕಿ), ರವಿತೇಜು(ದುಶ್ಯಾಸನ), ಮನಸ್ವಿ(ಭೀಮಸೇನ), ಹರ್ಷಿಣಿ ದೂತನಾಗಿ ಪಾತ್ರ ನಿರ್ವಹಿಸಿದ್ದಾರೆ.

ಎಸ್.ಡಿ.ಎಂ ಯಕ್ಷಗಾನ ಕಲಾಕೇಂದ್ರದ 25ನೇ ಕಾರ್ಯಕ್ರಮದ ಸಂಭ್ರಮದ ಸಂದರ್ಭದಲ್ಲಿ ಯಕ್ಷಗಾನ ತಂಡದ ನಾಯಕನಾದ ಅಮೋಘ ಶಂಕರರವರನ್ನು ಸನ್ಮಾನಿಸಲಾಯಿತು.
ಸಿಂಚನ, ಮನಸ್ವಿ, ಯಶ್ಮಿತಾ, ವರ್ಷಿಣಿ, ಅನನ್ಯ ಶೆಟ್ಟಿ ಪ್ರಾರ್ಥಿಸಿದರು. ಸಾಕ್ಷ ನಿರೂಪಿಸಿ, ಸಹನ ಸ್ವಾಗತಿಸಿದರು. ಯಶ್ಮಿತಾ ವಂದಿಸಿದರು.












