ಬೆಳ್ತಂಗಡಿ: ಮರೋಡಿ ಗ್ರಾಮದ ಗಿರಿಜಾ ಅವರು ಅನಾರೋಗ್ಯದಿಂದ ಬಳಲುತ್ತಿದ್ದು ಅವರ ವೈದ್ಯಕೀಯ ಚಿಕಿತ್ಸೆಗಾಗಿ ರೂ 20 ಸಾವಿರ ಹಾಗೂ ಮರೋಡಿ ನಂದಿಲ ಸುಂದರವರು ಒಂದು ಕೈ ಇಲ್ಲದೆ ಅತಿ ಕಡು ಬಡತನದಲ್ಲಿದ್ದು ಅವರ ಮನೆ ದುರಸ್ತಿಗಾಗಿ ರೂ 20 ಸಾವಿರ ನೆರವನ್ನು ಹಿಂದೂ ಕಮಿಟಿ ಹಾರ್ಝಿಲಿಯ ಇಸ್ರೇಲ್ ಸಂಘಟನೆ ಆರ್ಥಿಕ ನೆರವನ್ನು ನೀಡಿ ಸಹಕರಿಸಿದೆ.
ಈ ನೆರವನ್ನು ಮರೋಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರತ್ನಾಕರ್ ಬುಣ್ಣನ್, ಬಾಲಕೃಷ್ಣ ಬಂಗೇರ, ಪದ್ಮಶ್ರೀ ಜೈನ್ ಹಸ್ತಾಂತರಿಸಿದರು. ಮಾಜಿ ಸದಸ್ಯರು ಉಮೇಶ್ ಸಾಲಿಯಾನ್ ಜೊತೆಯಲ್ಲಿದ್ದರು
ಮರೋಡಿ ಹಾಗೂ ನಾರಾವಿ ಪರಿಸರದ ಅನೇಕ ಮಂದಿ ಕಳೆದ ಹಲವು ವರ್ಷಗಳಿಂದ ಇಸ್ರೇಲ್ ನಲ್ಲಿ ಉದ್ಯೋಗದಲ್ಲಿದ್ದು ಅವರು ಊರಿನ ಮೇಲಿನ ಪ್ರೀತಿಯಿಂದ ಇಸ್ರೇಲ್ ನಲ್ಲಿ ಹಿಂದೂ ಕಮಿಟಿ ಹಾರ್ಝಿಲಿಯ ಇಸ್ರೇಲ್ ಸಂಘಟನೆ ಕಟ್ಟಿಕೊಂಡು
ಊರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ,ಅನಾರೋಗ್ಯದಿಂದ ಬಳಲುತ್ತಿರುವ ಕುಟುಂಬಕ್ಕೆ ವೈದ್ಯಕೀಯ ನೆರವು,ಅಶಕ್ತ ಕುಡುಂಬಗಳಿಗೆ ಆರ್ಥಿಕ ನೆರವು ಜೊತೆಗೆ ವಿವಿಧ ರೀತಿಯಲ್ಲಿ ಊರಿಗೆ ಸಹಕಾರ ನೀಡುತ್ತಿದ್ದಾರೆ.












