23.7 C
ಪುತ್ತೂರು, ಬೆಳ್ತಂಗಡಿ
August 2, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ದೈವ ಕ್ಷೇತ್ರ ಬಡೆಕ್ಕಾವು ಗುತ್ತುವಿನಲ್ಲಿ ಅಪ್ಪೆ ಕಲ್ಲುರ್ಟಿ ದೈವದ ದೊಂದಿ ಕೋಲ: ಜೋಡು ಜೀಟಿಗೆ ನಾಟಕ ಪ್ರದರ್ಶನ

ಬೆಳ್ತಂಗಡಿ: ಗ್ರಾಮದೈವ ಶ್ರೀ ಕೊಡಮಣಿತ್ತಾಯ ಮತ್ತು ಗುತ್ತು ಭಾಮ ದೈವ, ಶ್ರೀ ಜುಮಾದಿ ಹಾಗೂ ಸಹ
ಪರಿವಾರ ದೈವಗಳ ದೈವಸ್ಥಾನ ಬಡೆಕ್ಕಾವುಗುತ್ತು ದೈವ ಕ್ಷೇತ್ರದಲ್ಲಿ ಅಪ್ಪೆ ಕಲ್ಲುರ್ಟಿ ದೈವದ ದೊಂದಿ ಕೋಲ ಮಾ.14 ರಂದು ನಡೆಯಿತು. ತಮ್ಮ ಇಷ್ಟಾರ್ಥಗಳ ಈಡೇರಿಕೆಗೆ ಅಪ್ಪೆ ಕಲ್ಲುರ್ಟಿ ದೈವದ ಮೊರೆ ಹೋದ ಭಕ್ತರ ಸಂಕಷ್ಟಗಳು ಹಾಗೂ ಅಭೀಷ್ಟೆಗಳು ನೆರವೇರಿದ ನಿದರ್ಶನಗಳು ಈ ಕ್ಷೇತ್ರದಲ್ಲಿದೆ. ಹಾಗಾಗಿ ಭಕ್ತರು ಹರಕೆ ರೂಪದಲ್ಲಿ ಅಪ್ಪೆ ಕಲ್ಲುರ್ಟಿ ದೈವಕ್ಕೆ ಮಲ್ಲಿಗೆ, ಸೀರೆಗಳನ್ನು ಸಲ್ಲಿಸಿದರು.

ದೈವನ್ನೇ ದೇವರು ಎಂದ ನಂಬುವ ತುಳುನಾಡಿನ ಮಂದಿ ಕಲ್ಲುರ್ಟಿ ದೈವದ ದೊಂದಿ ಕೋಲ ನೋಡಲು ಸಾವಿರಾರೂ ಮಂದಿ ಭಕ್ತರು ಸೇರಿದ್ದರು. ಬೆಳಿಗ್ಗೆ ಗ್ರಾಮ ದೈವ ಶ್ರೀ ಕೊಡಮಣಿತ್ತಾಯ ದೈವದ ಸಾಂಪ್ರದಾಯಿಕ ದೈವದ ಕಂಬಳ ಮೂಹೂರ್ತ ನಡೆಸಲಾಯಿತು.

ರಾತ್ರಿ ಕಲ್ಕುಡ-ಕಲ್ಲುರ್ಟಿ ದೈವದ ಚಾರಿತ್ರೆಯನ್ನು ಬಿಂಬಿಸುವ ಜೋಡು ಜೀಟಿಗೆ ಸತ್ಯೋದ ಸಾದಿಗ್ ಧರ್ಮೋದ ಬೊಲ್ಪು ತುಳು ಜನಪದ ನಾಟಕ ಪ್ರದರ್ಶನಗೊಂಡಿತು. ಸಾವಿರಕ್ಕೂ ಮಿಕ್ಕಿ ಜನಸಾಗರ ಸೇರಿತ್ತು.

ಬಡೆಕ್ಕಾವು ಗುತ್ತು ಮನೆತನದ ಮುಖ್ಯಸ್ಥ ರಕ್ಷಿತ್ ಅಜಿಲ, ಬಡೆಕ್ಕಾವು ಗುತ್ತು ಮನೆತನದವರು, ಅರ್ಚಕರು, ನಾವೂರು ಗುತ್ತು ಮನೆಯವರು, ಊರಿನ ಗುತ್ತು ಬರ್ಕೆಯವರು, ದೈವಗಳ ಪರಿಚಾರಕರು, ವಿಲಯದವರು ಪರವೂರಿನವರು ಮತ್ತು ನಾವೂರು ಗ್ರಾಮದ ಎಲ್ಲಾ ಗ್ರಾಮಸ್ಥರು ಉಪಸ್ಥಿತರಿದ್ದರು.

Related posts

ಮಚ್ಚಿನ ಸರಕಾರಿ ಪ್ರೌಢ ಶಾಲಾ ಪ್ರಾರಂಭೋತ್ಸವ

Suddi Udaya

ಪೇಜಾವರ ಮಠದ ಪೂಜ್ಯ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಧರ್ಮಸ್ಥಳ ಭೇಟಿ

Suddi Udaya

ಮಚ್ಚಿನ ಅನಂತೇಶ್ವರ ಸಂಜೀವಿನಿ ಮಹಿಳಾ ಒಕ್ಕೂಟದ ವತಿಯಿಂದ ಸ್ವಸಹಾಯ ಸಂಘದ ಸದಸ್ಯರಿಗೆ ಫಿನೈಲ್ ಹಾಗೂ ಸೋಪ್ ಆಯಿಲ್ ತರಬೇತಿ

Suddi Udaya

ಬೆಳ್ತಂಗಡಿ ಅಂಬೇಡ್ಕರ್ ಭವನದ ಬಳಿ ಅಸ್ವಸ್ಥಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಕರುಣಾಕರ ಬಂಗೇರ ಹಾಗೂ ಸಾಯಿರಾಂ ಅಂಬುಲೆನ್ಸ್ ಮಾಲಕ ಪವನ್ ಬಂಗೇರ

Suddi Udaya

ಪಡ್ಡಂದಡ್ಕ ನಿವೃತ್ತ ಮುಖ್ಯೋಪಾಧ್ಯಾಯ ತಿರುಮಲೇಶ್ವರ ಭಟ್ಟರಿಗೆ ‘ಹವ್ಯಕ ಶಿಕ್ಷಕ ರತ್ನ’ ಪ್ರಶಸ್ತಿ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ಶ್ರಾವಣ ತರಬೇತಿ ಸಪ್ತಾಹದ ಉದ್ಘಾಟನೆ

Suddi Udaya
error: Content is protected !!