May 2, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ದೈವ ಕ್ಷೇತ್ರ ಬಡೆಕ್ಕಾವು ಗುತ್ತುವಿನಲ್ಲಿ ಅಪ್ಪೆ ಕಲ್ಲುರ್ಟಿ ದೈವದ ದೊಂದಿ ಕೋಲ: ಜೋಡು ಜೀಟಿಗೆ ನಾಟಕ ಪ್ರದರ್ಶನ

ಬೆಳ್ತಂಗಡಿ: ಗ್ರಾಮದೈವ ಶ್ರೀ ಕೊಡಮಣಿತ್ತಾಯ ಮತ್ತು ಗುತ್ತು ಭಾಮ ದೈವ, ಶ್ರೀ ಜುಮಾದಿ ಹಾಗೂ ಸಹ
ಪರಿವಾರ ದೈವಗಳ ದೈವಸ್ಥಾನ ಬಡೆಕ್ಕಾವುಗುತ್ತು ದೈವ ಕ್ಷೇತ್ರದಲ್ಲಿ ಅಪ್ಪೆ ಕಲ್ಲುರ್ಟಿ ದೈವದ ದೊಂದಿ ಕೋಲ ಮಾ.14 ರಂದು ನಡೆಯಿತು. ತಮ್ಮ ಇಷ್ಟಾರ್ಥಗಳ ಈಡೇರಿಕೆಗೆ ಅಪ್ಪೆ ಕಲ್ಲುರ್ಟಿ ದೈವದ ಮೊರೆ ಹೋದ ಭಕ್ತರ ಸಂಕಷ್ಟಗಳು ಹಾಗೂ ಅಭೀಷ್ಟೆಗಳು ನೆರವೇರಿದ ನಿದರ್ಶನಗಳು ಈ ಕ್ಷೇತ್ರದಲ್ಲಿದೆ. ಹಾಗಾಗಿ ಭಕ್ತರು ಹರಕೆ ರೂಪದಲ್ಲಿ ಅಪ್ಪೆ ಕಲ್ಲುರ್ಟಿ ದೈವಕ್ಕೆ ಮಲ್ಲಿಗೆ, ಸೀರೆಗಳನ್ನು ಸಲ್ಲಿಸಿದರು.

ದೈವನ್ನೇ ದೇವರು ಎಂದ ನಂಬುವ ತುಳುನಾಡಿನ ಮಂದಿ ಕಲ್ಲುರ್ಟಿ ದೈವದ ದೊಂದಿ ಕೋಲ ನೋಡಲು ಸಾವಿರಾರೂ ಮಂದಿ ಭಕ್ತರು ಸೇರಿದ್ದರು. ಬೆಳಿಗ್ಗೆ ಗ್ರಾಮ ದೈವ ಶ್ರೀ ಕೊಡಮಣಿತ್ತಾಯ ದೈವದ ಸಾಂಪ್ರದಾಯಿಕ ದೈವದ ಕಂಬಳ ಮೂಹೂರ್ತ ನಡೆಸಲಾಯಿತು.

ರಾತ್ರಿ ಕಲ್ಕುಡ-ಕಲ್ಲುರ್ಟಿ ದೈವದ ಚಾರಿತ್ರೆಯನ್ನು ಬಿಂಬಿಸುವ ಜೋಡು ಜೀಟಿಗೆ ಸತ್ಯೋದ ಸಾದಿಗ್ ಧರ್ಮೋದ ಬೊಲ್ಪು ತುಳು ಜನಪದ ನಾಟಕ ಪ್ರದರ್ಶನಗೊಂಡಿತು. ಸಾವಿರಕ್ಕೂ ಮಿಕ್ಕಿ ಜನಸಾಗರ ಸೇರಿತ್ತು.

ಬಡೆಕ್ಕಾವು ಗುತ್ತು ಮನೆತನದ ಮುಖ್ಯಸ್ಥ ರಕ್ಷಿತ್ ಅಜಿಲ, ಬಡೆಕ್ಕಾವು ಗುತ್ತು ಮನೆತನದವರು, ಅರ್ಚಕರು, ನಾವೂರು ಗುತ್ತು ಮನೆಯವರು, ಊರಿನ ಗುತ್ತು ಬರ್ಕೆಯವರು, ದೈವಗಳ ಪರಿಚಾರಕರು, ವಿಲಯದವರು ಪರವೂರಿನವರು ಮತ್ತು ನಾವೂರು ಗ್ರಾಮದ ಎಲ್ಲಾ ಗ್ರಾಮಸ್ಥರು ಉಪಸ್ಥಿತರಿದ್ದರು.

Related posts

ನಡ ಶ್ರೀ ಗುರುನಾರಾಯಣ ಸೇವಾ ಸಂಘದಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವದ ಬಗ್ಗೆ ಸಮಾಲೋಚನ ಸಭೆ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಮದ್ದಡ್ಕ: ಬಾವುಟಗುಡ್ಡೆ ನಿವಾಸಿ ಸುನೀತ ಶೆಣೈ ನಿಧನ

Suddi Udaya

ಉಜಿರೆ ಶ್ರೀ.ಧ.ಮಂ ಆಂಗ್ಲ ಮಾಧ್ಯಮ ಶಾಲೆಗೆ (ರಾಜ್ಯಪಠ್ಯಕ್ರಮ) ಶೇ. 100 ಫಲಿತಾಂಶ

Suddi Udaya

ಏ.19: ಕೊಕ್ಕಡ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ಆರಾಧಕರ ಸಭೆ

Suddi Udaya

ಉಜಿರೆ ರುಡ್ ಸೆಟ್ ಸಂಸ್ಥೆಯ ಹುಟ್ಟು ಹಬ್ಬ ಮತ್ತು ವಿಶ್ವ ಯುವ ಕೌಶಲ್ಯ ದಿನಾಚರಣೆ

Suddi Udaya

ಕನ್ಯಾಡಿ ಗ್ರಾಮದ ಪಾರ್ನಡ್ಕ ದಲ್ಲಿ ದಿ| ರಾಜೇಂದ್ರ ಎಸ್ ಸುರಕ್ಕ್ಯೆಗುತ್ತು ಇವರ ಸ್ಮರಣಾರ್ಥ ಬಸ್ ತಂಗುದಾಣ ಉದ್ಘಾಟನೆ

Suddi Udaya
error: Content is protected !!