August 2, 2026
ಗ್ರಾಮಾಂತರ ಸುದ್ದಿ

ದಿ. ನಾರಾಯಣ ತಾಮನ್ಕರ್ ಸವಿನೆನಪಿಗಾಗಿ ಅರ್ಹರಿಗೆ ಧನ ಸಹಾಯ

ಬೆಳ್ತಂಗಡಿ; ನಿವೃತ್ತ ಶಿಕ್ಷಕ, ಸಂಗೀತ ಗುರು, ಕವಿಗಳೂ ಆಗಿರುವ ಶಂಕರ್ ತಾಮನ್ಕರ್ ಮುಂಡಾಜೆ ತನ್ನ ತಂದೆ ದಿ.ನಾರಾಯಣ ತಾಮನ್ಕರ್ ಹೆಸರಲ್ಲಿ ಪ್ರತಿವರ್ಷ ಕೊಡಮಾಡುವ ಶೈಕ್ಷಣಿಕ ಮತ್ತು ಆರೋಗ್ಯ ಸಹಾಯವನ್ನು ಆ. 2 ರಂದು ಅರ್ಹರಿಗೆ ಹಸ್ತಾಂತರಿಸಿದರು.

ಶೈಕ್ಷಣಿಕ ಸಹಾಯದಡಿ ಪ್ರತಿಭಾನ್ವಿತ ಅರ್ಹ ವಿದ್ಯಾರ್ಥಿಗಳನ್ನು ಅವರದ್ದೇ ಮಾನದಂಡವಾದ ಪ್ರತಿಭೆ, ಆರ್ಥಿಕ ಹಿಂದುಳಿದಿರುವಿಕೆಯಂತೆ ಗುರುತಿಸಿ 6 ಮಂದಿಗೆ 30 ಸಾವಿರ ರೂ.ಗಳು, ಗರ್ಭಾವಸ್ಥೆಯಿಂದಲೇ ಅನಾರೋಗ್ಯಕ್ಕೆ ತುತ್ತಾಗಿ ಇದೀಗ ಚಿಕಿತ್ಸೆಯಲ್ಲಿರುವ ಪುಟಾಣಿ ಮಗುವಿನ ಚಿಕಿತ್ಸೆಗೆ, ವೈಯುಕ್ತಿಕ ಸಮಸ್ಯೆಗಳಿದ್ದರೂ ಸಮಾಜ‌ಸೇವೆಯಲ್ಲಿ ನಿತರರಾಗಿರುವ ವ್ಯಕ್ತಿಯೊಬ್ಬರಿಗೆ ಪ್ರೋತ್ಸಾಹಧನ, ಹಾಗೂ ಕ್ರೀಡಾ ಸಂಸ್ಥೆಗೆ ಸಹಾಯ ಎಂಬಂತೆ 17 ಸಾವಿರ, ಹೀಗೆ ಒಟ್ಟು 47 ಸಾವಿರ ರೂ. ಗಳನ್ನು ಅವರು ವಿತರಿಸಿದರು. ಮುಂಡಾಜೆಯ ಅವರ ‘ಪರಂಪರಾ’ ಮನೆಯಲ್ಲಿ ಈ ಸರಳ ಕಾರ್ಯಕ್ರಮ ನಡೆಯಿತು.
ಮುಂಡಾಜೆಯ ಉದ್ಯಮಿ ಹಾಗೂ ಸಮಾಜ ಸೇವಕ ಅರೆಕ್ಕಲ್ ರಾಮಚಂದ್ರ ಭಟ್, ನಿವೃತ್ತ ಬ್ಯಾಂಕ್ ಅಧಿಕಾರಿ ರಾಘವೇಂದ್ರ ತಾಮನ್ಕರ್ ಮೈಸೂರು, ಯಂಗ್ ಚಾಲೆಂಜರ್ಸ್ ಸಂಸ್ಥಾಪಕ ನಾಮದೇವ ರಾವ್, ಗ್ರಾ.ಪಂ ಮಾಜಿ ಅಧ್ಯಕ್ಷ ಗಣೇಶ್ ಬಂಗೇರ, ಹಿರಿಯ ಪತ್ರಕರ್ತ ಅಚ್ಚು ಮುಂಡಾಜೆ, ಶಂಕರ್ ತಾಮನ್ಕರ್ ಮತ್ತು ಪತ್ನಿ ಸ್ವಾತಿ ತಾಮನ್ಕರ್, ಪುತ್ರಿ ನವನಿ ತಾಮನ್ಕರ್, ಅಳಿಯ ಪ್ರವೀಣ್, ತಾಮನ್ಕರ್ ಬಂಧುಗಳಾದ ಪ್ರಸನ್ನ ತಾಮನ್ಕರ್, ಯಶ್ ತಾಮನ್ಕರ್, ಚೇತನ್ ತಾಮನ್ಕರ್ ಮೈಸೂರು, ವಾಸುದೇವ ಗೋಖಲೆ ಮುಂಡಾಜೆ ಮೊದಲಾದವರು ಉಪಸ್ಥಿತರಿದ್ದರು.

ಬಾಕ್ಸ್:
1996 ರಿಂದ ಸದ್ದಿಲ್ಲದೆ ನಡೆಯುತ್ತಿದೆ ಸೇವೆ;
ಬಹುಮುಖ ಪ್ರತಿಭಾನ್ವಿತರಾಗಿರುವ ಶಂಕರ್ ತಾಮನ್ಕರ್ ಅವರು ಸರಕಾರಿ ಸೇವೆಗೆ ಸೇರಿದ 1996 ರಿಂದಲೇ ಸದ್ದಿಲ್ಲದೆ ಈ ಸಮಾಜ ಸೇವೆ ಮಾಡಿಕೊಂಡು ಬರುತ್ತಿದ್ದಾರೆ. 1500 ರೂ. ನೆರವಿನಿಂದ ಆರಂಭಗೊಂಡದ್ದು ಇಂದು ದೊಡ್ಡ ಮೊತ್ತದವರೆಗೆ ಬೆಳೆದಿದೆ.‌ಅವರ ಸೇವೆಗೆ ಪುತ್ರಿ ಮತ್ತು ಅಳಿಯ ಕೂಡ ಸಾತ್ ನೀಡಲು ಆರಂಭಿಸಿದ್ದಾರೆ.

Related posts

ಮಹಿಳೆ ಮಗುವಿಗೆ ಮಾನಸಿಕ ಹಿಂಸೆ- ವರದಕ್ಷಿಣೆ ಕಿರುಕುಳ ಆರೋಪ: ಬೆಳಾಲಿನ ಮಹಿಳೆ ನೀಡಿದ ದೂರಿನಂತೆ ಪತಿ, ಮನೆಯವರ ಮೇಲೆ ಕೇಸು

Suddi Udaya

ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ & ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆಯವರು ಸಿರಿ ಸಂಸ್ಥೆಗೆ ಭೇಟಿ

Suddi Udaya

ರಾಜ್ಯೋತ್ಸವ ಪ್ರಶಸ್ತಿಗೆ ಸಹಕರಿಸಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರಿಗೆ ಬಳಂಜ ಬಿಲ್ಲವ ಸಂಘದಿಂದ ಗೌರವಾರ್ಪಣೆ

Suddi Udaya

ಪುದುವೆಟ್ಟು ಶ್ರೀ ಧ.ಮಂ. ಅ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಷಕರಿಂದ ಶ್ರಮದಾನ

Suddi Udaya

ಬಳ್ಳಮಂಜ ನ್ಯೂ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಲಾಯಿಲ ಗ್ರಾಮ ಪಂಚಾಯತ್ ನಲ್ಲಿ ಮಕ್ಕಳ ಗ್ರಾಮ ಸಭೆ

Suddi Udaya
error: Content is protected !!