August 4, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮೇಲಂತಬೆಟ್ಟು: ಬದಿನಡೆ ಶ್ರೀ ನಾಗಬ್ರಹ್ಮ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ-ಸಿರಿಕುಮಾರ ದರ್ಶನ ಮತ್ತು ದೈವಗಳ ನೇಮೋತ್ಸವ

ಮೇಲಂತಬೆಟ್ಟು: ಬದಿನಡೆ ಶ್ರೀ ನಾಗಬ್ರಹ್ಮ ದೇವಸ್ಥಾನದಲ್ಲಿ ಮಡಂತ್ಯಾರು ವೇ.ಮೂ. ಶ್ರೀ ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಶ್ರೀ ನಾಗಬ್ರಹ್ಮ ದೇವರ ವರ್ಷಾವಧಿ ಜಾತ್ರಾ ಮಹೋತ್ಸವವು ಮಾ.16ರಂದು ನಡೆಯಿತು.

ಮಾ.16ರಂದು ಬೆಳಿಗ್ಗೆ ನಿತ್ಯಪೂಜೆ, ಪ್ರಾರ್ಥನೆ, ಗೊನೆ ಮುಹೂರ್ತ ಉಗ್ರಾಣ ಮುಹೂರ್ತ, ತೋರಣ ಮುಹೂರ್ತ, ಶ್ರೀ ದೇವರಿಗೆ ಪುಣ್ಯಾಹ, ಗಣಹೋಮ, ಪಂಚಾಮೃತ ಅಭಿಷೇಕ, ಪವಮಾನ ಕಲಶಾಭಿಷೇಕ, ಪಂಚವಿಂಷತಿ ಕಲಶಾಭಿಷೇಕ, ದೈವಗಳಿಗೆ ಕಲಶಾಭಿಷೇಕ, ಪಂಚಪರ್ವ, ತುಲಾಭಾರ ಸೇವೆ, ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಸಾಮೂಹಿಕ ಆಶ್ಲೇಷಾ ಬಲಿ ಸೇವೆ, ವಟು ಆರಾಧನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

ಸಂಜೆ ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ, ಮಂಜುಶ್ರೀ ನಗರ ಮೇಲಂತಬೆಟ್ಟು ಮತ್ತು ಮೇಲಂತಬೆಟ್ಟು ಗ್ರಾಮದಾ ಮಹಿಳೆಯರಿಂದ ಭಜನಾ ಸೇವೆ, ಮಹಾರಂಗಪೂಜೆ, ದೈವಗಳಿಗೆ ಪರ್ವ ಸೇವೆ, ಹೂವಿನ ಪೂಜೆ, ರಾತ್ರಿ ಸಿರಿಕುಮಾರ ದರ್ಶನ ಮತ್ತು ಸಿರಿಕುಮಾರ ದೇವರ ಭೇಟಿ, ದೈವಗಳ ಭಂಡಾರ ಇಳಿಯುವುದು. ಶ್ರೀ ನಾಗಬ್ರಹ್ಮ ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ, ಕೊಡಮಣಿತ್ತಾಯ, ಮಲವ ಹಾಗೂ ವಾರಾಹಿ ದೈವಗಳ ನರ್ತನ ಸೇವೆ. ದೇವಸ್ಥಾನದಿಂದ ನಲ್ಕೆತ್ಯಾರು ಕಟ್ಟೆಯ ವರೆಗೆ ಚೆಂಡೆ, ಕೊಂಬು ವಾಲಗ, ವಾದ್ಯಗಳೊಂದಿಗೆ ದೇವರು ಹಾಗೂ ದೈವಗಳು ವಿಜೃಂಭಣೆಯ ಮೆರವಣಿಗೆ ನಡೆಯಲಿರುವುದು ಮತ್ತು ಕೊಡಮಣಿತ್ತಾಯ ದೈವಸ್ಥಾನದಲ್ಲಿ ದೇವರ ಮತ್ತು ದೈ ಭೇಟಿ ನಡೆಯಲಿದೆ.

ಮಾ.17ರಂದು ಬೆಳಿಗ್ಗೆ ಸಂಪ್ರೋಕ್ಷಣೆ ನಡೆಯಲಿದೆ.

Related posts

ಬೆಳ್ತಂಗಡಿ ಡಿವೈನ್ ಪಾರ್ಕ್ ಸಾಲಿಗ್ರಾಮ, ಇದರ ಅಂಗ ಸಂಸ್ಥೆಗಳಲ್ಲಿ ಒಂದಾದ ವಿವೇಕ ಜಾಗ್ರತ ಬಳಗದಿಂದ ಮಳೆಗಾಗಿ ಪ್ರಾರ್ಥನೆ

Suddi Udaya

ಕೊಕ್ಕಡ ಗ್ರಾ.ಪಂ. ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರ ಸಭೆ

Suddi Udaya

ವಾಣಿ ಶಿಕ್ಷಣ ಸಂಸ್ಥೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಕರಾಡ ಬ್ರಾಹ್ಮಣ ಸಮಾಜದಿಂದ ಸಂಸ್ಕರಣೆ ಹಾಗೂ ನುಡಿನಮನ ಕಾರ್ಯಕ್ರಮ

Suddi Udaya

ಸುಣ್ಣದಕೆರೆ ಅಂಗನವಾಡಿ ಕೇಂದ್ರದ ನಿವೃತ್ತ ಕಾರ್ಯಕರ್ತೆ ವಸಂತಿರವರಿಗೆ ಸನ್ಮಾನ

Suddi Udaya

ವೈಬ್ರೆಂಟ್ ಪ.ಪೂ. ಕಾಲೇಜಿನ ಕನ್ನಡ ಉಪನ್ಯಾಸಕ ನಿಕೇತ್ ಮೋಹನ್ ದಾಸ್ ಶೆಟ್ಟಿರವರಿಗೆ ಅತ್ಯುತ್ತಮ ಶಿಕ್ಷಕ ರತ್ನ ಪ್ರಶಸ್ತಿ ಪ್ರದಾನ

Suddi Udaya
error: Content is protected !!