August 2, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ದೈವ ಕ್ಷೇತ್ರ ಬಡೆಕ್ಕಾವು ಗುತ್ತುವಿನಲ್ಲಿ ಅಪ್ಪೆ ಕಲ್ಲುರ್ಟಿ ದೈವದ ದೊಂದಿ ಕೋಲ: ಜೋಡು ಜೀಟಿಗೆ ನಾಟಕ ಪ್ರದರ್ಶನ

ಬೆಳ್ತಂಗಡಿ: ಗ್ರಾಮದೈವ ಶ್ರೀ ಕೊಡಮಣಿತ್ತಾಯ ಮತ್ತು ಗುತ್ತು ಭಾಮ ದೈವ, ಶ್ರೀ ಜುಮಾದಿ ಹಾಗೂ ಸಹ
ಪರಿವಾರ ದೈವಗಳ ದೈವಸ್ಥಾನ ಬಡೆಕ್ಕಾವುಗುತ್ತು ದೈವ ಕ್ಷೇತ್ರದಲ್ಲಿ ಅಪ್ಪೆ ಕಲ್ಲುರ್ಟಿ ದೈವದ ದೊಂದಿ ಕೋಲ ಮಾ.14 ರಂದು ನಡೆಯಿತು. ತಮ್ಮ ಇಷ್ಟಾರ್ಥಗಳ ಈಡೇರಿಕೆಗೆ ಅಪ್ಪೆ ಕಲ್ಲುರ್ಟಿ ದೈವದ ಮೊರೆ ಹೋದ ಭಕ್ತರ ಸಂಕಷ್ಟಗಳು ಹಾಗೂ ಅಭೀಷ್ಟೆಗಳು ನೆರವೇರಿದ ನಿದರ್ಶನಗಳು ಈ ಕ್ಷೇತ್ರದಲ್ಲಿದೆ. ಹಾಗಾಗಿ ಭಕ್ತರು ಹರಕೆ ರೂಪದಲ್ಲಿ ಅಪ್ಪೆ ಕಲ್ಲುರ್ಟಿ ದೈವಕ್ಕೆ ಮಲ್ಲಿಗೆ, ಸೀರೆಗಳನ್ನು ಸಲ್ಲಿಸಿದರು.

ದೈವನ್ನೇ ದೇವರು ಎಂದ ನಂಬುವ ತುಳುನಾಡಿನ ಮಂದಿ ಕಲ್ಲುರ್ಟಿ ದೈವದ ದೊಂದಿ ಕೋಲ ನೋಡಲು ಸಾವಿರಾರೂ ಮಂದಿ ಭಕ್ತರು ಸೇರಿದ್ದರು. ಬೆಳಿಗ್ಗೆ ಗ್ರಾಮ ದೈವ ಶ್ರೀ ಕೊಡಮಣಿತ್ತಾಯ ದೈವದ ಸಾಂಪ್ರದಾಯಿಕ ದೈವದ ಕಂಬಳ ಮೂಹೂರ್ತ ನಡೆಸಲಾಯಿತು.

ರಾತ್ರಿ ಕಲ್ಕುಡ-ಕಲ್ಲುರ್ಟಿ ದೈವದ ಚಾರಿತ್ರೆಯನ್ನು ಬಿಂಬಿಸುವ ಜೋಡು ಜೀಟಿಗೆ ಸತ್ಯೋದ ಸಾದಿಗ್ ಧರ್ಮೋದ ಬೊಲ್ಪು ತುಳು ಜನಪದ ನಾಟಕ ಪ್ರದರ್ಶನಗೊಂಡಿತು. ಸಾವಿರಕ್ಕೂ ಮಿಕ್ಕಿ ಜನಸಾಗರ ಸೇರಿತ್ತು.

ಬಡೆಕ್ಕಾವು ಗುತ್ತು ಮನೆತನದ ಮುಖ್ಯಸ್ಥ ರಕ್ಷಿತ್ ಅಜಿಲ, ಬಡೆಕ್ಕಾವು ಗುತ್ತು ಮನೆತನದವರು, ಅರ್ಚಕರು, ನಾವೂರು ಗುತ್ತು ಮನೆಯವರು, ಊರಿನ ಗುತ್ತು ಬರ್ಕೆಯವರು, ದೈವಗಳ ಪರಿಚಾರಕರು, ವಿಲಯದವರು ಪರವೂರಿನವರು ಮತ್ತು ನಾವೂರು ಗ್ರಾಮದ ಎಲ್ಲಾ ಗ್ರಾಮಸ್ಥರು ಉಪಸ್ಥಿತರಿದ್ದರು.

Related posts

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ದಾಸರಹಳ್ಳಿ ಶಾಸಕ ಮುನಿರಾಜು ಕುಟುಂಬ ಸಮೇತ ಭೇಟಿ

Suddi Udaya

ಚಂದ್ರಹಾಸ ಬಳಂಜರಿಂದ ಸಂವಹನ ಕೌಶಲ್ಯದ ಬಗ್ಗೆ ತರಬೇತಿ

Suddi Udaya

ಕುಂಟಿನಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಕೊಕ್ಕಡ: ಜೇಸಿ ಸಂಸ್ಥೆ ವಲಯ 15ರ ವಲಯಾಡಳಿತ ಸಭೆ

Suddi Udaya

ಉಜಿರೆ:ಎಸ್‌.ಡಿ.ಎಂ ಅಂತರಾಷ್ಟ್ರೀಯ ಯೋಗ ಮತ್ತು ನ್ಯಾಚುರೋಪತಿ ಸಮ್ಮೇಳನದ ಸಮಾರೋಪ

Suddi Udaya

ನಾರಾವಿ: ಶ್ರೀ ಕ್ಷೇತ್ರ ಧ. ಗ್ರಾ. ಯೋ. ಬಿಸಿ ಟ್ರಸ್ಟ್ ನಿಂದ ಚಿತ್ತಾರ ಕೇಂದ್ರಿಕೃತ ಭತ್ತ ನರ್ಸರಿಗೆ ಚಾಲನೆ

Suddi Udaya
error: Content is protected !!