ಲಾಯಿಲ : ಭಾರತ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜೀಯವರ 76 ನೇ ಹುಟ್ಟು ಹಬ್ಬದ ಪ್ರಯುಕ್ತ ಲಾಯಿಲ ಶಕ್ತಿ ಕೇಂದ್ರದ ಪರವಾಗಿ ಲಾಯಿಲ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಅವರ ಮುಂದಿನ ರಾಜಕೀಯ ಜೀವನಕ್ಕೆ, ಹಾಗೂ ಆಯುರಾರೋಗ್ಯಕಾಗಿ ದೇವರರಲ್ಲಿ ಪ್ರಾರ್ಥಿಸಲಾಯಿತು.

ಈ ಸಂದರ್ಭದಲ್ಲಿ ಶಕ್ತಿ ಕೇಂದ್ರ ಅಧ್ಯಕ್ಷ ಗಣೇಶ್ ಕನ್ನಾಜೆ, ಮಂಡಲ ಕಾರ್ಯದರ್ಶಿ ಗಿರೀಶ್ ಡೋಂಗ್ರೆ, ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಸುಧಾಕರ್ ಬಿ.ಎಲ್ ಲಾಯಿಲ, ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಅರವಿಂದ್ ಕುಮಾರ್, ತಾಲೂಕು ಯುವ ಮೋರ್ಚಾ ಉಪಾಧ್ಯಕ್ಷರಾದ ಗಣೇಶ್ ಆರ್, ಲಾಯಿಲ ಬೂತ್ 70 ರ ಅಧ್ಯಕ್ಷ ಮಹೇಶ್ ಕುಲಾಲ್, 69 ರ ಬೂತ್ ಅಧ್ಯಕ್ಷ ಭೋಜರಾಜ್ ಪ್ರಗತಿನಗರ, ಬೂತ್ 68 ರ ಕಾರ್ಯದರ್ಶಿ ಹರಿಕೃಷ್ಣ ಪುತ್ರಬೈಲು, 67 ರ ಕಾರ್ಯದರ್ಶಿ ಸುರೇಶ್ ಆರ್ ಉಪಸ್ಥಿತರಿದ್ದರು.











