ಮಡoತ್ಯಾರು: ಪಾರೆoಕಿ ಗ್ರಾಮದ ಹಾರಬೆ ಶ್ರೀ ದುಗಲಾಯ ಮತ್ತು ಗುಳಿಗ ದೈವಗಳ ನೇಮೋತ್ಸವ ಸಮಿತಿ ಶ್ರೀ ರಾಮ ನಗರ ಹಾರಬೆ ಮಡಂತ್ಯಾರು ವಾರ್ಷಿಕ ನೇಮೋತ್ಸವ ಮಾ.14 ರಂದು ಮoಜುನಾಥ ಭಟ್ ಅಸ್ರಣ್ಣರು ಅಂತರ ಮಾಲಾಡಿ ಅವರ ಉಪಸ್ಥಿತಿಯಲ್ಲಿ ಜರಗಿತು.
ಸಾಯಂಕಾಲ ಸತ್ಯನಾರಾಯಣ ಪೂಜೆ ವಿಧ್ಯಾಸರಸ್ವತಿ ಭಜನಾ ಮಂಡಳಿ ಪಾರೆoಕಿ ಇವರಿoದ ಕುಣಿತ ಭಜನಾ ಕಾರ್ಯಕ್ರಮ ರಾತ್ರಿ ದುಗಲಾಯ ಮತ್ತು ಗುಳಿಗ ದೈವಗಳ ನೇಮೋತ್ಸವ ಜರಗಿತು.

ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ ಹಾಗೂ ಗಣ್ಯರು ನೇಮೋತ್ಸವಕ್ಕೆ ಆಗಮಿಸಿ ಗoಧ ಪ್ರಸಾದ ಸ್ವೀಕರಿಸಿದರು ಸಮಿತಿಯ ಗೌರವಾಧ್ಯಕ್ಷ ವಿಶ್ವನಾಥ ಪೂಜಾರಿ, ಅಧ್ಯಕ್ಷ ಸುಧೀರ್ ಪಿ ಪೂಜಾರಿ ಹಾರಬೆ, ಕಾರ್ಯದರ್ಶಿ ಮಹೇಶ್ ಕುಲಾಲ್, ಕೋಶಾಧಿಕಾರಿ ಪ್ರಮೀಳಾ ಉಮೇಶ್, ಸಮಿತಿಯ ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು, ಭಕ್ತಾದಿಗಳು ಉಪಸ್ಥಿತರಿದ್ದರು.












