24.7 C
ಪುತ್ತೂರು, ಬೆಳ್ತಂಗಡಿ
August 5, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಮಾ.19: ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ರಾಮಾಯಣ ತರಗತಿ ಆರಂಭ

ನಾವೂರು: ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸೇವಾ ಟ್ರಸ್ಟ್ ನಾವೂರು ಇದರ ಆಶ್ರಯದಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಮಾ.19ರಂದು “ಚಾಂದ್ರಮಾನ ಯುಗಾದಿ” ಪರಾಭವ ನಾಮ ಸಂವತ್ಸರಾರಂಭದ ಅಂಗವಾಗಿ ಬೆಳಿಗ್ಗೆ ೮ರಿಂದ ದೀಪ ಪ್ರಜ್ವಲನ, ಸಾಮೂಹಿಕ ವಿಷ್ಣುಸಹಸ್ರನಾಮ ಪಠಣ ವಿಶೇಷ ಪೂಜೆ, ಪಂಚಾಂಗ ಶ್ರವಣ, ಬೇವು ಬೆಲ್ಲ ವಿತರಣೆ ಹಾಗೂ ಗೀತಾ ಗ್ರಾಮ ಅನುಷ್ಠಾನದ ಪ್ರಯುಕ್ತ ರಾಮಾಯಣ ತರಗತಿ ಆರಂಭವಾಗುವುದು ಎಂದು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸೇವಾ ಟ್ರಸ್ಟ್ ಅಧ್ಯಕ್ಷರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ದೀಪ ಪ್ರಜ್ವಲನೆಯನ್ನು ಲ್ಯಾಲ ಪ್ರಸನ್ನ ಎಜ್ಯುಕೇಶನಲ್ ಟ್ರಸ್ಟ್ ಅಧ್ಯಕ್ಷರಾದ ಪ್ರಸನ್ನ ಗಂಗಾಧರ ಗೌಡ ಮತ್ತು ಗಂಗಾಧರ ಗೌಡ ದಂಪತಿಗಳು ನೆರವೇರಿಸಲಿರುವರು. ನಿವೃತ್ತ ಪ್ರಾಚಾರ್ಯ ಗಣಪತಿ ಭಟ್ ಕುಳಮರ್ವ ಗೌರವ ಉಪಸ್ಥಿತಿ ವಹಿಸಲಿರುವರು.

ಪ್ರತಿ ಶನಿವಾರ ಸಂಜೆ ಗಂಟೆ 7.00 ರಿಂದ ಭಜನೆ, ರಾತ್ರಿ ಗಂಟೆ 8.00ರಿಂದ ವಿಷ್ಣುಸಹಸ್ರನಾಮ ತರಗತಿ ನಡೆಯಲಿರುವುದು ಹಾಗೂ ಮುಂದಿನ ದಿನಗಳಲ್ಲಿ ರಾಮಾಯಣ ತರಗತಿ ನಡೆಯಲಿದೆ. ಊರ ಪರವೂರ ಎಲ್ಲಾ ಭಗವದ್ಭಕ್ತರು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಪ್ರಕಟನೆಯಲ್ಲಿ ತಿಳಿಸಿದೆ.

Related posts

ಶ್ರೀ ಬಾಹುಬಲಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಮಹಾಸಭೆ: 130 ಕೋಟಿ ವ್ಯವಹಾರ- ರೂ.17.92 ಲಕ್ಷ ಲಾಭ -ಶೇ 14 ಡಿವಿಡೆಂಟ್

Suddi Udaya

ಗುರುವಾಯನಕೆರೆ: ಶಕ್ತಿನಗರ ನಿವಾಸಿ ಅಬ್ದುಲ್ ರಝಾಕ್ ಹೃದಯಾಘಾತದಿಂದ ನಿಧನ

Suddi Udaya

ವೇಣೂರು: ಪೆರಿಂಜೆ ನಿವಾಸಿ ಪಿ.ಎ.ಇಬ್ರಾಹಿಂ ನಿಧನ

Suddi Udaya

ನೀಟ್ ಯುಜಿ (NEET-UG) ಮರು ಪರೀಕ್ಷೆಯ ದಿನಾಂಕ ನಿಗದಿ

Suddi Udaya

ಉಜಿರೆ ಎಸ್.ಡಿ.ಎಮ್ ಬಿ. ವೋಕ್ ಡಿಜಿಟಲ್ ಮೀಡಿಯಾ ಮತ್ತು ಫಿಲ್ಮ್ ಮೇಕಿಂಗ್ ವಿಭಾಗದ ಲೂಮೋಸ್ ವಿದ್ಯಾರ್ಥಿ ಸಂಘದ ಶೈಕ್ಷಣಿಕ ವರ್ಷದ ಚಟುವಟಿಕೆಗಳಿಗೆ ಚಾಲನೆ

Suddi Udaya

ಕೊಯ್ಯೂರು- ಗೇರುಕಟ್ಟೆ ಮೂಲಕ ಬೆಳ್ತಂಗಡಿಗೆ ಬಸ್ಸು ಸೌಕರ್ಯಕ್ಕೆ ಮನವಿ

Suddi Udaya
error: Content is protected !!