25.7 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಮುಂಡಾಜೆ ಜಮಲುಲ್ಲೈಲಿ ಸುನ್ನಿ ಜುಮ್ಮಾ ಮಸ್ಜಿದ್ ನಲ್ಲಿ ಈದುಲ್ ಫಿತರ್ ಆಚರಣೆ

ಬೆಳ್ತಂಗಡಿ; ಜಮಲುಲ್ಲೈಲಿ ಸುನ್ನಿ ಜುಮ್ಮಾ ಮಸ್ಜಿದ್ ಮುಂಡಾಜೆಯಲ್ಲಿ ಸಂಭ್ರಮದ ಈದುಲ್ ಫಿತರ್ ಹಬ್ಬ ಆಚರಿಸಲಾಯಿತು.

ಖುತುಬಾ ಪಾರಾಯಣ ಮತ್ತು ಪೆರ್ನಾಲ್ ನಮಾಝ್ ಗೆ ನೇತೃತ್ವವನ್ನು ಖತೀಬ್ ಉಸ್ತಾದ್ ಸಿರಾಜುದ್ದೀನ್ ಸ‌ಅದಿ ಗಡಿಯಾರ್ ವಹಿಸಿದ್ದರು. ಸದರ್ ಉಸ್ತಾದ್ ತ್ವಾಹಿರ್ ಸ‌ಅದಿ ನಾವೂರು ಸಹಕಾರ ನೀಡಿದರು.

ಕಳೆದ 6 ತಿಂಗಳಿನಿಂದ ಕ್ರಮವಾಗಿ ಬೆಳಗ್ಗೆ ಮತ್ತು ಇಶಾಅ್ ನಮಾಝ್ ಗೆ ಆಗಮಿಸಿದ 9ನೇ ತರಗತಿ ವಿದ್ಯಾರ್ಥಿಗಳಾದ ಅಮಾನ್ ಮತ್ತು ಮುಹಮ್ಮದ್ ಶಾಝಿನ್ ಅವರಿಗೆ ವಿಶೇಷ ನಗದು ಪುರಸ್ಕಾರ ನೀಡಲಾಯಿತು.

ಎಲ್ಲಾ ದಿವಸಗಳಲ್ಲಿ ತರಾವೀಹ್ ನಮಾಝ್ ಗೆ ಆಗಮಿಸಿದ ಜಮಾಅತ್ ‌ನ ಹಿರಿಯರಾದ ಹಾಜಬ್ಬ ಸಿ, ಬಾವಾಕ ಬೆಳಾಲ್ ಮತ್ತು ಉಮರಬ್ಬ ಕನ್ಯಾಡಿ ಅವರನ್ನು ಶಾಲು ಹೊದಿಸಿ ನಗದಿನೊಂದಿಗೆ ಪುರಸ್ಕರಿಸಲಾಯಿತು. ಮದರಸ ವಿದ್ಯಾರ್ಥಿ ಮುಹಮ್ಮದ್ ಶುಜಾಹ್ ಅವರನ್ನೂ ನಗದಿನೊಂದಿಗೆ ಗುರುತಿಸಲಾಯಿತು.

ನಗದು ಬಹುಮಾನಗಳನ್ನು ಜಮಾಅತ್ ಅಧ್ಯಕ್ಷ, ಯುವ ಉದ್ಯಮಿ ಅಬ್ದುಲ್ ಬಶೀರ್ ನೆಕ್ಕರೆ ಪ್ರಾಯೋಜಿಸಿದರು.
ಕಾರ್ಯಕ್ರಮ ದಲ್ಲಿ ಕೆ.ಯು ಮುಹಮ್ಮದ್ ಸಖಾಫಿ, ಸಯ್ಯಿದ್ ಸಿನಾನ್ ಜಮಲುಲ್ಲೈಲಿ ತಂಙಳ್, ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಶುಭ ಕೋರಿದರು.

ಸಯ್ಯಿದ್ ಸಿನಾನ್ ಜಮಲುಲ್ಲೈಲಿ ತಂಙಳ್ ಸಹಿತ ಜಮಾಅತ್ ಬಾಂಧವರು, ಕಮಿಟಿ‌ ಪದಾಧಿಕಾರಿಗಳು, ಎಸ್ ಬಿ ಎಸ್, ಎಸ್ ವೈ ಎಸ್ , ಎಸ್ಸೆಸ್ಸೆಫ್, ಕೆಎಂಜೆ ಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts

ಉಜಿರೆ: ಎಸ್.ಡಿ.ಎಮ್ ಕಾಲೇಜಿನಲ್ಲಿ ವಿಶ್ವ ದೂರಸಂಪರ್ಕ ದಿನ: ವಿಶೇಷ ಉಪನ್ಯಾಸ

Suddi Udaya

ಕಂಡಿಗ ಗುತ್ತು ಶ್ರೀ ನಾಗಬ್ರಹ್ಮ ಸನ್ನಿದಿ ಹಾಗೂ ರಕ್ತೇಶ್ವರಿ ಕೊಡಮಣಿತ್ತಾಯ, ಪಿಲಿಚಾಮುಂಡಿ ಹಾಗೂ ಪರಿವಾರ ದೈವಗಳ ಚಾವಡಿ ಜೀರ್ಣೋದ್ಧಾರ ಸಮಿತಿ ರಚನೆ

Suddi Udaya

ಉಜಿರೆ ಹಳ್ಳಿ ಮನೆ ಪ್ರವೀಣ್ ಫೆರ್ನಾಂಡಿಸ್ ರವರ ತಂದೆ ಫ್ರಾನ್ಸಿಸ್ ಫೆರ್ನಾಂಡಿಸ್ ನಿಧನ

Suddi Udaya

ಎಂಸಿಎಫ್ ನ ಸಿ ಎಸ್ ಆರ್ ಆಕ್ಟಿವಿಟಿ ಯೋಜನೆ ಅಡಿಯಲ್ಲಿ ಪೆರಿಂಜೆ ಸ.ಹಿ.ಪ್ರಾ. ಶಾಲೆಯಲ್ಲಿ ನಿರ್ಮಿಸಲಾದ ನೂತನ ಶೌಚಾಲಯದ ಉದ್ಘಾಟನೆ

Suddi Udaya

ಉಜಿರೆ:ಎಸ್ ಡಿ ಎಮ್ ನಲ್ಲಿ ನೆನಪಿನಂಗಳ ಕಾರ್ಯಕ್ರಮ

Suddi Udaya

ಮಂಗಳೂರು ಬಿಜೈನಲ್ಲಿ ಸ್ನೇಹ ಲಂಚ್ ಹೋಮ್ ಶುಭಾರಂಭ

Suddi Udaya
error: Content is protected !!