25.1 C
ಪುತ್ತೂರು, ಬೆಳ್ತಂಗಡಿ
August 5, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಮುಂಡಾಜೆ ಜಮಲುಲ್ಲೈಲಿ ಸುನ್ನಿ ಜುಮ್ಮಾ ಮಸ್ಜಿದ್ ನಲ್ಲಿ ಈದುಲ್ ಫಿತರ್ ಆಚರಣೆ

ಬೆಳ್ತಂಗಡಿ; ಜಮಲುಲ್ಲೈಲಿ ಸುನ್ನಿ ಜುಮ್ಮಾ ಮಸ್ಜಿದ್ ಮುಂಡಾಜೆಯಲ್ಲಿ ಸಂಭ್ರಮದ ಈದುಲ್ ಫಿತರ್ ಹಬ್ಬ ಆಚರಿಸಲಾಯಿತು.

ಖುತುಬಾ ಪಾರಾಯಣ ಮತ್ತು ಪೆರ್ನಾಲ್ ನಮಾಝ್ ಗೆ ನೇತೃತ್ವವನ್ನು ಖತೀಬ್ ಉಸ್ತಾದ್ ಸಿರಾಜುದ್ದೀನ್ ಸ‌ಅದಿ ಗಡಿಯಾರ್ ವಹಿಸಿದ್ದರು. ಸದರ್ ಉಸ್ತಾದ್ ತ್ವಾಹಿರ್ ಸ‌ಅದಿ ನಾವೂರು ಸಹಕಾರ ನೀಡಿದರು.

ಕಳೆದ 6 ತಿಂಗಳಿನಿಂದ ಕ್ರಮವಾಗಿ ಬೆಳಗ್ಗೆ ಮತ್ತು ಇಶಾಅ್ ನಮಾಝ್ ಗೆ ಆಗಮಿಸಿದ 9ನೇ ತರಗತಿ ವಿದ್ಯಾರ್ಥಿಗಳಾದ ಅಮಾನ್ ಮತ್ತು ಮುಹಮ್ಮದ್ ಶಾಝಿನ್ ಅವರಿಗೆ ವಿಶೇಷ ನಗದು ಪುರಸ್ಕಾರ ನೀಡಲಾಯಿತು.

ಎಲ್ಲಾ ದಿವಸಗಳಲ್ಲಿ ತರಾವೀಹ್ ನಮಾಝ್ ಗೆ ಆಗಮಿಸಿದ ಜಮಾಅತ್ ‌ನ ಹಿರಿಯರಾದ ಹಾಜಬ್ಬ ಸಿ, ಬಾವಾಕ ಬೆಳಾಲ್ ಮತ್ತು ಉಮರಬ್ಬ ಕನ್ಯಾಡಿ ಅವರನ್ನು ಶಾಲು ಹೊದಿಸಿ ನಗದಿನೊಂದಿಗೆ ಪುರಸ್ಕರಿಸಲಾಯಿತು. ಮದರಸ ವಿದ್ಯಾರ್ಥಿ ಮುಹಮ್ಮದ್ ಶುಜಾಹ್ ಅವರನ್ನೂ ನಗದಿನೊಂದಿಗೆ ಗುರುತಿಸಲಾಯಿತು.

ನಗದು ಬಹುಮಾನಗಳನ್ನು ಜಮಾಅತ್ ಅಧ್ಯಕ್ಷ, ಯುವ ಉದ್ಯಮಿ ಅಬ್ದುಲ್ ಬಶೀರ್ ನೆಕ್ಕರೆ ಪ್ರಾಯೋಜಿಸಿದರು.
ಕಾರ್ಯಕ್ರಮ ದಲ್ಲಿ ಕೆ.ಯು ಮುಹಮ್ಮದ್ ಸಖಾಫಿ, ಸಯ್ಯಿದ್ ಸಿನಾನ್ ಜಮಲುಲ್ಲೈಲಿ ತಂಙಳ್, ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಶುಭ ಕೋರಿದರು.

ಸಯ್ಯಿದ್ ಸಿನಾನ್ ಜಮಲುಲ್ಲೈಲಿ ತಂಙಳ್ ಸಹಿತ ಜಮಾಅತ್ ಬಾಂಧವರು, ಕಮಿಟಿ‌ ಪದಾಧಿಕಾರಿಗಳು, ಎಸ್ ಬಿ ಎಸ್, ಎಸ್ ವೈ ಎಸ್ , ಎಸ್ಸೆಸ್ಸೆಫ್, ಕೆಎಂಜೆ ಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts

ಮದ್ದಡ್ಕ: ಹೆದ್ದಾರಿಯ ಕೆಲಸ ಕಾಮಗಾರಿಯಲ್ಲಿ ಮಾರ್ಗವನ್ನು ಎತ್ತರವಾಗಿಸಿದ್ದರಿಂದ ಪರಿಸರದ ಜನರಿಗೆ ತೊoದರೆ: ಮಾರ್ಗವನ್ನು ತಗ್ಗಿಸಿ ಕಾಮಗಾರಿ ನಡೆಸುವoತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ರವರಿಗೆ ಮನವಿ

Suddi Udaya

ಉಜಿರೆ ಶ್ರೀ.ಧ.ಮಂ ಆಂಗ್ಲ ಮಾಧ್ಯಮ ಶಾಲೆಗೆ (ರಾಜ್ಯಪಠ್ಯಕ್ರಮ) ಶೇ. 100 ಫಲಿತಾಂಶ

Suddi Udaya

ಶಿಶಿಲ ಕಪಿಲ ನದಿಯಲ್ಲಿ ಸಿಕ್ಕಿ ಹಾಕಿಕೊಂಡ ಮರಗಳ ತೆರವು

Suddi Udaya

ಡಿ.7 ಧರ್ಮಸ್ಥಳದಲ್ಲಿ ಪದಾಧಿಕಾರಿಗಳ ಸಹಮಿಲನ ಹಾಗೂ ವ್ಯಸನ ಮುಕ್ತರ ಕುಟುಂಬೋತ್ಸವ

Suddi Udaya

ಬೆಳ್ತಂಗಡಿ: ಜಾಮೀನು ಅರ್ಜಿ ಸಲ್ಲಿಸಿದ ಚಿನ್ನಯ್ಯ ಪರ ವಕೀಲರು

Suddi Udaya

ಕೊಕ್ಕಡ: ಅಲ್ಲಲ್ಲಿ ಮರ ಬಿದ್ದು, ವಿದ್ಯುತ್, ಮನೆಗಳಿಗೆ ಹಾನಿ: ತಕ್ಷಣ ಸ್ಪಂದಿಸಿದ ಹರೀಶ್ ಪೂಂಜ

Suddi Udaya
error: Content is protected !!