ಉಜಿರೆ: ಗೋವಿಂದ ದಾಸ ಕಾಲೇಜು ಸುರತ್ಕಲ್ ಇಲ್ಲಿ ನಡೆದ ಯಕ್ಷಯಾನ 2026 ಸ್ಪರ್ಧೆಯಲ್ಲಿ ಉಜಿರೆ ಎಸ್.ಡಿ.ಎಂ ಯಕ್ಷಗಾನ ಕಲಾಕೇಂದ್ರವು ತರಣಿಸೇನ ಕಾಳಗ ಎಂಬ ಪ್ರಸಂಗವನ್ನು ಪ್ರಸ್ತುತಪಡಿಸಿ ಸಮಗ್ರ ದ್ವಿತೀಯ ತಂಡ ಪ್ರಶಸ್ತಿಯನ್ನು ಪಡೆದಿರುತ್ತಾರೆ. ವೈಯಕ್ತಿಕ ವಿಭಾಗದಲ್ಲಿ ಕಿರೀಟವೇಷ ತೇಜಸ್, ಪುಂಡುವೇಷ ಮಿಥುನ್ ರಾಜ್, ಬಣ್ಣದ ವೇಷ ವಿಭಿನ್, ಪ್ರಥಮ ಮತ್ತು ಸ್ತ್ರೀ ವೇಷ ಅನನ್ಯ ದ್ವಿತೀಯ ಪ್ರಶಸ್ತಿಯನ್ನು ಪಡೆದಿರುತ್ತಾರೆ.

ಹಿಮ್ಮೇಳದಲ್ಲಿ ಭಾಗವತರಾಗಿ ಗಿರೀಶ್ ರೈ ಕಕ್ಯೆಪದವು,ಚೆಂಡೆಯಲ್ಲಿ ಆನಂದ ಗುಡಿಗಾರ್ ಕೆರ್ವಾಶೆ, ಮದ್ದಳೆಯಲ್ಲಿ ಶ್ರೇಯಸ್ ಪಾಳಂದೆ ಹಾಗೂ ಯಕ್ಷಗುರು ಅರುಣ್ ಕುಮಾರ್ ಧರ್ಮಸ್ಥಳ ನಿರ್ದೇಶನವನ್ನು ನೀಡಿರುತ್ತಾರೆ. ಪಾತ್ರಧಾರಿಗಳಾಗಿ ತೇಜಸ್(ಶ್ರೀರಾಮ), ಸುಮಂತ್(ಲಕ್ಷ್ಮಣ), ಅಮೋಘ ಶಂಕರ(ವಿಭೀಷಣ), ಮನಸ್ವಿ (ಹನುಮಂತ), ಶ್ರದ್ಧಾ(ಸುಗ್ರೀವ), ವಿಭಿನ್(ರಾವಣ), ಶ್ರೀಚರಣ್ (ದೂತ), ಮಿಥುನ್ ರಾಜ್(ತರಣಿಸೇನ), ಅನನ್ಯ(ಸರಮೆ), ರಾಹುಲ್ (ಸುಪಾರ್ಶ್ವಕ), ತೆರೆಯಲ್ಲಿ ಸಹನ, ಸಾಕ್ಷ ಹಾಗೂ ನೇಪಥ್ಯ ಕಲಾವಿದರಾಗಿ ಚಿಂತನ್, ಸ್ವಸ್ತಿಕ್ ಸಹಕರಿಸಿದರು.












