22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಸಂಘ-ಸಂಸ್ಥೆಗಳು

ಪತಂಜಲಿ ಯೋಗ ಶಾಖೆಯಲ್ಲಿ ಶ್ರೀ ರಾಮ ನವಮಿ ಆಚರಣೆ

ಬೆಳ್ತಂಗಡಿ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ, ಕೇಂದ್ರ ಕಚೇರಿ ತುಮಕೂರು ಮಂಗಳೂರು ವಿಭಾಗ ಪುತ್ತೂರು ತಾಲೂಕು ಕಳಿಯ ಶಾಖೆಯಲ್ಲಿ ಶ್ರೀರಾಮ್ ರಾಮನವಮಿ ಆಚರಣೆ ಮಾಡಲಾಯಿತು.

ಗೇರುಕಟ್ಟೆ ಕ್ಷೀರ ಸಂಗಮ ಸಭಾಭವನದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಶ್ರೀರಾಮ ಭಜನೆ, ಸ್ತೋತ್ರ ಪಾರಾಯಣವನ್ನು ಯೋಗ ಬಂಧುಗಳು ನಡೆಸಿಕೊಟ್ಟರು. ಭಾರತಿ ಎಂ. ಎಲ್, ಅರುಣಾ,ಪದ್ಮಲತಾ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು.

ಹಿರಿಯ ಯೋಗ ಬಂಧು ದಿವಾಕರ ಆಚಾರ್ಯ ಗೇರುಕಟ್ಟೆ, ಶ್ರೀರಾಮಚಂದ್ರನ ಆದರ್ಶಗುಣಗಳ ಬಗ್ಗೆ ಬೌದ್ಧಿಕ ನೀಡಿ ಮರ್ಯಾದ ಪುರುಷೋತ್ತಮ ಶ್ರೀರಾಮಚಂದ್ರನ ಆದರ್ಶ ಗುಣಗಳ ಪಾಲನೆಯನ್ನು ಮಾಡುವುದರಿಂದ ಶಾಂತಿ ಮತ್ತು ನೆಮ್ಮದಿಯನ್ನು ಕಾಣಬಹುದೆಂದು ತಿಳಿಸಿದರು.

ಅಶೋಕ ಆಚಾರ್ಯ ಪ್ರಸಾದ ವ್ಯವಸ್ಥೆ ಮಾಡಿದ್ದರು. ವರದಿ ಪ್ರಮುಖ ಕೇಶವ ಪೂಜಾರಿ ಸ್ವಾಗತಿಸಿ ಸತೀಶ್ ಭಂಡಾರಿ ನಾಳ ವಂದಿಸಿದರು.

Related posts

ಜು.20 ರಿಂದ ಉಜಿರೆ ಮಹಾವೀರ ಸಿಲ್ಕ್ಸ್ ಟೆಕ್ಸ್ ಟೈಲ್ಸ್ ಮತ್ತು ರೆಡಿಮೇಡ್ಸ್ ನಲ್ಲಿ ಆಷಾಢ ಆಟಿದ ಪರ್ಬ; ದರಕಡಿತ ಮಾರಾಟ

Suddi Udaya

ಬೆಳ್ತಂಗಡಿ ಶ್ರೀ ರತ್ನತ್ರಯ ಜೈನ ತೀರ್ಥಕ್ಷೇತ್ರ ಬಸದಿ ಸಂಬಂಧಿಸಿದ ನಾಗಬನದಲ್ಲಿ ವಿಶೇಷ ಪೂಜೆ

Suddi Udaya

ಕೊಯ್ಯೂರು ಬದಿನಡೆ ಶ್ರೀ ವನದುರ್ಗಾ ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವ: ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ,

Suddi Udaya

ಕೊಯ್ಯೂರು: ಪ್ರಗತಿಪರ ಕೃಷಿಕ ಲಿಂಗಪ್ಪ ಗೌಡ ಬಜಿಲ ನಿಧನ

Suddi Udaya

ಕರ್ನಾಟಕ ಶಾಸ್ತ್ರೀಯ ಸಂಗೀತ ಜೂನಿಯರ್ ಪರೀಕ್ಷೆ: ಸರ್ವಾರ್ಥ್ ಎಸ್. ಜೈನ್‌ ವೇಣೂರು ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆ

Suddi Udaya

ಕೊಕ್ಕಡ: ನಿವೃತ್ತ ಶಿಕ್ಷಕರ ಬೀಳ್ಕೊಡುಗೆ ಸಮಾರಂಭ ಹಾಗೂ ನಿವೃತ್ತ ಸೈನಿಕ ಕೆ. ಮಹಾಬಲರವರಿಗೆ ಅಭಿನಂದನೆ

Suddi Udaya
error: Content is protected !!