ಬೆಳ್ತಂಗಡಿ: ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ ಮಂಗಳೂರು ಗ್ರಾಮಾಂತರ ವ್ಯಾಪ್ತಿಯ ಬೆಳ್ತಂಗಡಿ ತಾಲೂಕಿನ ಬಾಜಾರುವಿನಲ್ಲಿ ನೂತನ ಎಸ್ಡಿಟಿಯು ಆಟೋ ಯೂನಿಯನ್ ರಚನೆ ಮಾಡಲಾಯಿತು.
ವೀಕ್ಷಕರರಾಗಿ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಸಲೀಮ್ ಜಿ.ಕೆ. ರವರು ಎಸ್ಡಿಟಿಯು ಆಟೋ ಯೂನಿಯನ್ನ ಬಗ್ಗೆ ಹಾಗೂ ಅದರ ಮಹತ್ವವನ್ನು ವಿವರಿಸಿದರು.
ನಂತರ ಎಸ್ಡಿಟಿಯು ಆಟೋ ಯೂನಿಯನ್ ಬಾಜಾರ್ ಘಟಕದ ಎಲ್ಲಾ ಸದಸ್ಯರಲ್ಲಿ ಚರ್ಚಿಸಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಅಬ್ದುಲ್ ರಝಾಕ್, ಉಪಾಧ್ಯಕ್ಷರಾಗಿ ಬಾತಿಷ್ ಬಾಜಾರ್, ಕಾರ್ಯದರ್ಶಿಯಾಗಿ ಮಹಮ್ಮದ್ ಕೆ, ಜತೆ ಕಾರ್ಯದರ್ಶಿಯಾಗಿ ಸುಧರ್ಶನ್ ಬಾಜಾರ್, ಕೋಶಾಧಿಕಾರಿಯಾಗಿ ಇಬ್ರಾಹಿಂ ಕುಟ್ಟಿಕ್ಕಳ, ಸಲಹೆಗಾರರಾಗಿ ರಶೀದ್ ಬದಿಬಿತ್ತಿಲು ರವರನ್ನು ಆಯ್ಕೆ ಮಾಡಲಾಯಿತು.
ಒಟ್ಟು 20 ಮಂದಿ ಆಟೋ ಚಾಲಕ ಮಾಲಕರು ಈ ಸಂಧರ್ಭದಲ್ಲಿ ಎಸ್ಡಿಟಿಯು ಆಟೋ ಯೂನಿಯನ್ನ ಸದಸ್ಯತ್ವವನ್ನು ಸ್ವೀಕರಿಸಿದರು.
ಅಬ್ದುಲ್ ರಝಾಕ್ ಸ್ವಾಗತಿಸಿ, ಮುಹಮ್ಮದ್ ಕೆ. ಧನ್ಯವಾದ ಗೈದರು.












