July 25, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಪೊಲೀಸ್ಪ್ರಮುಖ ಸುದ್ದಿಬೆಳ್ತಂಗಡಿರಾಜ್ಯ ಸುದ್ದಿರಾಷ್ಟ್ರೀಯ ಸುದ್ದಿವರದಿ

ಪುನೀತ್ ಕೆರೆಹಳ್ಳಿಯನ್ನು ಬಂಧಿಸಿ ಬೆಳ್ತಂಗಡಿ ಠಾಣೆಗೆ ಕರೆತಂದ ಪೊಲೀಸರು

ಬೆಳ್ತಂಗಡಿ: ಸಮಾಜದಲ್ಲಿ ದ್ವೇಷ ಉಂಟು ಮಾಡುವ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವನ್ನು ಪ್ರಸಾರಗೊಳಿಸಿದ ಪ್ರಕರಣಕ್ಕೆ ಸಂಬAಧಿಸಿದ್ದAತೆ ಮೂರು ಬಾರಿ ನೋಟಿಸ್ ನೀಡಿದರು ವಿಚಾರಣೆಗೆ ಹಾಜರಾಗದ ಹಿಂದೂ ಪರ ಕಾರ್ಯಕರ್ತ ಪುನೀತ್ ಕೆರೆಹಳ್ಳಿಯನ್ನು ಏ.೧೫ರಂದು ಬೆಳಗ್ಗೆ ಬೆಂಗಳೂರಿನಲ್ಲಿ ಬೆಳ್ತಂಗಡಿ ಪೊಲೀಸರು ಬಂಧಿಸಿ ಬಳಿಕ ಬೆಳ್ತಂಗಡಿ ಠಾಣೆಗೆ ಸಂಜೆ ಕರೆತಂದು ವಿಚಾರಣೆ ನಡೆಸಿದರು.

ಬೆಳ್ತಂಗಡಿಯ ಕಸಬಾ ಗ್ರಾಮದ ಹುಣ್ಸೆಕಟ್ಟೆ ನಿವಾಸಿ ಜೋರಮ್ ಬರ್ಬೋಝ ಎಂಬುವರು ೨೦೨೫ರ ಆಗಷ್ಟ್ ೭ ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಬಿಎನ್‌ಎಸ್ ೨೦೨೩ ಸೆಕ್ಸನ್ ೨೯೬ರಂತೆ ಪ್ರಕರಣ ದಾಖಲಾಗಿತ್ತು. ಬೆಂಗಳೂರಿನ ಬಸವನಗುಡಿ ಕಚೇರಿಯಲ್ಲಿ ಪುನೀತ್ ಕೆರೆಹಳ್ಳಿಯನ್ನು ಬಂಧಿಸಿದ ಪೊಲೀಸರು ಬೆಳ್ತಂಗಡಿ ಠಾಣೆಗೆ ಹಾಜರು ಪಡಿಸಿದರು. ಸೋಕೋ ತಂಡ ಪರಿಶೀಲನೆ ನಡೆಸಿತು.

ಪ್ರಕರಣದ ವಿವರ: ದೂರುದಾರ ಜೋರಮ್ ಬರ್ಬೋಝ ಎಂಬುವವರು ೦೭-೦೮-೨೦೨೫ ರಂದು ಸಮಯ ೧೧.೦೦ ಗಂಟೆಗೆ ತಮ್ಮ ಮೊಬೈಲ್‌ನಲ್ಲಿ ಸಾಮಾಜಿಕ ಜಾಲತಾಣವಾದ ಫೇಸ್ಟುಕ್‌ನಲ್ಲಿ ದೇಶಗಳನ್ನು ಪರಿಶೀಲಿಸುತ್ತಿರುವಾಗ ಪುನೀತ್ ಕರೆಹಳ್ಳಿ ಎಂಬಾತನು ಸಾಮಾಜಿಕ ಜಾಲತಾಣವಾದ ಯೂಟ್ಯೂಬ್‌ಲಿ, ‘ಧರ್ಮಸ್ಥಳದವರ ಮೇಲೆ ನೀನು ಕೈ ಎತ್ತಿನೋಡುವ, ಆಟೋ ರಿಕ್ಷಾದವಿಗೆ ಮುಟ್ಟಿಯಾ ನೀನು? ನೀನು ಅಪ್ಪನಿಗೆ ಹುಟ್ಟಿದ್ರೆ ಬೆರ್ಕೆಗೆ ಹುಟ್ಟಿದ್ರೆ ಬೇಡ..ಅಪ್ಪನಿಗೆ ಹುಟ್ಟಿದ್ರೆ ಮುಟ್ಟಿ ನೋಡೋಣ. ಆಮೇಲೆದ್ದು ಮುಂದಿನ ಚರಿತ್ರೆನ ನಾನು ಬರೀತಿನಿ, ಅಂಗಡಿಯನ್ನಿಗೆ ಧರ್ಮಸ್ಥಳದೊಳಕ್ಕೆ ನುಗ್ಗಿ ಹೊಡಿತನಂತೆ ರಿಕ್ಷಾದವಿಗೆ, ಏನ್ ಬಿಟ್ಟಿಬಿದ್ದಿದ್ದಿವಿ ಅಂಡ್ಕೊAಡಿದ್ಯಾ? ಎಲಿಯವರೆಗೆ ಕಟ್ಟಿದ ಬುರುಡೆ ಪುರಾಣಗಳೆಲ್ಲ ಮುಗೀತು, ಅಲ್ಲಿ ಏನು ಸಿಗ್ಲಿಲ್ಲ, ಈಗ ಹೊಸ ಕತೆ ಶುರು ಮಾಡಿದ್ರಾ. ನೀನು ನಿನ್ನ ಮುಟ್ಟಾಳ, ನಿನ್ನ ಕುಡುಕರ ಗ್ಯಾಂಗ್‌ನ್ನು ಕರ್ಕೊಂಡು ಬಾ ಅಪ್ಪನಿಗೆ ಹುಟ್ಟಿದ್ರೆ, ಬೆರ್ಕೆಗೆ ಹುಟ್ಟಿದ್ರೆ ಬೇಡ, ಅಪ್ಪನಿಗೆ ಹುಟ್ಟಿದ್ರೆ ಮುಟ್ಟಿ ನೋಡು, ನಾವು ತೋರಿಸ್ತೇವೆ ಏನು ಅಂತ “ಎಂಬುದಾಗಿ ಆಶ್ಲೀಲವಾಗಿ ಮಾತನಾಡಿರುವ ವೀಡಿಯೋದ ತುಣುಕನ್ನು ವಿದ್ಯುನ್ಮಾನ ಸಾಧನಗಳಾದ ಯೂಟ್ಯೂಬ್‌ನಲ್ಲಿ ಪ್ರಸಾರ ಮಾಡಿರುವುದಾಗಿದೆ.

Related posts

ಬೆಳ್ತಂಗಡಿ ಖಿಳರ್ ಜುಮ್ಮಾ ಮಸೀದಿ ಹಾಗೂ ಹಯಾತುಲ್ ಇಸ್ಲಾಂ ಮದರಸ ವತಿಯಿಂದ ನೂತನ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ

Suddi Udaya

ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ಆದಿತ್ಯ ನಾರಾಯಣ ಕೊಳ್ಳಾಜೆಯವರಿಂದ ಮತದಾನ

Suddi Udaya

ಬೆಳ್ಳಂಬೆಳಿಗ್ಗೆ ಮನೆಗೆ ನುಗ್ಗಿದ್ದ ನಾಲ್ವರು ಮುಸುಕುಧಾರಿಗಳು: ತಾಯಿ ಮಗಳಿಗೆ ಚಾಕು ತೋರಿಸಿ ಲಕ್ಷಾಂತರ ರೂ. ನಗ ನಗದು ದರೋಡೆ

Suddi Udaya

ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ವೇಣೂರು ಪೊಲೀಸರು

Suddi Udaya

ಉಜಿರೆ: ಶ್ರೀ ಶಾರದಾ ಪೂಜೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಬಳಂಜ ಬಿಲ್ಲವ ಸಂಘದಲ್ಲಿ, ಮಹಿಳಾ ಬಿಲ್ಲವ ವೇದಿಕೆಯ ನೇತೃತ್ವದಲ್ಲಿ ಆಟಿಡೊಂಜಿ‌ ದಿನ ಕಾರ್ಯಕ್ರಮ

Suddi Udaya
error: Content is protected !!