ಬೆಳ್ತಂಗಡಿ: ಇಂದಬೆಟ್ಟು ಗ್ರಾಮದ ಬಂಗಾಡಿ ಲಿಂಗತ್ಯಾರು ನಿವಾಸಿ ಪ್ರದೀಪ್ ಯಾನೆ ಪ್ರದೀನ್ ದೇವಾಡಿಗ ಇವರು ಏ.16ರಂದು ಮರದ ಗೆಲ್ಲು ಕಡಿಯುತ್ತಿದ್ದ ವೇಳೆ ಆಕಸ್ಮಿಕ ಗೆಲ್ಲು ಬಿದ್ದು ಕೈ ಮೂಳೆ ಮುರಿದು ಚಿಕಿತ್ಸೆ ಪಡೆದಿದ್ದರು. ಇವರದ್ದು ತೀರ ಬಡ ಕುಟುಂಬವಾಗಿದ್ದು ಇವರ ಕುಟುಂಬಕ್ಕೆ ಸ್ಥಳೀಯರೆಲ್ಲರೂ ಧನ ಸಹಾಯದ ಮೂಲಕ ಸಂಗ್ರಹ ಮಾಡಿದ 65,000/ಹಾಗೂ ಸಹನಶ್ರೀ ಫೌಂಡೇಶನ್ ಅಧ್ಯಕ್ಷ ರಾಜೇಶ್ ಪುದುಶೇರಿಯವರು 25,000/ಚೆಕ್ ಹಾಗೂ ಪ್ರಗತಿ ರೈಸ್ ಮಿಲ್ ಮಾಲಕರಾದ ಅಬ್ದುಲ್ ಸತ್ತಾರ್ 10,000/ಪ್ರದೀಪ್ ರವರಿಗೆ ಸ್ಥಳೀಯರ ಉಪಸ್ಥಿತಿಯಲ್ಲಿ ಸಂಗ್ರಹ ವಾದ ಮೊತ್ತವನ್ನು ನೀಡಲಾಯಿತು.







